ನೆಮ್ಮದಿಯಾಗಿ ಬದುಕಲು ಬಿಡ್ತಿಲ್ಲ: ಜಿಲ್ಲಾಧಿಕಾರಿ ಮುಂದೆ ಬಿಕ್ಕಿಬಿಕ್ಕಿ ಅತ್ತ ಮಹಿಳೆ

Updated on: Sep 21, 2025 | 12:09 PM

ಹಾಸನದ ಡಿಸಿ ಕಛೇರಿಯಲ್ಲಿ ನಡೆದ ಜನ ಸ್ಫಂದನ ಸಭೆಯಲ್ಲಿ ಭಾಗಿಯಾದ ಜಿಲ್ಲೆಯ ಆಲೂರಿನ ಮಹಿಳೆಯೊಬ್ಬರು, ಡಿಸಿ ಎದುರು ಕಣ್ಣೀರಿಟ್ಟಿದ್ದಾರೆ. ಏಕೆಂದರೆ ಅವರ ಮನೆಗೆ ಅನಾಮಿಕ ಪತ್ರಗಳು ಬರುತ್ತಿವೆ ಅಂತೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರು ಯಾವುದೇ ಪ್ರಯೋಜವಾಗಿಲ್ಲವಂತೆ. ಈ ಸಮಸ್ಯೆಯನ್ನು ಹೇಳುತ್ತಾ ಜಿಲ್ಲಾಧಿಕಾರಿ ಮುಂದೆ ಮಹಿಳೆ ಕಣ್ಣೀರಿಟ್ಟಿದ್ದಾರೆ.

ಹಾಸನ, ಸೆಪ್ಟೆಂಬರ್ 20: ಶನಿವಾರ ಹಾಸನದ ಡಿಸಿ ಕಛೇರಿಯಲ್ಲಿ ನಡೆದ ಜನ ಸ್ಪಂದನ‌‌ ಸಭೆಯಲ್ಲಿ ಆಲೂರಿನ ಮಹಿಳೆಯಬ್ಬರು ಡಿಸಿ ಮುಂದೆ ಕಣ್ಣೀರಿಟ್ಟಿದ್ದಾರೆ. ಮಹಿಳೆ ಮನೆಗೆ ಅನಾಮಿಕ ಪತ್ರಗಳು ಬರುತ್ತಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರು ಯಾವುದೇ ಕ್ರಮ ತೆಗೆದುಕೊಂಡಿಲ್ಲವೆಂದು ಜಿಲ್ಲಾಧಿಕಾರಿ ಲತಾ ಕುಮಾರಿ ಮುಂದೆ ಕಣ್ಣೀರಿಟ್ಟಿದ್ದಾರೆ. ಮಹಿಳೆ‌ಯ ಸಮಸ್ಯೆ ಆಲಿಸಿದ ಡಿಸಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ವೀಡಿಯೋ ನೋಡಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us