ಮಂಜುನಾಥ ಕೆಬಿ
ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.
ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದ ಬೆಂಗಳೂರಿನ ಯುವತಿ ಲಾಡ್ಜ್ನಲ್ಲಿ ನಿಗೂಢ ಸಾವು
ಬೆಂಗಳೂರಿನ ಯುವತಿ ಹಾಸನ ಜಿಲ್ಲೆಯ ಸಕಲೇಶಪುರ ಪ್ರವಾಸಕ್ಕೆ ತೆರಳಿದ್ದ ವೇಳೆ ಲಾಡ್ಜ್ ಒಂದರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಸದ್ಯ ಮಗಳ ಸಾವು ಪೋಷಕರಲ್ಲಿ ಹಲವು ಅನುಮಾನ ಮೂಡಿಸಿದ್ದು, ನ್ಯಾಯಕ್ಕಾಗಿ ಮೊರೆಯಿಟ್ಟಿದ್ದಾರೆ. ಇನ್ನು ಈ ಕುರಿತಾಗಿ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Manjunath KB
- Updated on: Sep 16, 2026
- 6:29 pm
ಪ್ರತ್ಯೇಕ ಪ್ರಕರಣ: ಯುವಕ ಸೇರಿ ನೀರಲ್ಲಿ ಮುಳುಗಿ ಮೂವರ ದಾರುಣ ಸಾವು
ಹಾಸನ ಜಿಲ್ಲೆಯ ಹೊಳೆನರಸೀಪುರ ಮತ್ತು ಉತ್ತರ ಕನ್ನಡದ ಶಿರಸಿಯಲ್ಲಿ ಸಂಭವಿಸಿದ ಪ್ರತ್ಯೇಕ ನೀರಿನ ದುರಂತಗಳಲ್ಲಿ ಜಾನುವಾರು ತೊಳೆಯಲು ಹೋದ ಇಬ್ಬರು ಹಾಗೂ ಈಜಲು ತೆರಳಿದ್ದ 17 ವರ್ಷದ ಯುವಕ ಸೇರಿ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಸಂಬಂಧ ಪ್ರಕರಣಗಳು ದಾಖಲಾಗಿವೆ.
- Manjunath KB
- Updated on: Sep 15, 2026
- 6:48 pm
ರಮೇಶ್ ಬಳಿಕ ಸತೀಶ್ ಜಾರಕಿಹೊಳಿ ಮುಗಿಸಲೂ ಯತ್ನ: ಸ್ಫೋಟಕ ಹೇಳಿಕೆ ಕೊಟ್ಟ ಹೆಚ್.ಡಿ. ಕುಮಾರಸ್ವಾಮಿ
ಅಮೆರಿಕಾ ಪ್ರವಾಸ ಮುಗಿಸಿ ಮರಳಿದ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣದ ಬಗ್ಗೆ ಮಾತನಾಡಿದ್ದಾರೆ. ED ದಾಳಿಗಳು, ರಮೇಶ್ ಹಾಗೂ ಸತೀಶ್ ಜಾರಕಿಹೊಳಿ ಪ್ರಕರಣಗಳು, ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ಸರ್ಕಾರದ 100 ದಿನಗಳ ಆಡಳಿತದ ಕುರಿತು ಪ್ರಶ್ನಿಸಿದ್ದಾರೆ. ವಿಜಯದಶಮಿ ಯುದ್ಧಕ್ಕೆ ಕಾಲ ಎಂದ ಅವರು, ಹಲವು ವಿಷಯಗಳ ಬಗ್ಗೆ ಟೀಕಿಸಿದರು.
- Manjunath KB
- Updated on: Sep 15, 2026
- 1:56 pm
ಜೈಲಿನಲ್ಲಿರುವ ಪ್ರಜ್ವಲ್ಗೆ ಫೋನ್ ಕೊಟ್ಟವರ್ಯಾರು?: ಕೆಪಿಎಸ್ಸಿ, ನೈಸ್ ಹಗರಣ ಎತ್ತಿದ್ದಕ್ಕೇ ಟಾರ್ಗೆಟ್ ಎಂದ ಕುಮಾರಸ್ವಾಮಿ
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಪ್ರಕರಣ ತಮ್ಮ ಕುಟುಂಬವನ್ನು ಗುರಿಯಾಗಿಸುವ ರಾಜಕೀಯ ಷಡ್ಯಂತ್ರವೆಂದು ಆರೋಪಿಸಿದ್ದಾರೆ. ಕೆಪಿಎಸ್ಸಿ, ನೈಸ್ ಹಗರಣಗಳನ್ನು ಎತ್ತಿದ ನಂತರ ಈ ಹೊಸ ಬೆಳವಣಿಗೆಗಳು ಬರುತ್ತಿವೆ ಎಂದು ಅವರು ಹೇಳಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ದೇವೇಗೌಡರ ಕುಟುಂಬವನ್ನು ಸರ್ವನಾಶ ಮಾಡಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಆಪಾದಿಸಿದ್ದಾರೆ.
- Manjunath KB
- Updated on: Sep 15, 2026
- 1:44 pm
ಅಲ್ಲೋಲ ಕಲ್ಲೋಲ ಹೇಳಿಕೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಹೆಚ್.ಡಿ. ಕುಮಾರಸ್ವಾಮಿ: ಕೇಂದ್ರ ಸಚಿವ ಹೇಳಿದ್ದಿಷ್ಟು
ಹೆಚ್.ಡಿ. ಕುಮಾರಸ್ವಾಮಿ ಅವರು ಕರ್ನಾಟಕ ಸರ್ಕಾರದ ವಿರುದ್ಧ ಹಲವು ಅಕ್ರಮಗಳ ಆರೋಪ ಮಾಡಿದ್ದಾರೆ. ಕೆಪಿಎಸ್ಸಿ ಮತ್ತು ಎಇ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳನ್ನು ಉಲ್ಲೇಖಿಸಿ, ಈ ಬಗ್ಗೆ ದಾಖಲೆಗಳನ್ನು ಜನತೆಯ ಮುಂದಿಡುತ್ತೇನೆ ಎಂದಿದ್ದಾರೆ. ತಮ್ಮ ಟೀಕೆ ಯಾವುದೇ ವೈಯಕ್ತಿಕ ದ್ವೇಷ ಅಥವಾ ಜಾತಿ ಆಧಾರಿತವಲ್ಲ, ಬದಲಿಗೆ ರಾಜ್ಯದ ಹಿತಕ್ಕಾಗಿ ಎಂದು ಸ್ಪಷ್ಟಪಡಿಸಿದ್ದಾರೆ.
- Manjunath KB
- Updated on: Sep 15, 2026
- 1:27 pm
ಬರದಲ್ಲೂ ತುಂಬಿ ತುಳುಕಿದ ಬೇಲೂರು ಹಳೆಬೀಡು ಕೆರೆಗಳು: ಎತ್ತಿನಹೊಳೆ ಯೋಜನೆಯ ಪರಿಣಾಮ!
ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿರುವ ನಡುವೆಯೂ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಳೆಬೀಡು ಹೋಬಳಿಯ 20ಕ್ಕೂ ಹೆಚ್ಚು ಕೆರೆಗಳು ಎತ್ತಿನಹೊಳೆ ಯೋಜನೆಯ ನೀರಿನಿಂದ ತುಂಬಿ ಕೋಡಿ ಬಿದ್ದಿವೆ. ಸಮುದ್ರ ಸೇರುತ್ತಿದ್ದ ನೀರು ಬಯಲುಸೀಮೆಯ ಕೆರೆಗಳಿಗೆ ಹರಿದುಬರುತ್ತಿದ್ದು, ಜನ-ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆಗೆ ಕೊಂಚ ಪರಿಹಾರ ಒದಗಿಸಿದೆ.
- Manjunath KB
- Updated on: Sep 15, 2026
- 12:30 pm
‘ಮದುವೆ ಮಾಡಿಸಿ ಸಾರ್’ ಎಂದು ಶಾಸಕರಿಗೆ ಯುವಕನ ಅರ್ಜಿ! ಎ ಮಂಜು ಕೊಟ್ಟರು ಅಚ್ಚರಿಯ ಸಲಹೆ
ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ ಎಂದು ಎಂಬಿಎ ಪದವೀಧರ ಯುವಕನೊಬ್ಬ ಪ್ರಜಾಸೇವಾ ಆಂದೋಲನದಲ್ಲಿ ಶಾಸಕರಿಗೆ ಅರ್ಜಿ ಸಲ್ಲಿಸಿರುವ ಅಚ್ಚರಿಯ ಘಟನೆ ಅರಕಲಗೂಡಿನ ಮಲ್ಲಿಪಟ್ಟಣದಲ್ಲಿ ನಡೆದಿದೆ. ರೈತನ ಮಗ ಎಂಬ ಕಾರಣಕ್ಕೆ ಯುವತಿಯರು ಒಪ್ಪುತ್ತಿಲ್ಲ ಎಂದು ಅಳಲು ತೋಡಿಕೊಂಡ ಯುವಕನಿಗೆ ಶಾಸಕ ಎ. ಮಂಜು, ‘ನೀನೇ ಯಾರನ್ನಾದರೂ ಪ್ರೀತಿಸಿ ಮದುವೆಯಾಗು’ ಎಂದು ಸಲಹೆ ನೀಡಿದ್ದಾರೆ.
- Manjunath KB
- Updated on: Sep 15, 2026
- 4:34 pm
ಹಾಸನದಲ್ಲಿ ಕೆಎಸ್ಆರ್ಟಿಸಿ ಬಸ್ ಅಪಘಾತ: ಗೌರಿ ಹಬ್ಬಕ್ಕೆ ತವರಿಗೆ ಬಂದಿದ್ದ ಗೃಹಿಣಿ ಸಾವು
ಗೌರಿ ಗಣೇಶ ಹಬ್ಬಕ್ಕೆ ಬೆಂಗಳೂರಿನಿಂದ ಹಾಸನದ ತವರಿಗೆ ಬಂದಿದ್ದ 31 ವರ್ಷದ ಅಪರ್ಣಾ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕೆಎಸ್ಆರ್ಟಿಸಿ ಬಸ್ ಚಾಲಕನ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣವಾಗಿದ್ದು, ಸ್ಕೂಟಿಯಲ್ಲಿ ಸ್ನೇಹಿತೆಯೊಂದಿಗೆ ತೆರಳುತ್ತಿದ್ದ ಅಪರ್ಣಾ ಮೇಲೆ ಬಸ್ ಹರಿದು ಹೃದಯ ವಿದ್ರಾವಕ ಘಟನೆ ಸಂಭವಿಸಿದೆ.
- Manjunath KB
- Updated on: Sep 13, 2026
- 9:10 am
ಮೃತ ಯೋಧನಿಗೆ ಗೌರವ ಸಲ್ಲಿಸಿಲ್ಲವೆಂದು ಹಾಸನ ಡಿಸಿ ಕಚೇರಿ ಬಳಿ ಪಾರ್ಥಿವ ಶರೀರ ತಂದು ಪ್ರತಿಭಟನೆ
ಮೃತ ಯೋಧ ಮಧು ಅವರ ಪಾರ್ಥಿವ ಶರೀರವನ್ನು ನೇರವಾಗಿ ಡಿಸಿ ಕಚೇರಿಗೆ ತಂದಿದ್ದರಿಂದ ಪ್ರತಿಭಟನೆ ತೀವ್ರಗೊಂಡಿತು. ಜಿಲ್ಲಾಧಿಕಾರಿ ಲತಾಕುಮಾರಿ ಸ್ಥಳಕ್ಕೆ ಧಾವಿಸಿ, ಆಲೂರಿನಲ್ಲಿ ವ್ಯವಸ್ಥೆ ಮಾಡಿದ್ದ ಬಗ್ಗೆ ಸ್ಪಷ್ಟನೆ ನೀಡಿದರು. ಕುಟುಂಬಸ್ಥರನ್ನು ಸಮಾಧಾನಪಡಿಸಿ, ಪಾರ್ಥಿವ ಶರೀರವನ್ನು ಅಂತಿಮ ಸಂಸ್ಕಾರಕ್ಕಾಗಿ ಹಂಜೀಹಳ್ಳಿಗೆ ಕೊಂಡೊಯ್ಯಲು ಮನವೊಲಿಸಿದರು. ಗೊಂದಲ ನಿವಾರಿಸಿ, ಕುಟುಂಬಕ್ಕೆ ಸಾಂತ್ವನ ನೀಡಲಾಯಿತು.
- Manjunath KB
- Updated on: Sep 12, 2026
- 8:21 pm
ಹಾಸನ: ಕೆಂಚಟ್ಟಹಳ್ಳಿ ಫ್ಲೈಓವರ್ ಮೇಲೆ ಟ್ಯಾಂಕರ್ ಪಲ್ಟಿ, ರಸ್ತೆಯಲ್ಲಿ ಹರಿದ ಸಾವಿರಾರು ಲೀಟರ್ ಪೆಟ್ರೋಲ್
ಹಾಸನ ಹೊರವಲಯದ ಕೆಂಚಟ್ಟಹಳ್ಳಿ ಫ್ಲೈಓವರ್ ಮೇಲೆ ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಪಲ್ಟಿಯಾಗಿ, ಸಾವಿರಾರು ಲೀಟರ್ ಇಂಧನ ರಸ್ತೆಯಲ್ಲಿ ಹರಿದಿದೆ. ಅಗ್ನಿ ಅವಘಡದ ಆತಂಕದಿಂದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಮೇಲ್ಸೇತುವೆ ರಸ್ತೆ ಮೇಲೆ ಸಂಚಾರ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ವಿಡಿಯೋ ಇಲ್ಲಿದೆ ನೋಡಿ.
- Manjunath KB
- Updated on: Sep 12, 2026
- 12:57 pm
ಒಂದೇ ದಿನ ಇಬ್ಬರು ಸರ್ಕಾರಿ ನೌಕಕರು ಸಾವು: ಹಾಸನದಲ್ಲಿ ಬೆಚ್ಚಿಬೀಳಿಸಿದ ಸರಣಿ ಹೃದಯಘಾತ ಪ್ರಕರಣಗಳು
ಕಳೆದ ವರ್ಷ ಹಾಸನ ಜಿಲ್ಲೆಯ ಬೆಚ್ಚಿ ಬೆಳಿಸಿದಂತ ಹೃದಯಾಘಾತ ಸರಣಿ ಸಾವು ಪ್ರಕರಣಗಳ ಬಳಿಕ ಮತ್ತೆ ಆತಂಕಕಾರಿ ಬೆಳವಣಿಗೆ ನಡೆದಿದೆ. ಇಂದು (ಸೆಪ್ಟೆಂಬರ್ 11) ಒಂದೇ ದಿನ ಜಿಲ್ಲೆಯಲ್ಲಿ ಇಬ್ಬರು ಅಧಿಕಾರಿಗಳು ಹೃದಯಾಘಾತಕ್ಕೆ ಬಲಿಯಾಗಿರೋದು ಸರ್ಕಾರಿ ನೌಕರರ ದಿಗಿಲುಗೊಳಿಸಿದೆ. ಶಿಕ್ಷಣ ಇಲಾಖೆಯ 45 ವರ್ಷದ ಅಧಿಕಾರಿ ವೇಣುಗೋಪಾಲ್ ಹಾಗೂ ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ 55 ವರ್ಷದ ಡಾಕ್ಟರ್ ವೆಂಕಟೇಶ್ ಸಾವು ಆತಂಕ ಸೃಷ್ಟಿಸಿದ್ದು, ವಾರದ ಹಿಂದೆ ನಡೆದ 17 ವರ್ಷದ ಬಾಲಕನ ಸಾವು ಜಿಲ್ಲೆಯಲ್ಲಿ ಮತ್ತೆ ಸರಣಿ ಹೃದಯಘಾತ ಪ್ರಕರಣ ನಡೆಯುತ್ತಿದೆ ಎಂಬ ಅನುಮಾನ ಮೂಡಿಸಿದೆ
- Manjunath KB
- Updated on: Sep 11, 2026
- 7:07 pm
ಹಾಸನ ಸಂಸದ ಶ್ರೇಯಸ್ ಪಟೇಲ್,-ಶಾಸಕ ಎ.ಮಂಜು ನಡುವೆ ತಿಕ್ಕಾಟ: ಅಧಿಕಾರಿಗಳಿಗೆ ಸಂಕಟ!
ಹಾಸನ ಸಂಸದ ಶ್ರೇಯಸ್ ಪಟೇಲ್ ಮತ್ತು ಶಾಸಕ ಎ. ಮಂಜು ನಡುವಿನ ರಾಜಕೀಯ ತಿಕ್ಕಾಟ ತೀವ್ರಗೊಂಡಿದ್ದು, ನಿಯಮ ಉಲ್ಲಂಘಿಸಿ ಸಭೆ ನಡೆಸಿದ್ದಾರೆಂದು ಆರೋಪಿಸಿ ಜಿಲ್ಲಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳ ವಿರುದ್ಧ ಶಾಸಕರು ಹಕ್ಕುಚ್ಯುತಿ ದೂರು ನೀಡಿದ್ದಾರೆ. ಆದರೆ ಶಾಸಕರ ನಡೆ ಖಂಡಿಸಿರುವ ಸಂಸದರು, ಇದೇ ರೀತಿ ಮುಂದುವರಿದರೆ ತಾನು ಕೂಡ ಲೋಕಸಭಾ ಸ್ಪೀಕರ್ಗೆ ದೂರು ನೀಡಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.
- Manjunath KB
- Updated on: Sep 11, 2026
- 6:03 pm