ಬಯಲಾಟದ ಪಾತ್ರಧಾರಿಗಳೊಂದಿಗೆ ಕುಣಿದು ಕುಪ್ಪಳಿಸಿ ಜನರನ್ನು ರಂಜಿಸಿದ ಶ್ರೀರಾಮುಲು

Updated on: May 24, 2024 | 10:58 AM

ಅವರ ಕುಣಿತ ನೋಡಿ, ಕೈಯಲ್ಲಿ ಖಡ್ಗ ಹಿರಿದು ಅಕ್ಷರಶಃ ಬಯಲಾಟದ ಪಾತ್ರಧಾರಿಯತೆ ಹೆಜ್ಜೆ ಹಾಕುತ್ತಾರೆ. ತಮ್ಮ ಜನನಾಯಕ ವೇದಿಕೆ ಮೇಲೆ ಹಾಗೆ ಕುಣಿದರೆ, ಜನರ ಶಿಳ್ಳು, ಚಪ್ಪಾಳೆ ಮಿಸ್ಸಾಗೋದು ಸಾಧ್ಯವೇ? ಜನ ಮತ್ತು ಶ್ರೀರಾಮುಲು ಬಯಲಾಟವನ್ನು ಭಾರೀ ಎಂಜಾಯ್ ಮಾಡಿದ್ದರಲ್ಲಿ ಎರಡು ಮಾತಿಲ್ಲ.

ಬಳ್ಳಾರಿ: ತಮ್ಮ ಕಾಲೇಜು ದಿನಗಳಲ್ಲಿ ಸಿನಿಮಾ ನಟನಾಗುವ ಆಸೆಯಿತ್ತು ಎಂದು ಹಿಂದೊಮ್ಮೆ ಮಾಜಿ ಶಾಸಕ ಬಿ ಶ್ರೀರಾಮುಲು (B Sriramulu) ಹೇಳಿದ್ದರು. ಅವರ ಆಸೆ ಕೈಗೂಡಲಿಲ್ಲ, ರಾಜಕೀಯಕ್ಕೆ ಬಂದು ರಾಜ್ಯದ ಮಂತ್ರಿ (Minister) ಆದರು. ಆದರೆ, ಸಿನಿಮಾ ಮತ್ತು ನಾಟಕದ ಗೀಳು ಅವರಲ್ಲಿ ಈಗಲೂ ಇದೆ. ನಿನ್ನೆ ಬಳ್ಳಾರಿ ತಾಲ್ಲೂಕಿನ ಹಡ್ಲಿಗಿ ಗ್ರಾಮದಲ್ಲಿ (Hadligi) ಆಯೋಜಿಸಲಾಗಿದ್ದ ಬಯಲಾಟ ಕಾರ್ಯಕ್ರಮವೊಂದರಲ್ಲಿ ಪಾತ್ರಧಾರಿಗಳ ಅವರು ಜೊತೆ ಕುಣಿದರು. ಕರಾವಳಿ ಮತ್ತು ಮಲ್ನಾಡು ಪ್ರದೇಶಗಳ ಯಕ್ಷಗಾನದಂತೆ ಉತ್ತರ ಕರ್ನಾಟಕದಲ್ಲಿ ಬಯಲಾಟ, ದೊಡ್ಡಾಟಗಳನ್ನು ಆಯೋಜಿಸಲಾಗುತ್ತದೆ ಮತ್ತು ಜನರಲ್ಲಿ ಅವುಗಳ ಬಗ್ಗೆ ಈಗಲೂ ಕ್ರೇಜ್ ಇದೆ. ಶ್ರೀರಾಮುಲು ಬಯಲಾಟಗಳನ್ನು ನೋಡುತ್ತಾ ಬೆಳೆದವರು. ಹಾಗಾಗಿ ಬಯಲಾಟದ ವೇದಿಕೆ ನೋಡಿದಾಕ್ಷಣ ಅವರಿಗೆ ತಮ್ಮಲ್ಲಿ ಹುದುಗಿದ್ದ ಆಸೆಯನ್ನು ಅನಾವರಣಗೊಳಿಸಿಕೊಳ್ಳುವ ಆಸೆ ಹುಟ್ಟಿರಬಹುದು. ಅವರ ಕುಣಿತ ನೋಡಿ, ಕೈಯಲ್ಲಿ ಖಡ್ಗ ಹಿರಿದು ಅಕ್ಷರಶಃ ಬಯಲಾಟದ ಪಾತ್ರಧಾರಿಯತೆ ಹೆಜ್ಜೆ ಹಾಕುತ್ತಾರೆ. ತಮ್ಮ ಜನನಾಯಕ ವೇದಿಕೆ ಮೇಲೆ ಹಾಗೆ ಕುಣಿದರೆ, ಜನರ ಶಿಳ್ಳು, ಚಪ್ಪಾಳೆ ಮಿಸ್ಸಾಗೋದು ಸಾಧ್ಯವೇ? ಜನ ಮತ್ತು ಶ್ರೀರಾಮುಲು ಬಯಲಾಟವನ್ನು ಭಾರೀ ಎಂಜಾಯ್ ಮಾಡಿದ್ದರಲ್ಲಿ ಎರಡು ಮಾತಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬಿಜೆಪಿಯೊಂದಿಗೆ ಕೆಆರ್​ಪಿಪಿಯನ್ನು ವಿಲೀನಗೊಳಿಸಿದ ಜನಾರ್ಧನರೆಡ್ಡಿ, ಶ್ರೀರಾಮುಲುರನ್ನು ಆತ್ಮೀಯ ಸ್ನೇಹಿತ ಎಂದರು!

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More