‘ಕರಿಮಣಿಗೆ ಮೊದಲಿನಷ್ಟು ಬೆಲೆ ಇಲ್ಲ’ ಎಂದು ಗುರುಕಿರಣ್ ಹೇಳಿದ್ದು ಏಕೆ?

Updated on: Mar 06, 2024 | 8:29 AM

ಗುರುಕಿರಣ್ ಸಂಗೀತ ಸಂಯೋಜನೆ ಮಾಡಿದ್ದ ‘ಉಪೇಂದ್ರ’ ಸಿನಿಮಾದ ‘ಏನಿಲ್ಲ.. ಏನಿಲ್ಲ..’ ಹಾಡು ವೈರಲ್ ಆಗುತ್ತಿದೆ. ಈ ಹಾಡಿಗೆ 25 ವರ್ಷಗಳ ಬಳಿಕ ಮತ್ತೆ ಬೆಲೆ ಬಂದಿದೆ. ಈ ಬಗ್ಗೆ ಗುರುಕಿರಣ್ ಅವರಿಗೆ ಖುಷಿ ಇದೆ. ಅಂದು ಸಾಧಾರಾಣ ಸಾಂಗ್ ಎನಿಸಿಕೊಂಡಿದ್ದ ಈ ಹಾಡು ಈಗ ಸೂಪರ್ ಹಿಟ್ ಆಗಿದೆ ಎಂದು ಅವರು ಹೇಳಿದ್ದಾರೆ.

ಗುರುಕಿರಣ್ (Gurukiran) ಸಂಗೀತ ಸಂಯೋಜನೆ ಮಾಡಿದ್ದ ‘ಉಪೇಂದ್ರ’ ಸಿನಿಮಾದ ‘ಏನಿಲ್ಲ.. ಏನಿಲ್ಲ..’ ಹಾಡು ವೈರಲ್ ಆಗುತ್ತಿದೆ. ಈ ಹಾಡಿಗೆ 25 ವರ್ಷಗಳ ಬಳಿಕ ಮತ್ತೆ ಬೆಲೆ ಬಂದಿದೆ. ಈ ಬಗ್ಗೆ ಗುರುಕಿರಣ್ ಅವರಿಗೆ ಖುಷಿ ಇದೆ. ಅಂದು ಸಾಧಾರಾಣ ಸಾಂಗ್ ಎನಿಸಿಕೊಂಡಿದ್ದ ಈ ಹಾಡು ಈಗ ಸೂಪರ್ ಹಿಟ್ ಆಗಿದೆ ಎಂದು ಅವರು ಹೇಳಿದ್ದಾರೆ. ಈ ಮಧ್ಯೆ ಗುರುಕಿರಣ್ ಅವರು ಕರಿಮಣಿ ಬಗ್ಗೆ ಮಾತನಾಡಿದ್ದಾರೆ. ‘ಮೊದಲೆಲ್ಲ ಕರಿಮಣಿಯನ್ನು ತೆಗೆದು ಹಾಕೋದು ಅಂದರೆ ಸಿಕ್ಕಾಪಟ್ಟೆ ಡ್ರಾಮಾಗಳು ಇರುತ್ತಿದ್ದವು. ಈಗ ಹಾಗಲ್ಲ ಸಿಂಪಲ್ ಆಗಿ ಅದನ್ನು ತೆಗೆದು ಹಾಕುತ್ತಾರೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Mar 06, 2024 08:29 AM
Follow Us
ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More