Video: ನನಗಲ್ಲ ನಿನಗೆ ಪೇಟ ಚೆನ್ನಾಗಿ ಕಾಣುತ್ತೆ ನೀನೇ ಹಾಕೊ ಎಂದ ಸಿಎಂ ಸಿದ್ದರಾಮಯ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 07, 2023 | 7:58 PM

ಕಲರ್​ಫುಲ್​ ಪೇಟ ಹಾಕಲು ಉಸ್ತುವಾರಿ ಸಚಿವ ರಾಜಣ್ಣ ಬಂದಿದ್ದು, ಈ ವೇಳೆ ನನಗೆ ಪೇಟ ಬೇಡ ಎಂದಿದ್ದಾರೆ. ಚೆನ್ನಾಗಿ ಕಾಣುತ್ತೆ ಹಾಕೊಳ್ಳಿ ಸಾರ್ ಎಂದ ಕೆ.ಎನ್​.ರಾಜಣ್ಣ ಹೇಳಿದ್ದಕ್ಕೆ ನನಗಲ್ಲ ನಿನಗೆ ಪೇಟ ಚೆನ್ನಾಗಿ ಕಾಣುತ್ತೆ ನೀನೇ ಹಾಕೊ ಎಂದಿದ್ದಾರೆ. ಕಡೆಗೆ ಪೇಟ ಪಡೆದು ಕೆ.ಎನ್​.ರಾಜಣ್ಣಗೆ ಸಿಎಂ ಸಿದ್ದರಾಮಯ್ಯ ಹಾಕಿದ್ದಾರೆ. 

ಹಾಸನ, ನವೆಂಬರ್​​​​​ 07: ಹಾಸನಾಂಬೆ ದರ್ಶನ ಬಳಿಕ ಜಿಲ್ಲಾಡಳಿತದಿಂದ ಸಿಎಂ ಸಿದ್ದರಾಮಯ್ಯಗೆ ಸನ್ಮಾನ ಮಾಡಲಾಗಿದೆ. ಈ ವೇಳೆ ಪೇಟ ಹಾಕಿಸಿಕೊಳ್ಳಲು ಸಿದ್ದರಾಮಯ್ಯ (Siddaramaiah) ನಿರಾಕರಿಸಿದ್ದಾರೆ. ಕಲರ್​ಫುಲ್​ ಪೇಟ ಹಾಕಲು ಉಸ್ತುವಾರಿ ಸಚಿವ ರಾಜಣ್ಣ ಬಂದಿದ್ದು, ಈ ವೇಳೆ ನನಗೆ ಪೇಟ ಬೇಡ ಎಂದಿದ್ದಾರೆ. ಚೆನ್ನಾಗಿ ಕಾಣುತ್ತೆ ಹಾಕೊಳ್ಳಿ ಸಾರ್ ಎಂದ ಕೆ.ಎನ್​.ರಾಜಣ್ಣ ಹೇಳಿದ್ದಕ್ಕೆ ನನಗಲ್ಲ ನಿನಗೆ ಪೇಟ ಚೆನ್ನಾಗಿ ಕಾಣುತ್ತೆ ನೀನೇ ಹಾಕೊ ಎಂದಿದ್ದಾರೆ. ಕಡೆಗೆ ಪೇಟ ಪಡೆದು ಕೆ.ಎನ್​.ರಾಜಣ್ಣಗೆ ಸಿಎಂ ಸಿದ್ದರಾಮಯ್ಯ ಹಾಕಿದ್ದಾರೆ.  ಬಳಿಕ ಶಾಲು, ಹಾರಹಾಕಿ ಸಿಎಂಗೆ ರಾಜಣ್ಣ ಮತ್ತು ಡಿಸಿ ಸತ್ಯಭಾಮಾ ಸನ್ಮಾನಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow us on