Siddaramaiah in Mysuru: ಅಭಿಮಾನಿಯ ಕಾರಲ್ಲಿ ವಿರೋಧ ಪಕ್ಷದ ನಾಯಕರ ಮೈಸೂರು ನಗರ ಪ್ರದಕ್ಷಿಣೆ
ಹೊಸ ಕಾರೊಂದನ್ನು ಖರೀದಿಸಿರುವ ಅಭಿಮಾನಿಗೆ ಅದರಲ್ಲಿ ಸಿದ್ದರಾಮಯ್ಯ ಕುಳಿತು ಪ್ರಯಾಣಿಸಬೇಕೆಂಬ ಉತ್ಕಟ ಆಸೆಯಿತ್ತಂತೆ. ಆದರೆ ಅವರು ಕಾರು ಹತ್ತುವ ಮೊದಲು ವಾಹನದ ಸಂಪೂರ್ಣ ತಪಾಸಣೆ ನಡೆಸಲಾಯಿತು.
ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddaramaiah) ಕಳೆದೆರಡು ದಿನಗಳಿಂದ ಮೈಸೂರಲ್ಲೇ ಕಾಣಿಸುತ್ತಿದ್ದಾರೆ. ಶುಕ್ರವಾರ ಅವರು ಅಗಲಿದ ತಮ್ಮ ಆಪ್ತ ಸ್ನೇಹಿತ ಪ ಮಲ್ಲೇಶ್ (Pa Mallesh) ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇಂದು ಅಂದರೆ ಶನಿವಾರ ಅಭಿಮಾನಿಯೊಬ್ಬರ ಕಾರಲ್ಲಿ ನಗರದ ಸುತ್ತು ಹಾಕಿದರು. ಹೊಸ ಕಾರೊಂದನ್ನು ಖರೀದಿಸಿರುವ ಅಭಿಮಾನಿಗೆ ಅದರಲ್ಲಿ ಸಿದ್ದರಾಮಯ್ಯ ಕುಳಿತು ಪ್ರಯಾಣಿಸಬೇಕೆಂಬ ಉತ್ಕಟ ಆಸೆಯಿತ್ತಂತೆ. ಆದರೆ ಅವರು ಕಾರು ಹತ್ತುವ ಮೊದಲು ವಾಹನದ ಸಂಪೂರ್ಣ ತಪಾಸಣೆ ನಡೆಸಲಾಯಿತು. ಎಲ್ಲ ಓಕೆ ಅಂತಾದ ಬಳಿಕವೇ ಮಾಜಿ ಮುಖ್ಯಮಂತ್ರಿಗಳು ಕಾರಲ್ಲಿ ಕುಳಿತರೆ ಅಲ್ಲು ಅರ್ಜುನ್ (Allu Arjun) ಥರ ಕಾಣುವ ಅಭಿಮಾನಿಯ ಕುಟುಂಬ ಸದಸ್ಯರು ಹಿಂಭಾಗದಲ್ಲಿ ಕುಳಿತರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

ವಿದ್ಯಾರ್ಥಿಗಳು ತಾಂಬೂಲ ಚವಣ ಮಾಡುವುದ್ದು ನಿಷಿದ್ಧ ಯಾಕೆ ? ವಿಡಿಯೋ ನೋಡಿ

Daily horoscope: ಮಂಗಳವಾರ, ಈ ದಿನ 12 ರಾಶಿಗಳ ಫಲಾಫಲಗಳನ್ನು ತಿಳಿಯಿರಿ

ಡಿಆರ್ಐ ಅಧಿಕಾರಿಗಳ ಕಸ್ಟಡಿ ಅಂತ್ಯ: ರನ್ಯಾ ರಾವ್ ಮತ್ತೆ ಜೈಲಿಗೆ

ಹೆಂಡತಿಯ ಪೋಸ್ಟಿಂಗ್ಗಾಗಿ ಪಟ್ಟ ಪಡಿಪಾಟಲು ಹೇಳಿಕೊಂಡ: ಶರಣು ಸಲಗರ
