ಚಾರ್ಮಾಡಿ ಘಾಟ್ ಇಳುಕಲು ಪ್ರದೇಶಗಳ ಸಣ್ಣ ಜಲಪಾತಗಳಲ್ಲಿ ಯುವಕರ ಅಪಾಯಕಾರಿ ಹುಚ್ಚಾಟ

ಚಾರ್ಮಾಡಿ ಘಾಟ್ ಇಳುಕಲು ಪ್ರದೇಶಗಳ ಸಣ್ಣ ಜಲಪಾತಗಳಲ್ಲಿ ಯುವಕರ ಅಪಾಯಕಾರಿ ಹುಚ್ಚಾಟ
|

Updated on: Jul 01, 2024 | 12:11 PM

ಇದೇ ವಿಡಿಯೋದಲ್ಲಿ ಚಾರ್ಮಾಡಿ ಘಾಟ್ ನ ಬಯಲು ಮತ್ತು ಸುರಕ್ಷಿತ ಪ್ರದೇಶದಲ್ಲಿ ಕೆಲ ಯುವಕರು ಕುನಿಯುತ್ತ ಕುಪ್ಪಳಿಸುತ್ತಿದ್ದಾರೆ. ಇದು ಸೇಫ್ ಮಾರಾಯ್ರೇ. ಆದರೆ ಇಳುಕಲು ಸ್ಥಳಗಳಿಗೆ ಹೋಗಿ ಜಾರುವಂಥ ಬಂಡೆಗಳ ಮೇಲೆ ಮೇಲಿಂದ ಬೀಳುವ ನೀರಿಗೆ ಮೈಯೊಡುವುದು ಅಪಾಯಕ್ಕೂ ಮೈಯೊಡ್ಡಿದ ಹಾಗೆ!

ಚಿಕ್ಕಮಗಳೂರು: ಯುವಕರು ಪ್ರವಾಸ ಹೋಗಲಿ, ಚಾರಣಕ್ಕೆಂ ತೆರಳಲಿ; ಅವರ ತಂದೆತಾಯಿಗಳೇ ತಡೆಯಲ್ಲ ಅಂದ್ರೆ ಬೇರೆಯವರಾದರೂ ಯಾಕೆ ತಡೆದಾರು? ಆದರೆ ಯುವಕರು ಗಮನಿಸಬೇಕಾದ ಅಂಶವೇನೆಂದರೆ ಅವರು ಬೆರಳು ಚೀಪುವ ಮಕ್ಕಳೇನಲ್ಲ, ತಮ್ಮ ಸುರಕ್ಷತೆಯ ಬಗ್ಗೆ ಎಚ್ಚರವಹಿಸಬೇಕು. ಇಲ್ನೋಡಿ, ಚಾರ್ಮಾಡಿ ಘಾಟ್​  ರಸ್ತೆಗುಂಟ ಸಿಗುವ ಸಣ್ಣಪುಟ್ಟ ಮತ್ತು ಕಿರಿದಾಗಿರುವ ಜಲಪಾತಗಳಲ್ಲಿ ಅವರು ಆಟವಾಡುತ್ತಿದ್ದಾರೆ. ಮೊದಲೇ ಹೇಳಿದಂತೆ ಇವು ಕಿರಿದಾದ ಜಲಪಾತಗಳು, ಜಲಪಾತಗಳು ಅನ್ನೋದಕ್ಕಿಂತ ಮೇಲಿನಿಂದ ಬೀಳುತ್ತಿರುವ ನೀರಿನ ಝರಿಗಳು ಅಂದರೆ ಹೆಚ್ಚು ಸೂಕ್ತವೇನೋ? ಮೇಲಿನಿಂದ ನೀರು ಸತತವಾಗಿ ಬೀಳುವುದರಿಂದ ಕಲ್ಲು ಬಂಡೆಗಳು ನುಣುಪಾಗಿಬಿಟ್ಟಿರುತ್ತವೆ ಮತ್ತು ಕಾಲಿಟ್ಟರೆ ಜಾರುವ ಅಪಾಯ ಜಾಸ್ತಿ. ಅಂಥ ಕಲ್ಲು ಬಂಡೆಗಳ ಮೇಲೆ ನಿಂತು ಯುವಕರು ಮೋಜು ಮಸ್ತಿ ಮಾಡುತ್ತಿದ್ದಾರೆ. ಕಾಲು ಜಾರಿದರೆ ನೇರವಾಗಿ ಪ್ರಪಾತಕ್ಕೆ, ಭಗವಂತನೂ ರಕ್ಷಿಸಲಾರ. ಇಂಥ ಅಪಾಯಕಾರಿ ಆಟಗಳು ಅವರಿಗೆ ಬೇಕಾ? ಕಿರಿದಾದ ಕಂದರಗಳನ್ನು ಕಾಯುವವರು ಯಾರೂ ಇರಲ್ಲ, ಅಪಾಯಕಾರಿ ಸ್ಥಳಗಳು ಅಂತ ಸೈನೇಜ್ ಗಳನ್ನು ಹಾಕಿದರೆ ಅವುಗಳನ್ನು ಗಮನಿಸುವ ಅಥವಾ ಸೂಚನೆಗಳನ್ನು ಪಾಲಿಸುವ ಕೆಲಸವನ್ನು ಯುವಕರು ಮಾಡಲಾರರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚಾರ್ಮಾಡಿ ಘಾಟಿಯ ನಡುರಸ್ತೆಯಲ್ಲಿ ನಿಂತು ಘೀಳಿಟ್ಟ ಒಂಟಿ ಸಲಗ, ಬೆಚ್ಚಿ ಬಿದ್ದ ಜನ

Follow us
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ