My India My Life Goals: ಹಸಿರೇ ಉಸಿರು ಅಂತ ಬಲವಾಗಿ ನಂಬಿರುವ ಚಂಡೀಗಢ್​ದ ಒಬ್ಬ ಕಾನ್​ಸ್ಟೇಬಲ್ ಪ್ರತಿವರ್ಷ 25 ಸಾವಿರ ಸಸಿ ನೆಡುತ್ತಾರೆ!

ಸಸಿ ನೆಡುವುದು ಕೇವಲ ತನ್ನೊಬ್ಬನ ಕರ್ತವ್ಯ ಮಾತ್ರ ಅಲ್ಲ, ಅದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ, ಸಸಿ ನೆಡಿ ಪರಿಸರ ಕಾಪಾಡಿ ಎಂಬ ಧ್ಯೇಯವಾಕ್ಯವನ್ನು ಅವರು ಸಾರುತ್ತಾರೆ.

My India My Life Goals: ಹಸಿರೇ ಉಸಿರು ಅಂತ ಬಲವಾಗಿ ನಂಬಿರುವ ಚಂಡೀಗಢ್​ದ ಒಬ್ಬ ಕಾನ್​ಸ್ಟೇಬಲ್ ಪ್ರತಿವರ್ಷ 25 ಸಾವಿರ ಸಸಿ ನೆಡುತ್ತಾರೆ!
|

Updated on:Jun 23, 2023 | 10:38 AM

ಬೆಂಗಳೂರು: ವಿಶ್ವದ ಪರಿಸರ ಹಾಳಾಗದ ಹಾಗೆ ಸಂರಕ್ಷಿಸಲು ಹಲವಾರು ಸಂಘಸಂಸ್ಥೆಗಳು (organisations, NGOs) ಟೊಂಕಕಟ್ಟಿ ನಿಂತಿವೆ. ಆದರೆ ಕೆಲವರು ವೈಯಕ್ತಿಕವಾಗಿ ಮಹಾಕಾರ್ಯದಲ್ಲಿ ತೊಡಗಿ ಬೇರೆಯರಿಗೂ ಪ್ರೇರಣೆಯಾಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಒಬ್ಬ ಪೇದೆಯಾಗಿ (police constable) ಸೇವೆ ಸಲ್ಲಿಸುತ್ತಿರುವ ಈ ಮಹಾನುಭಾವ ಹೇಳೋದನ್ನು ಕೇಳಿಸಿಕೊಳ್ಳಿ. 2011 ರಲ್ಲಿ ಚಂಡೀಗಢ್ ಪೊಲೀಸ್ ಇಲಾಖೆಯಲ್ಲಿ ಕಾನ್ ಸ್ಟೇಬಲ್ ಆಗಿ ಸೇವೆ ಆರಂಭಿಸಿದ ಇವರು ಅಲ್ಲಿಯ ಹಸಿರು, ಸುತ್ತಲಿನ ವಾತಾವರಣ ಕಂಡು ಇಂಪ್ರೆಸ್ ಆಗುವುದರ ಜೊತೆ ಪ್ರೇರಿತರೂ ಆಗಿದ್ದಾರೆ. ಆಗಲೇ ಅವರಲ್ಲಿ ಈ ಭೂಮಿಗೆ, ಪರಿಸರಕ್ಕೆ ತನ್ನಿಂದ ಏನಾದರೂ ಕೊಡುಗೆ ನೀಡಬೇಕು ಅನ್ನೋ ಉತ್ಕಟ ಆಸೆ ಮೊಳಕೆಯೊಡೆದಿದೆ. ತಾವಂದುಕೊಂಡಿದ್ದನ್ನು ಕಾರ್ಯರೂಪಕ್ಕೆ ತರಲು ಅವರು ಮೊದಲು ಯುವಕರನ್ನು ಒಂದೆಡೆ ಸೇರಿಸಿದ್ದಾರೆ. ಅವರ ಮೂಲಕ ಆ ಭಾಗದ ನಾನಾ ಹಳ್ಳಿಗಳಲ್ಲಿ ಪ್ರತಿವರ್ಷ 20-25 ಸಾವಿರ ಸಸಿಗಳನ್ನು ನೆಡಸುತ್ತಿದ್ದಾರೆ (plant saplings).

2020ರಲ್ಲಿ ಕೊರೋನಾ ಪೀಡೆ ಪ್ರಪಂಚವನ್ನು ಅಪ್ಪಳಿಸಿದಾಗ ಅವರ ಮನದಲ್ಲಿ ಮತ್ತೊಂದು ವಿಚಾರ ಬಂತಂತೆ. ಪ್ರತಿಯೊಂದು ಹಳ್ಳಿಯಲ್ಲಿ ಸಸ್ಯ ಸಂಕುಲ ಬೆಳೆಸಿ, ಹೆಚ್ಚಿಸಿ ಯಾಕೆ ಆಕ್ಸಿಜನ್ ಕೋಟೆಯನ್ನು ಕಟ್ಟಿಕೊಳ್ಳಬಾರದು ಅನ್ನೋ ಆಲೋಚನೆ ಅವರಲ್ಲಿ ಹುಟ್ಟಿದೆ. ಭಾರತೀಯ ಸಸ್ಯ ಸಂಕುಲ ಕೇವಲ ಆಕ್ಸಿಜನ್ ನೀಡುವುದು ಮಾತ್ರವಲ್ಲದೆ ಪ್ರಾಣಿ ಸಂಕುಲಕ್ಕೂ ಆಸರೆಯಾಗಿ ನಿಲ್ಲುತ್ತದೆ. ಹಳ್ಳಿಯ ಜನರು ಅವರ ಯೊಜನೆಯಲ್ಲಿ ಅಷ್ಟೇ ಉತ್ಸಾಹದಿಂದ ಭಾಗವಹಿಸಿದ್ದಾರೆ.

ಅದೆಲ್ಲದರ ಪರಿಣಾಮವಾಗೇ ಸಸಿ ನೆಟ್ಟು ಸಂರಕ್ಷಿಸುತ್ತಾ ಬೆಳಸುವುದು ಜನಾಂದೋಲನವಾಗಿ ಪರಿವರ್ತನೆಯಾಯಿತು ಅಂತ ಅವರು ಹೇಳುತ್ತಾರೆ. ಸಸಿ ನೆಡುವುದು ಕೇವಲ ತನ್ನೊಬ್ಬನ ಕರ್ತವ್ಯ ಮಾತ್ರ ಅಲ್ಲ, ಅದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ, ಸಸಿ ನೆಡಿ ಪರಿಸರನ್ನು ಕಾಪಾಡಿ ಎಂಬ ಧ್ಯೇಯವಾಕ್ಯವನ್ನು ಅವರು ಸಾರುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 12:57 pm, Wed, 7 June 23

Follow us
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!