ತಂಗಿ ಮೇಲೆ ಅತ್ಯಾಚಾರ, ಮದುವೆಯಾಗೋದಾಗಿ ಅಕ್ಕನಿಗೆ ಮೋಸ: ಸಹೋದರಿಯರನ್ನು ಕಾಡಿದ್ದ ಆರೋಪಿ ಅರೆಸ್ಟ್
ಮದುವೆಯಾಗೋದಾಗಿ ನಂಬಿಸಿ ಯುವತಿಯ ಜೊತೆ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದು ವಂಚಿಸಿದ್ದಲ್ಲದೆ, ಆಕೆಯ ಅಪ್ರಾಪ್ತ ಸಹೋದರಿ ಮೇಲೂ ವ್ಯಕ್ತಿಯೋರ್ವ ಅತ್ಯಾಚಾರ ನಡೆಸಿರುವ ಆರೋಪ ಕೇಳಿಬಂದಿದೆ. ಸಂತ್ರಸ್ತೆ ಬಳಿ ಲಕ್ಷಾಂತರ ರೂ. ಹಣ ಕಿತ್ತುಕೊಂಡಿರುವ ಆರೋಪಿ, ಆಕೆಯ ಮನೆಯಲ್ಲಿ ಬಂಗಾರವನ್ನೂ ಕದ್ದಿದ್ದ. ಮದುವೆ ಆಗಿದ್ದರೂ ಹಲವು ಯುವತಿಯರಿಗೆ ಇದೇ ರೀತಿ ವಂಚಿಸಿದ್ದ ಎಂದು ದೂರಲಾಗಿದೆ.
- Manjunath KB
- Updated on: Dec 28, 2025
- 8:21 am
ನೆಲಮಂಗಲ: ಮದುವೆಯಾಗಿ ತಿಂಗಳು ಕಳೆಯುವುದರೊಳಗೆ ನಿಗೂಢವಾಗಿ ನವ ವಿವಾಹಿತೆ ಸಾವು
ನವ ವಿವಾಹಿತೆಯೋರ್ವರು ನಿಗೂಢವಾಗಿ ಮೃತಪಟ್ಟಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ಪತಿಯೇ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಮದುವೆಯಾಗಿ ತಿಂಗಳು ಕಳೆಯುವದರ ಒಳಗೆಯೇ ಆತ ಆಕೆಗೆ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ರಾಜಿ ಪಂಚಾಯ್ತಿಯೂ ನಡೆದಿತ್ತು. ಹೀಗಿದ್ದರೂ ಆತ ಮತ್ತೆ ಆಕೆ ಮೇಲೆ ಹಲ್ಲೆ ನಡೆಸಿದ್ದ ಎಂದು ಯುವತಿಯ ಹೆತ್ತವರು ಆರೋಪಿಸಿದ್ದಾರೆ.
- Manjunath KB
- Updated on: Dec 25, 2025
- 12:39 pm
ಮಗುವಿಗೆ ಜನ್ಮ ನೀಡಿದ 10ನೇ ಕ್ಲಾಸ್ ವಿದ್ಯಾರ್ಥಿನಿ: ಶಾಲಾ ಬಸ್ ಡ್ರೈವರ್ನಿಂದಲೇ ನೀಚ ಕೃತ್ಯ
ಕೆಲ ದಿನಗಳ ಹಿಂದೆ ಶಿವಮೊಗ್ಗ, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಶಾಲಾ ಬಾಲಕಿಯರು ಮಗುವಿಗೆ ಜನ್ಮ ನೀಡಿದ್ದ ಘಟನೆಗಳು ವರದಿಯಾಗಿವೆ. ಈ ಘಟನೆ ಮಾಸುವ ಮುನ್ನವೇ ಹಾಸನ ಜಿಲ್ಲೆಯಲ್ಲೂ ಅಂತಹದ್ದೇ ವರದಿಯಾಗಿದೆ. ಅದೇ ಖಾಸಗಿ ಶಾಲಾ ಬಸ್ ಚಾಲಕ ನೀಚ ಕೃತ್ಯದಿಂದಲೇ ವಿದ್ಯಾರ್ಥಿನಿ ಈಗ ಹೆಣ್ಣು ಮಗುವಿಗೆ ಜನ್ಮನೀಡಿದ್ದಾಳೆ ಎಂದು ತಿಳಿದುಬಂದಿದೆ. ಎಷ್ಟೇ ಜಾಗೃತಿ ಮೂಡಿಸಿದರೂ ಸಹ ಕರ್ನಾಟಕದಲ್ಲಿಇಂತಹ ಘಟನೆಗಳು ನಡೆಯುತ್ತಲೇ ಇವೆ.
- Manjunath KB
- Updated on: Dec 23, 2025
- 5:50 pm
68ನೇ ವಯಸ್ಸಿನಲ್ಲಿ 2ನೇ ಮದ್ವೆಯಾದ ವ್ಯಕ್ತಿಗೆ ಮಕ್ಕಳ ಕಾಟ, ಮಚ್ಚು ಹಿಡಿದ ಅಪ್ಪ: ಏನಿದು ವೃದ್ಧ ದಂಪತಿಯ ಸಂಘರ್ಷ?
68 ವರ್ಷದ ವರ, 58 ವರ್ಷದ ವಧು. ಇಳಿ ವಯಸ್ಸಿನಲ್ಲಿ ಇವರು ದಂಪತಿ ಆಗಿದ್ದು, ಬಾಳಿನ ಸಂಧ್ಯಾಕಾಲದಲ್ಲಿ ಹೊಸ ಜೀವನ ಆರಂಭಿಸಿದ್ದಾರೆ. ಆದ್ರೆ, ಇವರ ಬದುಕಿಗೆ ಮಕ್ಕಳೇ ಮುಳುವಾಗಿದ್ದಾರೆ. ಹೀಗಾಗಿ ಅಪ್ಪ ಕೈನಲ್ಲಿ ಮಚ್ಚು ಹಿಡಿದಿದ್ದಾರೆ. ಅಲ್ಲದೇ ಕೈಲಿ ಮಚ್ಚು ಹಿಡಿದು ಪೊಲೀಸ್ ಠಾಣೆಗೆ ಬಂದಿರುವ ವೃದ್ಧ, ಏನ್ಮಾಡಿದ್ನೋ ಅಂತ ಕಂಗಾಲಾಗಿದ್ದರು. ಆದ್ರೆ, ಮಚ್ಚು ಹಿಡಿದು ಬಂದಿರುವುದು ಏನೋ ಮಾಡಿಲ್ಲ ಅಲ್ಲ ಬದಲಿಗೆ ಜೀವ ರಕ್ಷಣೆಗಾಗಿ.
- Manjunath KB
- Updated on: Dec 21, 2025
- 10:17 pm
ಸರ್ಕಾರಿ ಆಸ್ಪತ್ರೆಯಲ್ಲಿನ ಸ್ಕ್ಯಾನಿಂಗ್ ಮಷಿನ್ ಕದ್ದೊಯ್ದು ಮನೆಯಲ್ಲಿಟ್ಟ ಸಿಬ್ಬಂದಿ: ಭ್ರೂಣ ಲಿಂಗ ಪತ್ತೆ ಶಂಕೆ!
ಹಾಸನದ ಬೇಲೂರು ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಸ್ಕ್ಯಾನಿಂಗ್ ಯಂತ್ರ ಕಳವು ನಡೆದಿರುವುದು ಬಯಲಾಗಿದೆ. ತನಿಖೆ ವೇಳೆ ಆಕ್ಸಿಜನ್ ಸಿಲಿಂಡರ್ಗಳು ಮತ್ತು ಐಸಿಯು ಮಾನಿಟರ್ಗಳು ಸಹ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಕದ್ದ ಯಂತ್ರವನ್ನು ಭ್ರೂಣ ಲಿಂಗ ಪತ್ತೆಗೆ ಬಳಸಿದ ಶಂಕೆ ವ್ಯಕ್ತವಾಗಿದ್ದು, ಇಬ್ಬರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಪಿಸಿಪಿಎನ್ಡಿಟಿ ಕಾಯ್ದೆಯಡಿ ತನಿಖೆ ನಡೆಸಲಾಗಿದೆ.
- Manjunath KB
- Updated on: Dec 21, 2025
- 11:44 am
ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡ ಯುವಕನ ಅಂಗಾಂಗ ದಾನ: ಝೀರೋ ಟ್ರಾಫಿಕ್ನಲ್ಲಿ ಹಾಸನದಿಂದ ಮೈಸೂರಿಗೆ ಸಾಗಿದ ಹೃದಯ
ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಹಾಸನದ ಯುವಕ ಲೋಕೇಶ್ ಮೆದುಳು ನಿಷ್ಕ್ರಿಯಗೊಂಡರೂ ಮಾನವೀಯತೆ ಮೆರೆದು ಹೃದಯ, ಲಿವರ್ ಮತ್ತು ಕಣ್ಣುಗಳನ್ನು ದಾನ ಮಾಡಿ ಮಾದರಿಯಾಗಿದ್ದಾರೆ. ಈ ಮಹತ್ಕಾರ್ಯದಿಂದ ಹಲವಾರು ಜೀವಗಳಿಗೆ ಹೊಸ ಬಾಳು ದೊರೆತಿದೆ. ಅವರ ಹೃದಯವನ್ನು ಹಾಸನದಿಂದ ಮೈಸೂರಿಗೆ ಝೀರೋ ಟ್ರಾಫಿಕ್ನಲ್ಲಿ ಸಾಗಿಸಲಾಯಿತು.
- Manjunath KB
- Updated on: Dec 17, 2025
- 3:09 pm
ರೈತರಿಗೆ ಸೇರಬೇಕಿದ್ದ ಯೂರಿಯಾ ಕಾಳಸಂತೆಯಲ್ಲಿ ಮಾರಾಟ: ಜಾಲ ಭೇದಿಸಿದ DRI
ರೈತರಿಗೆ ಸೇರಬೇಕಿದ್ದ ಸಬ್ಸಿಡಿ ಯೂರಿಯಾವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ದಂಧೆಯನ್ನು DRI ನೆಲಮಂಗಲದಲ್ಲಿ ಭೇದಿಸಿದೆ. 266 ರೂ.ಗೆ ರೈತರಿಗೆ ಲಭ್ಯವಾಗಬೇಕಾದ ಯೂರಿಯಾವನ್ನು 2000-2500 ರೂ.ಗಳಿಗೆ ಅಕ್ರಮವಾಗಿ ಮಾರಲಾಗುತ್ತಿರೋದು ಬಯಲಾಗಿದೆ. ಆರ್. ಅಶೋಕ್ ಇದೊಂದು 'ಯೂರಿಯಾ ಹಗರಣ' ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
- Manjunath KB
- Updated on: Dec 16, 2025
- 3:47 pm
ಬೇಲೂರಿನ ಬಾಲೆಗೆ ಮನಸೋತ ಇಂಗ್ಲೆಂಡ್ ಯುವಕ: ಭಾನು ಭೂಮಿ ಮೀರಿದ ಪ್ರೀತಿಗೆ ವೇದಿಕೆಯಾಯ್ತು ಹಾಸನ
ಹಾಸನ, ಡಿಸೆಂಬರ್ 15: ಪ್ರೀತಿ ಪ್ರೇಮಕ್ಕೆ ದೇಶ ಭಾಷೆಗಳ ಗಡಿಯಿಲ್ಲ ಎನ್ನುತ್ತಾರೆ. ಹೃದಯದ ಮಾತಿಗೆ ಜಾತಿ ಧರ್ಮಗಳ ಬೇಲಿಯೂ ಅಡ್ಡ ಬರಲ್ಲ ಎಂಬ ಮಾತಿದೆ. ಹಾಸನದಲ್ಲಿ ನಡೆದ ಇದೊಂದು ವಿಶೇಷ ಪ್ರೇಮ ವಿವಾಹವು ಪ್ರೀತಿಯ ಬೆಸುಗೆ ಇದ್ದರೆ ಎಲ್ಲವೂ ಸಾಧ್ಯ ಎಂಬುದನ್ನು ಸಾರಿ ಹೇಳಿದೆ. ಜಾತಿ ಬೇರೆ, ಧರ್ಮ ಬೇರೆ, ದೇಶ ಬೇರೆ ಭಾಷೆ ಬೇರೆ ಆದರೂ ಹೃದಯದ ಮಿಡಿತಕ್ಕೆ ಮನಸೋತ ಈ ಸುಂದರ ಜೋಡಿ ಹಿರಿಯನ್ನು ಒಪ್ಪಿಸಿ ಸತಿ ಪತಿಗಳಾಗಿದ್ದಾರೆ. ಸಾಗರದಾಚೆಯ ಇಂಗ್ಲೆಂಡ್ನ ಪ್ರೇಮಿ, ವಿಶ್ವ ವಿಖ್ಯಾತ ಐತಿಹಾಸಿಕ ನಗರಿ ಬೇಲೂರಿನ ಪ್ರೇಯಸಿಯ ಮದುವೆ ಸರಳ ಸಂಭ್ರಮದಿಂದ ಹಿಂದೂ ಸಂಪ್ರದಾಯದಂತೆ ಭಾನುವಾರ ನೆರವೇರಿದೆ.
- Manjunath KB
- Updated on: Dec 15, 2025
- 9:38 am
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ಹಿಂದೂ ಸಂಪ್ರದಾಯದಂತೆ ನಡೆಯಿತು ಅದ್ದೂರಿ ಮದುವೆ
ಅಪರೂಪದ ಅಂತಾರಾಷ್ಟ್ರೀಯ ವಿವಾಹಕ್ಕೆ ಐತಿಹಾಸಿಕ ಬೇಲೂರು ಭಾನುವಾರ ಸಾಕ್ಷಿಯಾಯಿತು. ಬೇಲೂರು ತಾಲ್ಲೂಕಿನ ಇಬ್ಬೀಡು ಗ್ರಾಮದ ಯುವತಿ ಹೇಮಶ್ರಿ ಮತ್ತು ಇಂಗ್ಲೆಂಡಿನ ಯುವಕ ಜಾಯ್ ಪರಸ್ಪರ ಪ್ರೀತಿಸುತ್ತಿದ್ದು, ಪೋಷಕರ ಸಮ್ಮತಿಯೊಂದಿಗೆ ಭಾನುವಾರ ವಿವಾಹವಾದರು. ಹಿಂದೂ ಸಂಪ್ರದಾಯದಂತೆ ಸಾಂಪ್ರದಾಯಿಕವಾಗಿ ಮದುವೆ ಸಮಾರಂಭ ನೆರವೇರಿತು. ಮದುವೆ ಬಗ್ಗೆ ಯುವತಿ ಹೇಳಿದ್ದೇನು ನೋಡಿ.
- Manjunath KB
- Updated on: Dec 15, 2025
- 8:26 am
KSRTC ಅಧಿಕಾರಿ ಸಾವಿಗೆ ಬಿಗ್ ಟ್ವಿಸ್ಟ್: ಆಫೀಸರ್ ಬಲಿಪಡೆದ ಅಕ್ರಮ ಪಡಿತರ ಅಕ್ಕಿ ಸಾಗಾಟ
ಸಮವಸ್ತ್ರ ಧರಿಸಿ ಬೆಳ್ಳಂಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದ ಕೆಎಸ್ಆರ್ಟಿಸಿ ಅಧಿಕಾರಿ ಭೀಕರ ಅಪಘಾತಕ್ಕೆ ಬಲಿಯಾಗಿರುವಂತಹ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಪಾಳ್ಯ ಬಳಿ ಶನಿವಾರ ನಡೆದಿದೆ. ರಸ್ತೆ ದಾಟುವ ವೇಳೆ ಏಕಾಏಕಿ ವೇಗವಾಗಿ ಬಂದ ಲಾರಿಯೊಂದು ಅಧಿಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಚಾಲಕ ಸಿಕ್ಕಿಬೀಳುವ ಭಯದಲ್ಲಿ ಅಪಘಾತವೆಸಗಿರಬಹುದು ಎಂದು ಶಂಕಿಸಲಾಗಿದೆ.
- Manjunath KB
- Updated on: Dec 14, 2025
- 7:00 pm
ನೆಲಮಂಗಲ: ಪೊಲೀಸ್ ಇಲಾಖೆಯಲ್ಲೊಬ್ಬ ಭೂಗಳ್ಳ; ಸುಮಾರು 25 ಕೋಟಿ ರೂ. ಜಮೀನು ಪರಭಾರೆ
ನೆಲಮಂಗಲದಲ್ಲಿ 25 ಕೋಟಿ ರೂ. ಮೌಲ್ಯದ ಭಾರೀ ಭೂಗಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸ್ ಇಲಾಖೆಯ ಹೆಡ್ ಕಾನ್ಸ್ಟೇಬಲ್ ವಿರುದ್ಧ ಭೂಮಿ ಮಾಲೀಕರಿಗೆ ತಿಳಿಯದಂತೆ ನಕಲಿ ದಾಖಲೆ ಸೃಷ್ಟಿಸಿ ಜಮೀನು ಲಪಟಾಯಿಸಿದ ಆರೋಪ ಕೇಳಿಬಂದಿದೆ. ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪ್ರಕರಣದಲ್ಲಿ ಇನ್ನೂ ಹಲವರ ಕೈವಾಡವಿರುವುದು ತಿಳಿದುಬಂದಿದೆ.
- Manjunath KB
- Updated on: Dec 13, 2025
- 8:39 am
ಬದುಕಿರುವ ಮಹಿಳೆಗೆ ಡೆತ್ ಸರ್ಟಿಫಿಕೇಟ್: ಆಸ್ತಿಗಾಗಿ ಬದುಕಿರುವ ವೃದ್ಧೆಯನ್ನೇ ಸಾಯಿಸಿದ್ರು!
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಚಿಕ್ಕನಾಯಕನಹಳ್ಳಿಯಲ್ಲಿ ಒಂದುವರೆ ಎಕರೆ ಭೂಮಿ ಲಪಟಾಯಿಸಲು ದೊಡ್ಡ ಗೋಲ್ಮಾಲೇ ನಡೆದಿದೆ. ವೃದ್ಧೆ ಬದುಕಿರುವಾಗಲೇ ಮರಣ ಪ್ರಮಾಣ ಪತ್ರ ಸಿದ್ಧಪಡಿಸಿ ಆಸ್ತಿ ಲಪಟಾಯಿಸಿದ ಆರೋಪ ಕೇಳಿಬಂದಿದೆ. ನಕಲಿ ದಾಖಲೆ ಸೃಷ್ಟಿಸಿ ವಂಚಿಸಿರುವ ವ್ಯಕ್ತಿ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗಿದೆ.
- Manjunath KB
- Updated on: Dec 12, 2025
- 7:23 pm