My India My Life Goals: ಪ್ರತಿದಿನವನ್ನು ವಿಶ್ವ ಪರಿಸರ ದಿನವನ್ನಾಗಿಸಿದರೆ ಭಾರತ ಹಸಿರಿನಿಂದ ಕಂಗೊಳಿಸುತ್ತದೆ: ದೇವೆಂದರ್ ಸುರಾ, ಪೊಲೀಸ್ ಕಾನ್ ಸ್ಟೇಬಲ್

ಅರುಣ್​ ಕುಮಾರ್​ ಬೆಳ್ಳಿ Edited By:

Updated on: Jun 22, 2023 | 2:40 PM

ನಮ್ಮ ದಿನಚರಿಯನ್ನು ಹೀಗೆ ಬದಲಾಯಿಸಿಕೊಂಡರೆ ಭಾರತ ದೇಶ ಹಸಿರಿನಿಂದ ಕಂಗೊಳಿಸುತ್ತದೆ, ಪ್ರತಿ ದಿನವೂ ಪರಿಸರ ದಿನವಾಗಿರುತ್ತದೆ ಎಂದು ದೇವೆಂದರ್ ಸುರಾ ಹೇಳುತ್ತಾರೆ.

ಬೆಂಗಳೂರು: ಹರಿಯಾಣ ಸೋನಿಪತ್ ಮೂಲದ 31-ವರ್ಷ ವಯಸ್ಸಿನ ಪೊಲೀಸ್ ಕಾನ್ ಸ್ಟೇಬಲ್ ದೇವೆಂದರ್ ಸುರಾ (Devender Sura) ಪರಿಸರದ ಉಳಿವಿಗಾಗಿ ಏನೆಲ್ಲ ಮಾಡುತ್ತಿದ್ದಾರೆ ಅನ್ನೋದನ್ನು ನಾವು ಚರ್ಚಿಸುತ್ತಿದ್ದೇವೆ. ನಮ್ಮ ಸುತ್ತಮುತ್ತಲಿನ ಪರಿಸರ ಹೆಚ್ಚಲು ಪ್ರತಿದಿನವನ್ನು ವಿಶ್ವ ಪರಿಸರ ದಿನವನ್ನಾಗಿ (World Environment Day) ಆಚರಿಸಿ ಎಂದು ಅವರು ಹೇಳುತ್ತಾರೆ. ಸುತ್ತಲಿನ ಪರಿಸರದಲ್ಲಿ ಗಿಡ ನೆಡಬೇಕು ಪ್ರಾಣಿ-ಪಕ್ಷಿಗಳೊಂದಿಗೆ (animals) ಸ್ನೇಹ ಬೆಳಸಬೇಕು ಎಂದು ಹೇಳುವ ಅವರು ದೇಶಗಳಲ್ಲಂತೆ ನಮ್ಮ ದೇಶದಲ್ಲೂ ಹೆಚ್ಚೆಚ್ಚಾಗಿ ಸೈಕಲ್ ಬಳಕಸಬೇಕು ಎನ್ನುತ್ತಾರೆ. ನಾವು ವಾಸ ಮಾಡುವ ಸ್ಥಳ, ಪ್ರದೇಶದಲ್ಲಿ ತ್ಯಾಜ್ಯಮುಕ್ತ ಪರಿಸರ ನಿರ್ಮಿಸಿಕೊಳ್ಳಲು ಸುರಾ ಆಗ್ರಹಿಸುತ್ತಾರೆ.

ನಮ್ಮ ದಿನಚರಿಯನ್ನು ಹೀಗೆ ಬದಲಾಯಿಸಿಕೊಂಡರೆ ಭಾರತ ದೇಶ ಹಸಿರಿನಿಂದ ಕಂಗೊಳಿಸುತ್ತದೆ, ಪ್ರತಿ ದಿನವೂ ಪರಿಸರ ದಿನವಾಗಿರುತ್ತದೆ ಎಂದು ದೇವೆಂದರ್ ಸುರಾ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Published on: Jun 07, 2023 01:45 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.