AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Belagavi: ಮಲಪ್ರಭಾ ನದಿ ಉಕ್ಕಿ ಹರಿಯುತ್ತಿರುವುದು ನಿಜವಾದರೂ ವಿಳಂಬಿತ ಮಾನ್ಸೂನ್​ನಿಂದ ಆತಂಕದಲ್ಲಿ ಬೆಳಗಾವಿಯ ಅನ್ನದಾತ!

Belagavi: ಮಲಪ್ರಭಾ ನದಿ ಉಕ್ಕಿ ಹರಿಯುತ್ತಿರುವುದು ನಿಜವಾದರೂ ವಿಳಂಬಿತ ಮಾನ್ಸೂನ್​ನಿಂದ ಆತಂಕದಲ್ಲಿ ಬೆಳಗಾವಿಯ ಅನ್ನದಾತ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 19, 2023 | 12:44 PM

ಉಕ್ಕಿ ಹರಿಯುತ್ತಿರುವ ಮಲಪ್ರಭೆ ಜಿಲ್ಲೆಯಲ್ಲಿ ಕೃಷಿಗೆ ಸಂಬಂಧಿಸಿದ ನೈಜ ಚಿತ್ರಣವನ್ನು ನೀಡದು.

ಬೆಳಗಾವಿ: ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ (Kalyana Karnataka) ಪ್ರಾಂತ್ಯಗಳಲ್ಲಿ ವಿಳಂಬಗೊಂಡಿದ್ದ ಮಾನ್ಸೂನ್ ಮಳೆ ಈಗ ಸುರಿಯಲಾರಂಭಿಸಿದೆ. ಜಿಲ್ಲೆಯ ಖಾನಾಪುರ ತಾಲ್ಲೂಕಿನ ಹೆಬ್ಬಾನಟ್ಟಿ ಮೂಲಕ ಹರಯುವ ಮಲಪ್ರಭಾ ನದಿ (Malaprabha River) ಉಕ್ಕಿ ಹರಿಯುತ್ತಿರುವುದನ್ನು ಕಂಡು ಪ್ರದೇಶಗಳಲ್ಲಿ ಜೋರು ಮಳೆಯಾಗುತ್ತಿದೆ ಅಂತ ಭಾವಿಸಬೇಡಿ. ಪಶ್ಚಿಮ ಘಟ್ಟ ಪ್ರದೇಶದಲ್ಲಿ (Western Ghats region) ಮಳೆ ಧಾರಾಕಾರವಾಗಿ ಸುರಿಯುತ್ತಿರುವುದರಿಂದ ಮಲಪ್ರಭೆಗೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ನದಿ ಉಕ್ಕಿ ಹರಿಯುತ್ತಿರುವುದರಿಂದ ಹೆಬ್ಬಾನಟ್ಟಿ ಗ್ರಾಮದಲ್ಲ್ಲಿರುವ ಮಾರುತಿ ಮಂದಿರ ಮತ್ತು ರಾಮಮಂದಿರಗಳು ಮುಕ್ಕಾಲು ಭಾಗದಷ್ಟು ಮುಳುಗಡೆಯಾಗಿವೆ. ಬೆಳಗಾವಿ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಕುಂಠಿತಗೊಂಡಿದೆ ಮತ್ತು ರೈತರು ಬರಗಾಲ ಎದುರಿಸುವ ಆತಂಕದಲ್ಲಿದ್ದಾರೆ. ಜಿಲ್ಲಾ ಕೃಷಿ ಇಲಾಖೆ ಮೂಲಗಳ ಪ್ರಕಾರ ಇದುವರೆಗೆ ಶೇಕಡ 65 ರಷ್ಟು ಮಾತ್ರ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಉಕ್ಕಿ ಹರಿಯುತ್ತಿರುವ ಮಲಪ್ರಭೆ ಜಿಲ್ಲೆಯಲ್ಲಿ ಕೃಷಿಗೆ ಸಂಬಂಧಿಸಿದ ನೈಜ ಚಿತ್ರಣವನ್ನು ನೀಡದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ