ಸುದೀಪ್ ಬರುವ ಮೊದಲೇ ಗಿಲ್ಲಿಯ ‘ಕೆಂಪೇಗೌಡ’ ಮೀಸೆ ಬೋಳಿಸಿದ ಸ್ಪರ್ಧಿಗಳು
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಗಿಲ್ಲಿ ನಟ ಗಮನ ಸೆಳೆಯುತ್ತಿದ್ದಾರೆ. ಅವರು ಇತ್ತೀಚೆಗೆ ದೊಡ್ಡದಾಗಿ ಮೀಸೆ ಮಾಡಿಕೊಂಡಿದ್ದರು. ಅವರು ಈಗ ಸುದ್ದಿ ಆಗಿದ್ದಾರೆ. ಮನೆಯ ಎಲ್ಲಾ ಸ್ಪರ್ಧಿಗಳು ಸೇರಿ ಗಿಲ್ಲಿ ನಟನ ಮೀಸೆ ಬೋಳಿಸಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ.
‘ಕೆಂಪೇಗೌಡ’ ಸಿನಿಮಾದಲ್ಲಿ ಸುದೀಪ್ ಅವರ ಮೀಸೆ ಸಾಕಷ್ಟು ಗಮನ ಸೆಳೆದಿತ್ತು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರದ ಬಳಿಕ ಅನೇಕರು ಸುದೀಪ್ ರೀತಿಯೇ ಮೀಸೆ ಬಿಟ್ಟಿದ್ದರು. ಗಿಲ್ಲಿ ನಟ ಕೂಡ ಇದನ್ನೇ ಅನುಕರಿಸಿದ್ದರು. ಈಗ ಸುದೀಪ್ ಬರುವ ಮೊದಲೇ ಇದಕ್ಕೆ ಕತ್ತರಿ ಬಿದ್ದಿದೆ. ಅನೇಕರು ಇದಕ್ಕೆ ಸಹಾಯ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
