AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಧ್ರಪ್ರದೇಶದ ಕರಾವಳಿ ಪ್ರದೇಶದಲ್ಲಿ ತೇಲಿಬಂದ ಹೊನ್ನಿನ ಬಣ್ಣದ ರಥವನ್ನು ಪೊಲೀಸರು ವಶಕ್ಕೆ ಪಡೆದರು!

ಆಂಧ್ರಪ್ರದೇಶದ ಕರಾವಳಿ ಪ್ರದೇಶದಲ್ಲಿ ತೇಲಿಬಂದ ಹೊನ್ನಿನ ಬಣ್ಣದ ರಥವನ್ನು ಪೊಲೀಸರು ವಶಕ್ಕೆ ಪಡೆದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: May 11, 2022 | 10:33 PM

Share

ರಥದ ಬಗ್ಗೆ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿರುವ ಶ್ರೀಕಾಕುಳಂನ ಜಿಲ್ಲಾಧಿಕಾರಿ ಶ್ರೀಕೇಶ್ ಬಿ ಲತಾಕರ್ ಅವರು ರಥವು ಚಿನ್ನದ್ದಲ್ಲ, ಹಳದಿ ಬಣ್ಣದ್ದಾಗಿರುವುದರಿಂದ ಎಲ್ಲರೂ ಅದನ್ನು ಚಿನ್ನದೆಂದು ಭಾವಿಸಿದ್ದಾರೆ. ಸದ್ಯಕ್ಕೆ ರಥವು ಪೊಲೀಸರ ವಶದಲ್ಲಿದೆ ಎಂದು ಹೇಳಿದ್ದಾರೆ.

ಶ್ರೀಕಾಕುಳಂ:  ಅಸಾನಿ ಚಂಡಮಾರುತದ (Asani Cyclone) ಪ್ರಭಾವದಿಂದ ಒಂದೇ ಸಮನೆ ಮಳೆ ಸುರಿಯುತ್ತಿರುವ ಆಂಧ್ರ ಪ್ರದೇಶದ ಕರಾವಳಿ ಪ್ರದೇಶದಲ್ಲಿ ಮಂಗಳವಾರದಂದು ಕೌತುಕಮಯ (mysterious) ಘಟನೆಯೊಂದು ಸಂಭವಿಸಿದೆ. ರಾಜ್ಯದ ಶ್ರೀಕಾಕುಳಂ ಜಿಲ್ಲೆಯ ಸುನ್ನಪಲ್ಲಿ (Sunnapalli) ಬಂದರು ಪ್ರದೇಶದಲ್ಲಿ ಒಂದು ಹೊನ್ನಿನ ತೇರು ಸಮುದ್ರದಲ್ಲಿ ತೇಲಿಕೊಂಡು ತೀರದ ಹತ್ತಿರ ಬಂದುಬಿಟ್ಟಿದೆ. ಅದು ಕಾಣುತ್ತಲೇ ತೀರದಲ್ಲಿದ್ದ ಜನ ಗಾಳಿ ಮಳೆ ಲೆಕ್ಕಿಸದೆ ಸಮುದ್ರಕ್ಕಿಳಿದು ಅದನ್ನು ತೀರಕ್ಕೆ ಎಳೆತಂದಿದ್ದಾರೆ. ಅಲ್ಲಿರುವ ಜನರೆಲ್ಲ ಆದನ್ನು ಹೊನ್ನಿನ ತೇರು ಅಂತ ಕರೆಯಲಾರಂಭಿಸಿದಾಗ ಸುದ್ದಿ ಪೊಲೀಸರಿಗೆ ಮುಟ್ಟಿ ಅವರು ಸ್ಥಳಕ್ಕೆ ಧಾವಿಸಿದ್ದಾರೆ. ಸದರಿ ವಿಡಿಯೋ ವೈರಲ್ ಆಗಿದೆ ಮಾರಾಯ್ರೇ. ನೆಟ್ಟಿಗರು ಇದನ್ನು ತಮ್ಮ ಖಾತೆಗಳಲ್ಲಿ ಪೋಸ್ಟ್ ಮಾಡಿ ‘ಸಮುದ್ರದಲ್ಲಿ ಚಿನ್ನದ ತೇರು ಸಿಕ್ಕಿದೆ’ ಅಂತ ಒಕ್ಕಣಿಕೆ ನೀಡಿದ್ದಾರೆ.

ಆದರೆ ಸ್ಥಳೀಯ ಅಧಿಕಾರಿಗಳಿಂದ ನಮಗೆ ಲಭ್ಯವಾಗಿರುವ ಮಾಹಿತಿ ಏನೆಂದರೆ ಈ ರಥ ಹೊನ್ನಿನ ಬಣ್ಣದ್ದು ನಿಜವಾದರೂ ಹೊನ್ನಿನದಲ್ಲ. ಅದರ ಆಕಾರ ಮತ್ತು ವಿನ್ಯಾಸ ನೋಡಿದರೆ ಥೈಲ್ಯಾಂಡ ಇಲ್ಲವೇ ಮ್ಯಾನ್ಮಾರ್ ನಿಂದ ಸಮುದ್ರದಲ್ಲಿ ತೇಲಿಕೊಂಡು ಬಂದಿರಬಹುದು ಅನಿಸುತ್ತೆ.

ರಥದ ಬಗ್ಗೆ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿರುವ ಶ್ರೀಕಾಕುಳಂನ ಜಿಲ್ಲಾಧಿಕಾರಿ ಶ್ರೀಕೇಶ್ ಬಿ ಲತಾಕರ್ ಅವರು ರಥವು ಚಿನ್ನದ್ದಲ್ಲ, ಹಳದಿ ಬಣ್ಣದ್ದಾಗಿರುವುದರಿಂದ ಎಲ್ಲರೂ ಅದನ್ನು ಚಿನ್ನದೆಂದು ಭಾವಿಸಿದ್ದಾರೆ. ಸದ್ಯಕ್ಕೆ ರಥವು ಪೊಲೀಸರ ವಶದಲ್ಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:   Smriti Irani: ವೈರಲ್ ವಿಡಿಯೋ ಹಂಚಿಕೊಂಡು ಕುತೂಹಲಕಾರಿ ಕ್ಯಾಪ್ಶನ್ ನೀಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ