Bagalkot News: ಅಪಾಯದ ಮಟ್ಟ ತಲುಪಿರುವ ಶ್ರಮಬಿಂದು ಸಾಗರ ಬ್ಯಾರೇಜ್ ನಲ್ಲಿ ಯುವಕರ ಸೆಲ್ಫೀ ಹುಚ್ಚಾಟ!

Updated on: Jul 24, 2023 | 12:57 PM

ಇಂಥವರನ್ನು ಅಪಾಯದಿಂದ ಉಳಿಸಲು ಸರ್ಕಾರ ಬ್ಯಾರೇಜ್ ಸುತ್ತ ಬೇಲಿ ಎಬ್ಬಿಸುವುದು ಸಾಧ್ಯವೇ? ಯುವಕರು ವಿವೇಚನೆಯಿಂದ ವರ್ತಿಸುವ ಅಗತ್ಯವಿದೆ.

ಬಾಗಲಕೋಟೆ: ಸೆಲ್ಫೀ ಗೀಳಿಗೆ (selfie mania) ಮಿತಿ ಬೇಡ್ವಾ ಸ್ವಾಮಿ? ಯಾರನ್ನು ಮೆಚ್ಚಿಸಲು ಜನ ಹುಚ್ಚು ಸಾಹಸಗಳಿಗಿಳಿಯುತ್ತಾರೋ ಅಂತ ಅರ್ಥವಾಗಲ್ಲ ಮಾರಾಯ್ರೇ. ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿರುವ ಶ್ರಮಬಿಂದು ಸಾಗರ ಬ್ಯಾರೇಜ್ (Shramabindu Sagar Barrage) ಗೊತ್ತಲ್ವಾ? ಆ ಭಾಗದ ರೈತನಾಯಕ ಸಿದ್ದು ನ್ಯಾಮಗೌಡ (Siddu Nyamagouda) ಮತ್ತು ರೈತರ ತಪಸ್ಸು ಹಾಗೂ ಪರಿಶ್ರಮವೇ ಈ ಬ್ಯಾರೇಜ್. ಬಾಗಲಕೋಟೆ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ವಾರದಿಂದ ಒಂದೇ ಸಮ ಮಳೆ ಸುರಿಯುತ್ತಿರುವುದರಿಂದ ಶ್ರಮಬಿಂದು ಸಾಗರ ಬ್ಯಾರೇಜ್ ಅಪಾಯದ ಮಟ್ಟ ತಲುಪಿದೆ. ಸೇತುವೆ ಮೇಲಿಂದ ನೀರು ಹರಿಯುತ್ತಿದ್ದರೂ ಕೆಲ ಯುವಕರು ಕೇವಲ ಸೆಲ್ಫೀ ತೆಗೆದುಕೊಳ್ಳುವ ಕಾರಣಕ್ಕಾಗಿ ಸೇತುವೆ ಮೇಲೆ ನಡುಭಾಗಕ್ಕೆ ನಡೆದು ಹೋಗಿದ್ದಾರೆ. ಅವರಲ್ಲಿ ಎಷ್ಟು ಜನಕ್ಕೆ ಈಜುವುದು ಗೊತ್ತು ಅಂತ ನಮಗೆ ಗೊತ್ತಿಲ್ಲ. ಏನಾದರೂ ಹೆಚ್ಚು ಕಡಿಮೆಯಾಗಿ ನೀರಿಗೆ ಬಿದ್ದರೆ, ಜೀವಕ್ಕೆ ಅಪಾಯ. ಇಂಥವರನ್ನು ಅಪಾಯದಿಂದ ಉಳಿಸಲು ಸರ್ಕಾರ ಬ್ಯಾರೇಜ್ ಸುತ್ತ ಬೇಲಿ ಎಬ್ಬಿಸುವುದು ಸಾಧ್ಯವೇ? ಯುವಕರು ವಿವೇಚನೆಯಿಂದ ವರ್ತಿಸುವ ಅಗತ್ಯವಿದೆ.

ಮತ್ತಷ್ಟು ವಿಡಿಯೋಅ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More