ಹೋಳಿ ಹಬ್ಬದಂದೇ ಹರಿಯಾಣದ ಬಿಜೆಪಿ ನಾಯಕನ ಹತ್ಯೆ; ಸಿಸಿಟಿವಿ ವಿಡಿಯೋ ವೈರಲ್
ಹೋಳಿ ಹಬ್ಬದಂದೇ ಸೋನಿಪತ್ನಲ್ಲಿ ಹರಿಯಾಣದ ಬಿಜೆಪಿ ನಾಯಕನ ಮೇಲೆ ಗುಂಡಿನ ದಾಳಿ ನಡೆದಿದೆ. ಕೊಲೆಗೆ ಕಾರಣವಾದ ಭಯಾನಕ ಕ್ಷಣಗಳನ್ನು ಸಿಸಿಟಿವಿ ದೃಶ್ಯಾವಳಿಗಳು ಸೆರೆಹಿಡಿದಿವೆ. ಈ ವಿಡಿಯೋದಲ್ಲಿ ಆರೋಪಿಯು ಬಿಜೆಪಿ ನಾಯಕನನ್ನು ಅಂಗಡಿಯೊಂದಕ್ಕೆ ತಳ್ಳಿ ಅವರತ್ತ ಬಂದೂಕು ತೋರಿಸುತ್ತಿರುವುದು ಕಂಡುಬರುತ್ತದೆ. ಸುರೇಂದ್ರ ಜವಾಹರ್ ಬಿಜೆಪಿ ಸೇರುವ ಮೊದಲು ಐಎನ್ಎಲ್ಡಿಯಲ್ಲಿದ್ದರು. 2021ರಲ್ಲಿ ಅವರು ಪಂಚಾಯತಿ ರಾಜ್ ವಿಭಾಗದಲ್ಲಿ ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿದ್ದರು.
ಸೋನಿಪತ್, (ಮಾರ್ಚ್ 15): ಹರಿಯಾಣದ ಸೋನಿಪತ್ನಲ್ಲಿ ಆಘಾತಕಾರಿ ಘಟನೆ ಸಂಭವಿಸಿದೆ. ಸ್ಥಳೀಯ ಬಿಜೆಪಿ ನಾಯಕ ಸುರೇಂದ್ರ ಜವಾಹರ್ ಮೇಲೆ ಹೋಳಿ ಹಬ್ಬದಂದು ಭೂ ವಿವಾದದಿಂದಾಗಿ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಹೋಳಿ ಹಬ್ಬದಂದೇ ಸೋನಿಪತ್ನಲ್ಲಿ ಹರಿಯಾಣದ ಬಿಜೆಪಿ ನಾಯಕನ ಮೇಲೆ ಗುಂಡಿನ ದಾಳಿ ನಡೆದಿದೆ. ಕೊಲೆಗೆ ಕಾರಣವಾದ ಭಯಾನಕ ಕ್ಷಣಗಳನ್ನು ಸಿಸಿಟಿವಿ ದೃಶ್ಯಾವಳಿಗಳು ಸೆರೆಹಿಡಿದಿವೆ. ಈ ವಿಡಿಯೋದಲ್ಲಿ ಆರೋಪಿಯು ಬಿಜೆಪಿ ನಾಯಕನನ್ನು ಅಂಗಡಿಯೊಂದಕ್ಕೆ ತಳ್ಳಿ ಅವರತ್ತ ಬಂದೂಕು ತೋರಿಸುತ್ತಿರುವುದು ಕಂಡುಬರುತ್ತದೆ. ಮನ್ನು ಎಂದು ಗುರುತಿಸಲಾದ ಆರೋಪಿಯ ಬಂಧನವನ್ನು ಪೊಲೀಸರು ದೃಢಪಡಿಸಿದ್ದಾರೆ. ಈ ಘಟನೆ ಶುಕ್ರವಾರ ಸಂಜೆ ಗೋಯಾನಾ ತಹಸಿಲ್ನ ಜವಾಹರ್ ಗ್ರಾಮದಲ್ಲಿ ನಡೆದಿದೆ. ಜವಾಹರ್ ಅವರ ಪತ್ನಿ ಕೋಮಲ್ ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us