ಬೆಂಗಳೂರಿನ ಅಪಾರ್ಟ್ಮೆಂಟ್​ನಲ್ಲಿ ಶನಿವಾರ ಬೆಳಗಿನ ಜಾವ ಓಡಾಡಿರುವ ಚಿರತೆ ಪತ್ತೆಗೆ ದ್ರೋಣ್ ಬಳಕೆ

ಅರುಣ್​ ಕುಮಾರ್​ ಬೆಳ್ಳಿ

Updated on: Oct 30, 2023 | 7:06 PM

ದ್ರೋಣ್ ಚಿರತೆಯನ್ನು ಪತ್ತೆ ಮಾಡಲು ಸಹಾಯ ಮಾಡಬಹುದು, ಆದರೆ ಅದರೊಂದಿಗೆ ಕೂಂಬಿಂಗ್ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ನಡೆಸುವ ಅವಶ್ಯಕತೆಯಿದೆ. ಈ ಭಾಗದ ನಿವಾಸಿಗಳು ನೆಮ್ಮದಿಯಿಂದ ನಿದ್ದೆ ಮಾಡಬೇಕಾದರೆ, ರಾತ್ರಿ ಸಮಯದಲ್ಲಿ ನಿರಾತಂಕದಿಂದ ಓಡಾಡಬೇಕಾದರೆ, ವ್ಯಾಘ್ರನನ್ನು ಆದಷ್ಟು ಬೇಗ ಹಿಡಿಯಲೇಬೇಕು.

ಬೆಂಗಳೂರು: ಬೊಮ್ಮನಹಳ್ಳಿ ಸಿಂಗಸಂದ್ರಲ್ಲಿರುವ ಎಸಿಅಸ್ ಲೇಔಟ್ (ACS Layout) ಅಪಾರ್ಟ್ಮೆಂಟ್ ವೊಂದರ ಸೆಲ್ಲರ್ ಮತ್ತು ಮೊದಲ ಮಹಡಿಯಲ್ಲಿ ಅಕ್ಟೋಬರ್ 28 ರ ಬೆಳಗಿನ ಜಾವ ಚಿರತೆಯೊಂದು (leopard) ಓಡಾಡಿದ ದೃಶ್ಯ ಅಲ್ಲಿನ ನಿವಾಸಿಗಳನ್ನಯ ಭಯಗ್ರಸ್ತರನ್ನಾಗಿ ಮಾಡಿದೆ. ಆವರ ಆತಂಕ ಸಹಜವಾದದ್ದೇ ಮತ್ತು ಅದನ್ನು ಅರ್ಥ ಮಾಡಿಕೊಡಿರುವ ಅರಣ್ಯ ಇಲಾಖೆ ಸಿಬ್ಬಂದಿ (forest department staff) ಒಂದು ದ್ರೋಣ್ (drone) ಮೂಲಕ ಚಿರತೆಯನ್ನು ಪತ್ತೆ ಮಾಡುವ ಕೆಲಸ ಆರಂಭಿಸಿದ್ದಾರೆ. ಸಿಂಗಸಂದ್ರದಲ್ಲಿರುವ ಆಪಾರ್ಟ್ ಮೆಂಟ್ ಗಳ ನಡುವೆ ಸುಮಾರು ನಾಲ್ಕೂವರೆ ಎಕರೆಯಷ್ಟು ಅರಣ್ಯ ಪ್ರದೇಶವಿದ್ದು ಚಿರತೆ ಅಲ್ಲಿಂದಲೇ ಬಂದಿರಬಹುದು ಅಥವಾ ಅಲ್ಲೇ ಅಡಗಿರಬಹದು ಎಂದು ಶಂಕಿಸಲಾಗಿದೆ. ದ್ರೋಣ್ ಚಿರತೆಯನ್ನು ಪತ್ತೆ ಮಾಡಲು ಸಹಾಯ ಮಾಡಬಹುದು, ಆದರೆ ಅದರೊಂದಿಗೆ ಕೂಂಬಿಂಗ್ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ನಡೆಸುವ ಅವಶ್ಯಕತೆಯಿದೆ. ಈ ಭಾಗದ ನಿವಾಸಿಗಳು ನೆಮ್ಮದಿಯಿಂದ ನಿದ್ದೆ ಮಾಡಬೇಕಾದರೆ, ರಾತ್ರಿ ಸಮಯದಲ್ಲಿ ನಿರಾತಂಕದಿಂದ ಓಡಾಡಬೇಕಾದರೆ, ವ್ಯಾಘ್ರನನ್ನು ಆದಷ್ಟು ಬೇಗ ಹಿಡಿಯಲೇಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 30, 2023 06:59 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.