ಬೊಮ್ಮಾಯಿ ಬಜೆಟ್ ಬಗ್ಗೆ ವ್ಯಂಗ್ಯ; ಬಜೆಟ್ ಪ್ರತಿಗೆ ಎಳ್ಳು ನೀರು ಬಿಟ್ಟು ಆಕ್ರೋಶ ಹೊರ ಹಾಕಿದ ಕಾಂಗ್ರೆಸ್
ಬಜೆಟ್ ಪ್ರತಿಗೆ ಎಳ್ಳು ನೀರು ಬಿಟ್ಟಿದ್ದಾರೆ. ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕತರು ಕಿವಿಗೆ ಹೂವು ಇಟ್ಟುಕೊಂಡು ಎಳ್ಳುನೀರು ಬಿಟ್ಟಿದ್ದಾರೆ.
2023 -24ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ಕಾಂಗ್ರೆಸ್ ನಾಯಕರು ಈಗಾಗಲೇ ಹಲವು ರೀತಿಯಲ್ಲಿ ಕಿಡಿಕಾರಿದ್ದಾರೆ. ಕಿವಿಯಲ್ಲಿ ಹೂವು ಇಟ್ಕೊಂಡು ವ್ಯಂಗ್ಯವಾಡಿದ ಬೆನ್ನಲ್ಲೇ ಇಂದು ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಬೊಮ್ಮಾಯಿ ಬಜೆಟ್ಗೆ ತರ್ಪಣ ಬಿಟ್ಟು ವಿಭಿನ್ನ ರೀತಿಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬಜೆಟ್ ಪ್ರತಿಗೆ ಎಳ್ಳು ನೀರು ಬಿಟ್ಟಿದ್ದಾರೆ. ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕತರು ಕಿವಿಗೆ ಹೂವು ಇಟ್ಟುಕೊಂಡು ಎಳ್ಳುನೀರು ಬಿಟ್ಟಿದ್ದಾರೆ.

