1 ನಿಮಿಷದಲ್ಲಿ 10 ಯೋಗದ ಆಸನ: ವಿಶ್ವ ದಾಖಲೆ ಬರೆದ ಹಾಸನದ ಬಾಲಕಿ
ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂದು ಹಾಸನದ ಚನ್ನರಾಯಪಟ್ಟಣದ ಕುಮಾರಿ ಪೃಥ್ವಿ ಅವರು ಒಂದು ನಿಮಿಷದಲ್ಲಿ ಹತ್ತು ಕಠಿಣ ಯೋಗಾಸನಗಳನ್ನು ಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿರುವ ಪೃಥ್ವಿ ಅವರು ಸುಮಾರು 600 ಯೋಗಾಸನಗಳನ್ನು ಮಾಡಬಲ್ಲರು. ನಿತ್ಯ ಎರಡು ಗಂಟೆಗಳ ಯೋಗಾಭ್ಯಾಸ ಅವರ ಈ ಸಾಧನೆಗೆ ಕಾರಣ. ಬಾಕ್ಸ್ ಯೋಗ ಮತ್ತು ಶಿವ ಕೈಲಾಸ ಯೋಗದಲ್ಲಿ ಅವರ ಕೌಶಲ್ಯ ವಿಶೇಷವಾಗಿದೆ.
- Manjunath KB
- Updated on: Jun 21, 2025
- 9:06 pm
ರಾಜ್ಯ, ದೇಶಕ್ಕೆ ಊಹಿಸಲಾಗದ ದುಃಖ ಬರಲಿದೆ, ಜನವರಿ ಒಳಗೆ ದೊಡ್ಡ ಗಂಡಾಂತರ: ಕೋಡಿ ಶ್ರೀ ಭಯಾನಕ ಭವಿಷ್ಯ
ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ: ಕೋಡಿ ಶ್ರೀಗಳು ನೀಡಿದ ಭವಿಷ್ಯವಾಣಿಯು ಕರ್ನಾಟಕ ಮತ್ತು ಭಾರತದ ಮೇಲೆ ಆತಂಕದ ನೆರಳನ್ನು ಉಂಟುಮಾಡಿದೆ. ಅವರ ಪ್ರಕಾರ, ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಹೆಚ್ಚಾಗಲಿದೆ ಮತ್ತು ದೇಶಕ್ಕೆ ಜನವರಿ ಒಳಗೆ ಭಾರೀ ದುಃಖವು ಬರಲಿದೆ. ಮೇಘಸ್ಪೋಟ, ಭೂಕುಸಿತ ಮತ್ತು ಇತರ ಪ್ರಕೃತಿ ವಿಕೋಪಗಳ ಸಾಧ್ಯತೆಗಳನ್ನು ಅವರು ಸೂಚಿಸಿದ್ದಾರೆ.
- Manjunath KB
- Updated on: Jun 21, 2025
- 5:57 pm
ರಸ್ತೆ ಬದಿ ನಿಂತಿದ್ದ ಆಟೋಗೆ ಅಪ್ಪಳಿಸಿದ ಲಾರಿ ಚಕ್ರಗಳು: ಭಯಾನಕ ದೃಶ್ಯ ಸೆರೆ
ಬೇಲೂರು ತಾಲ್ಲೂಕಿನ ಮತ್ತಿಹಳ್ಳಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಂಟೇನರ್ ಲಾರಿಯ ಹಿಂಬದಿಯ ಚಕ್ರಗಳು ಏಕಾಏಕಿ ಕಳಚಿ ಬಿದ್ದವು. ರಸ್ತೆಯಲ್ಲಿ ಉರುಳುತ್ತಾ ಹೋಗಿ ರಸ್ತೆ ಬದಿಯ ಆಟೋಗೆ ಡಿಕ್ಕಿ ಹೊಡೆದಿವೆ. ಆಟೋ ಹಾನಿಗೊಳಗಾಗಿದ್ದು, ಚಾಲಕನ ಜಾಗರೂಕತೆಯಿಂದ ದೊಡ್ಡ ಅಪಾಯ ತಪ್ಪಿದೆ. ಸಿಸಿಟಿವಿಯಲ್ಲಿ ಈ ಘಟನೆ ದೃಶ್ಯ ಸೆರೆಯಾಗಿದೆ.
- Manjunath KB
- Updated on: Jun 20, 2025
- 3:05 pm
ಸಕಲೇಶಪುರ: ರಸ್ತೆಯಲ್ಲೇ ಕಾಡಾನೆಗಳ ಪರೇಡ್! ಬೆಚ್ಚಿಬಿದ್ದ ಗ್ರಾಮಸ್ಥರು
ಹಾಸನ ಜಿಲ್ಲೆಯಲ್ಲಿ ಕಾಡಾನೆ-ಮಾನವ ಸಂಘರ್ಷ ಸದ್ಯಕ್ಕೆ ಕೊನೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಸಕಲೇಶಪುರದ ಕಿರುಹುಣಸೆ ಗ್ರಾಮದಲ್ಲಿ ಗಂಡಾನೆ ಮತ್ತು ಹೆಣ್ಣಾನೆ ಗ್ರಾಮದ ರಸ್ತೆಯಲ್ಲೇ ಹೆಜ್ಜೆಹಾಕಿ ಜನರಲ್ಲಿ ಭೀತಿ ಹುಟ್ಟಿಸಿವೆ. ಕಳೆದ 10-15 ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳು ಬರುತ್ತಿವೆ ಎನ್ನಲಾಗಿದೆ. ವಿಡಿಯೋ ಇಲ್ಲಿದೆ ನೋಡಿ.
- Manjunath KB
- Updated on: Jun 18, 2025
- 10:22 am
ಶಿರಾಡಿ ಘಾಟ್ ಅಧ್ವಾನ, ಹಲವೆಡೆ ಭೂಕುಸಿತ: ಬೆಂಗಳೂರು ಮಂಗಳೂರು ಪ್ರಯಾಣಕ್ಕೆ ಸಂಚಕಾರ
ಹಾಸನ, ಜೂನ್ 17: ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ನಲ್ಲಿ ಅಧ್ವಾನ ಸೃಷ್ಟಿಯಾಗಿದೆ. ಹತ್ತಾರುಕಡೆ ಮರಗಳು ಉರುಳಿ ಬಿದ್ದು ಆತಂಕ ಸೃಷ್ಟಿಯಾಗಿದ್ದರೆ, ನಿರಂತರ ಮಳೆಗೆ ಎಲ್ಲೆಂದರಲ್ಲಿ ಕುಸಿಯುತ್ತಿರುವ ಗುಡ್ಡದ ಸಾಲುಗಳು ವಾಹನ ಸವಾರನ್ನು ಆತಂಕ್ಕೆ ದೂಡುತ್ತಿವೆ. ರಾಶಿ ರಾಶಿಯಾಗಿ ಕೊಚ್ಚಿ ಬರುತ್ತಿರುವ ಮಣ್ಣು ಪ್ರಯಾಣಕ್ಕೆ ಸಂಚಕಾರ ತರುತ್ತಿದೆ. ಮತ್ತೆ ಮಳೆ ಹೆಚ್ಚಾದರೆ ಮಂಗಳೂರು ಹಾಗೂ ಬೆಂಗಳೂರು ನಡುವಣ ಪ್ರಯಾಣ ದುಸ್ತರವಾಗಲಿದೆ.
- Manjunath KB
- Updated on: Jun 17, 2025
- 8:11 am
ಹಾಸನದಲ್ಲಿ ಮಳೆ ಆರ್ಭಟ: ಶಿರಾಡಿ ಘಾಟ್ನಲ್ಲಿ ಸಂಚಾರಕ್ಕೆ ಸಂಕಷ್ಟ, ಕೊಂಚ ಎಡವಟ್ಟಾದ್ರೆ ಪ್ರಾಣಕ್ಕೆ ಕುತ್ತು ಭೀತಿ
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರಿ ಮಳೆಯಿಂದ ಶಿರಾಡಿ ಘಾಟ್ನಲ್ಲಿ ರಸ್ತೆ ಸಂಚಾರಕ್ಕೆ ತೀವ್ರ ಸಂಕಷ್ಟ ಉಂಟಾಗಿದೆ. ಭಾರೀ ಗಾಳಿ ಮತ್ತು ಮಳೆಯಿಂದ ಬೃಹತ್ ಮರಗಳು ರಸ್ತೆಗೆ ಬಿದ್ದಿವೆ. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚಾರ ಅಡಚಣೆಯಾಗಿದ್ದು, ಪ್ರಯಾಣಿಕರಲ್ಲಿ ಆತಂಕ ಶುರುವಾಗಿದೆ. ಒಂದು ಪಥದ ಸಂಚಾರ ಸ್ಥಗಿತಗೊಳಿಸಲಾಗಿದೆ.
- Manjunath KB
- Updated on: Jun 16, 2025
- 1:30 pm
ಹಾಸನ: ಮೂರು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ
ಕರ್ನಾಟಕದಲ್ಲಿ ಇತ್ತೀಚೆಗೆ ಬಾಂಬ್ ಬೆದರಿಕೆ ಸಂದೇಶ ಪ್ರಕರಣಗಳು ಹೆಚ್ಚಾಗತೊಡಗಿವೆ. ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಕೆಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದವು. ಇದೀಗ ಹಾಸನದ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
- Manjunath KB
- Updated on: Jun 16, 2025
- 11:20 am
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ: ಪೊಲೀಸ್ ಮುಂದೆಯೇ ಯುವಕನಿಗೆ ಮನಸೋ ಇಚ್ಚೇ ಥಳಿತ
ಮೊಬೈಲ್ ಕದ್ದ ಆರೋಪದಲ್ಲಿ ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಗಳು ಯುವಕನ ಮೇಲ ಅಮಾನುಷ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಕೋಲು ಮುರಿಯುವಂತೆ ಮನಸ್ಸೋ ಇಚ್ಛೆ ಥಳಿಸಿದ್ದಾರೆ. ಹೊಡೆತಕ್ಕೆ ತಡೆಯದೇ ಬಿದ್ದು ಗೋಳಾಡಿದರೂ ಸಹ ಬಿಡದೆ ಹೊಡೆದಿದ್ದಾರೆ. ಇನ್ನು ಖಾಸಗಿ ವ್ಯಕ್ತಿಗಳು ಅಮಾನುಷ ದಾಳಿ ಮಾಡಿದ್ರೂ ಸಹ ಪೊಲೀಸ್ ಸಿಬ್ಬಂದಿ ಸುಮ್ಮನೆ ನೋಡುತ್ತಾ ನಿಂತಿದ್ದಾರೆ.
- Manjunath KB
- Updated on: Jun 15, 2025
- 1:09 pm
ಒಂದೇ ತಿಂಗಳಲ್ಲಿ ಹಾಸನ ಜಿಲ್ಲೆಯ ನಾಲ್ವರು ಯುವಕರು ಹೃದಯಾಘಾತಕ್ಕೆ ಬಲಿ
ಹಾಸನ ಜಿಲ್ಲೆಯಲ್ಲಿ ಇತ್ತೀಚೆಗೆ ನಾಲ್ವರು ಯುವಕರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದು ಪೋಷಕರಲ್ಲಿ ಆತಂಕವನ್ನು ಹೆಚ್ಚಿಸಿದೆ. 19 ವರ್ಷದ ನಿಶಾಂತ್ ಗೌಡ ಅವರ ಸಾವು ಇದಕ್ಕೆ ಇತ್ತೀಚಿನ ಉದಾಹರಣೆ. ಒಂದು ತಿಂಗಳಲ್ಲಿ ನಾಲ್ವರು ಯುವಕರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬುದು ಆತಂಕಕಾರಿ ಸಂಗತಿಯಾಗಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆ ಗಮನ ಹರಿಸಬೇಕಿದೆ.
- Manjunath KB
- Updated on: Jun 11, 2025
- 7:16 pm
ಹಾಸನ: ಆರು ವರ್ಷದ ಕರುಳ ಬಳ್ಳಿಯನ್ನೇ ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ
ಹಾಸನದಲ್ಲಿ ತಾಯಿಯೊಬ್ಬರು ತನ್ನ ಮಗಳನ್ನು ಕೊಂದ ಘಟನೆ ಬೆಚ್ಚಿಬೀಳಿಸಿದೆ. ಗಂಡ-ಹೆಂಡತಿಯ ನಡುವಿನ ಕಲಹದಿಂದಾಗಿ ಈ ದುರಂತ ಸಂಭವಿಸಿದೆ. ತಾಯಿ ತನ್ನ ಮಗಳನ್ನು ನೀರಿನಲ್ಲಿ ಮುಳುಗಿಸಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪತ್ನಿಯ ಅಕ್ರಮ ಸಂಬಂಧಕ್ಕೆ ಮಗಳನ್ನು ಕೊಂದಳು ಎಂದು ಪತಿ ಆರೋಪಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- Manjunath KB
- Updated on: Jun 9, 2025
- 1:07 pm
ಮಕ್ಕಳಿದ್ದ ಆಟೋ ನ್ಯೂಟ್ರಲ್ ಮಾಡಿ ಹಿಂದೆ ತಳ್ಳಿ ಬಿಟ್ಟ ಯುವಕ: ಮುಂದೇನಾಯ್ತು? ವಿಡಿಯೋ ನೋಡಿ
ಹಾಸನ ಜಿಲ್ಲೆಯ ಬೇಲೂರಿನಲ್ಲಿ ಒಬ್ಬ ಯುವಕ ಮಕ್ಕಳಿದ್ದ ಆಟೋವನ್ನು ನ್ಯೂಟ್ರಲ್ನಲ್ಲಿಟ್ಟು ಹಿಂದಕ್ಕೆ ತಳ್ಳಿದ ಘಟನೆ ನಡೆದಿದೆ. ಬೈಕ್ ತೆಗೆಯಲು ಸ್ಥಳಾವಕಾಶ ಇಲ್ಲದಿದ್ದಕ್ಕೆ ಸಿಟ್ಟಾಗಿದ್ದ ಯುವಕ ಈ ಕೃತ್ಯ ಎಸಗಿದ್ದಾನೆ. ಸಿಸಿಟಿವಿ ದೃಶ್ಯಾವಳಿ ಪೊಲೀಸರಿಗೆ ಸಿಕ್ಕಿದ್ದು, ಯುವಕನಿಗೆ ಎಚ್ಚರಿಕೆ ನೀಡಲಾಗಿದೆ. ವಾಹನ ನಿಲುಗಡೆ ನಿಯಮಗಳನ್ನು ಪಾಲಿಸುವಂತೆ ಪೊಲೀಸರು ಜನರಿಗೆ ಸೂಚಿಸಿದ್ದಾರೆ.
- Manjunath KB
- Updated on: Jun 8, 2025
- 2:34 pm
ನೂಕು ನುಗ್ಗಲಿನಲ್ಲಿ ಬಸ್ ಹತ್ತುವ ಮುನ್ನ ಹುಷಾರ್… ಓದಲೇ ಬೇಕಾದ ಸುದ್ದಿ..
ಕರ್ನಾಟಕದಲ್ಲಿ ಶಕ್ತಿಯೋಜನೆ ಜಾರಿಯಾದ ಬಳಿಕ ಸಾರಿಗೆ ಬಸ್ ಗಳಲ್ಲಿ ಕಾಲಿಡೋಕೆ ಆಗದ ಸ್ಥಿತಿ ಇದೆ. ಹೆಚ್ಚಿನ ಮಹಿಳಾ ಪ್ರಯಾಣಿಕರ ಓಡಾಡ ಹೆಚ್ಚಳವಾಗಿದೆ. ಹೀಗಾಗಿ ಸಾರಿಗೆ ಲಾ ಬಸ್ ಗಳು ತುಂಬಿ ತುಳುಕುತ್ತವೆ. ತುಂಬಿ ತುಳುಕೋ ಬಸ್ ಗಳೇ ಕೆಲವರಿಗೆ ಕಳ್ಳತನದ ಸ್ಪಾಟ್ ಆಗಿ ಬದಲಾಗಿದೆ. ಹೀಗಾಗಿ ನೂಕು ನುಗ್ಗಲಿನಲ್ಲಿ ಬಸ್ ಹತ್ತುವ ಮುನ್ನ ಮಹಿಳೆಯರು ಹುಷಾರ್ ಆಗಿರಬೇಕು. ಅಷ್ಟಕ್ಕೂ ಆಗಿದ್ದೇನು ಅಂತೀರಾ? ಇಲ್ಲಿದೆ ನೋಡಿ ಒಂದು ವರದಿ.
- Manjunath KB
- Updated on: Jun 8, 2025
- 9:23 am