ಗದಗ: ದಯವಿಟ್ಟು ಭತ್ಯೆ ಕೊಡಿಸಿ ಎಂದು ವೈದ್ಯಕೀಯ ಶಿಕ್ಷಣ ಸಚಿವರ ಕಾಲಿಗೆ ಬಿದ್ದ ಜಿಮ್ಸ್ ಸಿಬ್ಬಂದಿ
ಗದಗಕ್ಕೆ ಬಂದಿದ್ದ ಸಚಿವರ ಬಳಿ, ‘ಕೊವಿಡ್ ಸಮಯದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದ್ದೇವೆ. ಪ್ರೋತ್ಸಾಹಧನದ ರೂಪದಲ್ಲಿ ಸರ್ಕಾರ ರಿಸ್ಕ್ ಅಲೋಯನ್ಸ್ ಘೋಷಿಸಿತ್ತು. ಆದರೆ, ಸರ್ಕಾರದಿಂದ ಹಣ ಮಂಜೂರಾಗಿದ್ರೂ ವೈದ್ಯಾಧಿಕಾರಿಗಳು ಮಾತ್ರ ನೀಡಿಲ್ಲ.
ಗದಗ, ಆ.27: ಇಂದು(ಆ.27) ವೈದ್ಯಕೀಯ ಸಮ್ಮೇಳನದಲ್ಲಿ ಭಾಗಿಯಾಗಲು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ (Sharanprakash Patil) ಗದಗಕ್ಕೆ (Gadag) ಬಂದಿದ್ದರು. ಈ ವೇಳೆ ಕೊವಿಡ್ ವೇಳೆ ಕರ್ತವ್ಯ ನಿರ್ವಹಿಸಿದವರಿಗೆ ಭತ್ಯೆ ನೀಡುವಂತೆ ಜಿಮ್ಸ್ ಸಿಬ್ಬಂದಿಗಳು ಕಾಲಿಗೆ ಬಿದ್ದು ಮನವಿ ಮಾಡಿಕೊಂಡರು. ಹೌದು, ಗದಗಕ್ಕೆ ಬಂದಿದ್ದ ಸಚಿವರ ಬಳಿ, ‘ಕೊವಿಡ್ ಸಮಯದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದ್ದೇವೆ. ಪ್ರೋತ್ಸಾಹಧನದ ರೂಪದಲ್ಲಿ ಸರ್ಕಾರ ರಿಸ್ಕ್ ಅಲೋಯನ್ಸ್ ಘೋಷಿಸಿತ್ತು. ಆದರೆ, ಸರ್ಕಾರದಿಂದ ಹಣ ಮಂಜೂರಾಗಿದ್ರೂ ವೈದ್ಯಾಧಿಕಾರಿಗಳು ಮಾತ್ರ ನೀಡಿಲ್ಲ. ಗದಗ ಆಸ್ಪತ್ರೆ ವೈದ್ಯಾಧಿಕಾರಿಗಳು ಇನ್ನೂ ರಿಸ್ಕ್ ಅಲೋಯನ್ಸ್ ಕೊಟ್ಟಿಲ್ಲ. ಆದ್ದರಿಂದ ಕೊವಿಡ್ ರಿಸ್ಕ್ ಅಲೋಯನ್ಸ್ ಕೊಡಿಸಿ ಎಂದು ಡಿ ಗ್ರೂಪ್ ಸಿಬ್ಬಂದಿಯವರು ಮನವಿ ಮಾಡಿಕೊಂಡರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us