ಪಂದ್ಯದ ವೇಳೆ ಮೈದಾನದಲ್ಲೇ ಮೂತ್ರ ವಿಸರ್ಜಿಸಿದ ಫುಟ್ಬಾಲ್ ಆಟಗಾರ; ರೆಡ್ ಕಾರ್ಡ್ ತೋರಿದ ರೆಫರಿ

ಫುಟ್ಬಾಲ್ ಪಂದ್ಯದ ವೇಳೆ ಆಟಗಾರನೊಬ್ಬ ಮೈದಾನದಲ್ಲೇ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಪೆರುವಿನ ಫುಟ್ಬಾಲ್ ಮೈದಾನದಲ್ಲಿ ನಡೆದಿದೆ. ಅಟ್ಲೆಟಿಕೊ ತಂಡದ ಸೆಬಾಸ್ಟಿಯನ್ ಮುನೋಜ್ , ಮೈದಾನದ ಪಕ್ಕದಲ್ಲಿದ್ದ ಗೋಡೆಯತ್ತ ಮುಖ ಮಾಡಿ ಮೂತ್ರ ವಿಸರ್ಜಿಸಲು ಪ್ರಾರಂಭಿಸಿದ್ದಾನೆ.

ಪಂದ್ಯದ ವೇಳೆ ಮೈದಾನದಲ್ಲೇ ಮೂತ್ರ ವಿಸರ್ಜಿಸಿದ ಫುಟ್ಬಾಲ್ ಆಟಗಾರ; ರೆಡ್ ಕಾರ್ಡ್ ತೋರಿದ ರೆಫರಿ
|

Updated on:Aug 21, 2024 | 3:45 PM

ಫುಟ್ಬಾಲ್ ಪಂದ್ಯದ ವೇಳೆ ಆಟಗಾರನೊಬ್ಬ ಮೈದಾನದಲ್ಲೇ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಪೆರುವಿನ ಫುಟ್ಬಾಲ್ ಮೈದಾನದಲ್ಲಿ ನಡೆದಿದೆ. ವಾಸ್ತವವಾಗಿ ಅಟ್ಲೆಟಿಕೊ ಅವಾಝುನ್ ಮತ್ತು ಕ್ಯಾಂಟೊರ್ಸಿಲೊ ಫುಟ್ಬಾಲ್ ಕ್ಲಬ್ ನಡುವೆ ಕೋಪಾ ಪೆರು ಪಂದ್ಯ ನಡೆಯುತ್ತಿತ್ತು. ಈ ವೇಳೆ ಆಟದ 71 ನೇ ನಿಮಿಷದಲ್ಲಿ ಅಟ್ಲೆಟಿಕೊ ತಂಡಕ್ಕೆ ಕಾರ್ನರ್ ಸಿಕ್ಕಿತು. ಇದೇ ಸಮಯದಲ್ಲಿ, ಕ್ಯಾಂಟೊರ್ಸಿಲೊ ತಂಡದ ಗೋಲ್‌ಕೀಪರ್‌ಗೆ ಸಣ್ಣ ಗಾಯವಾಗಿದೆ. ಇದರಿಂದಾಗಿ ಕೊಂಚ ಸಮಯ ಆಟ ರದ್ದಾಗಿದೆ. ಒಂದೆಡೆ ಎಲ್ಲಾ ಆಟಗಾರರು ಗೋಲ್‌ಕೀಪರ್‌ ಇಂಜುರಿ ಬಗ್ಗೆ ಚಿಂತಿತರಾಗಿದ್ದರೆ, ಇತ್ತ ಕಾರ್ನರ್ ಧ್ವಜದ ಬಳಿ ನಿಂತಿದ್ದ ಅಟ್ಲೆಟಿಕೊ ತಂಡದ ಸೆಬಾಸ್ಟಿಯನ್ ಮುನೋಜ್ , ಇದ್ಯಾವುದು ನನಗೆ ಸಂಬಂಧವಿಲ್ಲದವನಂತೆ ಮೈದಾನದ ಪಕ್ಕದಲ್ಲಿದ್ದ ಗೋಡೆಯತ್ತ ಮುಖ ಮಾಡಿ ಮೂತ್ರ ವಿಸರ್ಜಿಸಲು ಪ್ರಾರಂಭಿಸಿದ್ದಾನೆ.

ರೆಡ್ ಕಾರ್ಡ್ ತೋರಿದ ರೆಫರಿ

ಅಟ್ಲೆಟಿಕೊ ಆಟಗಾರ ಮೈದಾನದಲ್ಲಿ ಮೂತ್ರ ವಿಸರ್ಜಿಸುತ್ತಿರುವುದನ್ನು ಕಂಡ ಕ್ಯಾಂಟೊರ್ಸಿಲೊ ತಂಡದ ಆಟಗಾರರು ಕೂಡಲೇ ಮ್ಯಾಚ್ ರೆಫರಿಗೆ ದೂರು ನೀಡಿದ್ದಾರೆ. ಆಟಗಾರನ ಈ ವರ್ತನೆಯನ್ನು ನೋಡಿದ ಮ್ಯಾಚ್ ರೆಫರಿ ಕೂಡ ಕೋಪಗೊಂಡರು. ತಕ್ಷಣ ಕ್ರಮ ಕೈಗೊಂಡು ರೆಫರಿ ಅಟ್ಲೆಟಿಕೊ ತಂಡದ ಸೆಬಾಸ್ಟಿಯನ್ ಮುನೋಜ್ ಅವರಿಗೆ ರೆಡ್ ಕಾರ್ಡ್ ತೋರಿಸಿದರು. ಹೀಗಾಗಿ ರೆಡ್ ಕಾರ್ಡ್ ಪಡೆದ ಸೆಬಾಸ್ಟಿಯನ್ ಮುನೋಜ್ ತಕ್ಷಣವೇ ಪಂದ್ಯದಿಂದ ಹೊರಬಿದ್ದಿದಲ್ಲದೆ, ಮುಂದಿನ ಪಂದ್ಯದಿಂದಲೂ ನಿಷೇಧಕ್ಕೊಳಗಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:44 pm, Wed, 21 August 24

Follow us
ವಿಡಿಯೋ: ಕ್ಯಾಮೆರಾ ನೋಡಿ, ಅಸಹ್ಯವಾಗಿ ಸಂಜ್ಞೆ ಮಾಡಿದ ದರ್ಶನ್
ವಿಡಿಯೋ: ಕ್ಯಾಮೆರಾ ನೋಡಿ, ಅಸಹ್ಯವಾಗಿ ಸಂಜ್ಞೆ ಮಾಡಿದ ದರ್ಶನ್
ಹೊಸದಾಗಿ ಸೇರ್ಪಡೆಯಾದ ಬಿಎಂಟಿಸಿ ಬಸ್​ಗಳ ವಿಶೇಷತೆ ಏನೇನು ಗೊತ್ತಾ?
ಹೊಸದಾಗಿ ಸೇರ್ಪಡೆಯಾದ ಬಿಎಂಟಿಸಿ ಬಸ್​ಗಳ ವಿಶೇಷತೆ ಏನೇನು ಗೊತ್ತಾ?
ಗಣೇಶ ಮೆರವಣಿಗೆ ವೇಳೆ ಕಲ್ಲೆಸೆತ: ಪ್ರತ್ಯಕ್ಷದರ್ಶಿಗಳಿಂದ ವಿವರವಾದ ಮಾಹಿತಿ
ಗಣೇಶ ಮೆರವಣಿಗೆ ವೇಳೆ ಕಲ್ಲೆಸೆತ: ಪ್ರತ್ಯಕ್ಷದರ್ಶಿಗಳಿಂದ ವಿವರವಾದ ಮಾಹಿತಿ
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?
ಮಂಡ್ಯ ಹಿಂಸಾಚಾರ: ನಾಗಮಂಗಲ ಘಟನೆ ಬಗ್ಗೆ ಎಸ್​ಪಿ ಹೇಳಿದ್ದೇನು ನೋಡಿ
ಮಂಡ್ಯ ಹಿಂಸಾಚಾರ: ನಾಗಮಂಗಲ ಘಟನೆ ಬಗ್ಗೆ ಎಸ್​ಪಿ ಹೇಳಿದ್ದೇನು ನೋಡಿ
‘ಕಿರುಕುಳ ಆದಾಗಲೇ ಹೇಳಿ, ಐದು ವರ್ಷ ಬಿಟ್ಟೇಕೆ ಬರುತ್ತೀರಿ’; ನಟಿಯ ಪ್ರಶ್ನೆ
‘ಕಿರುಕುಳ ಆದಾಗಲೇ ಹೇಳಿ, ಐದು ವರ್ಷ ಬಿಟ್ಟೇಕೆ ಬರುತ್ತೀರಿ’; ನಟಿಯ ಪ್ರಶ್ನೆ
ಸಾವಿನ ಮನೆಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರ
ಸಾವಿನ ಮನೆಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರ
Nithya Bhavishya: ಭಾದ್ರಪದ ಮಾಸದ ಗುರುವಾರದ ದಿನಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸದ ಗುರುವಾರದ ದಿನಭವಿಷ್ಯ ತಿಳಿಯಿರಿ
ಚಿತ್ರರಂಗದಲ್ಲಿ ನಟಿಯರ ನಡುವೆ ತಾರತಮ್ಯ: ಅಸಲಿ ವಿಚಾರ ತಿಳಿಸಿದ ಸಾಕ್ಷಿ ಮೇಘನ
ಚಿತ್ರರಂಗದಲ್ಲಿ ನಟಿಯರ ನಡುವೆ ತಾರತಮ್ಯ: ಅಸಲಿ ವಿಚಾರ ತಿಳಿಸಿದ ಸಾಕ್ಷಿ ಮೇಘನ
ಸಿನಿಮಾ ಬಿಡುಗಡೆ ಸಮಯದಲ್ಲಿ ನಟ ಕಿರಣ್ ರಾಜ್​ ಕಾರು ಅಪಘಾತ ಆಗಿದ್ದು ನಿಜವೇ?
ಸಿನಿಮಾ ಬಿಡುಗಡೆ ಸಮಯದಲ್ಲಿ ನಟ ಕಿರಣ್ ರಾಜ್​ ಕಾರು ಅಪಘಾತ ಆಗಿದ್ದು ನಿಜವೇ?