ಅಧಿಕಾರದ ದುರಾಸೆ ಇಲ್ಲ ಮತ್ತು ಡಬಲ್ ಗೇಮ್ ಅಡೋದು ನಂಗೊತ್ತಿಲ್ಲ: ವಿ ಸೋಮಣ್ಣ

|

Updated on: Nov 16, 2023 | 5:06 PM

ರಸ್ತೆಗಳ ಮೇಲೆ ನಡೆಯುವ ಚರ್ಚೆಗಳಿಗೆ ಉತ್ತರ ನೀಡಕ್ಕಾಗಲ್ಲ, ಕಳೆದ 45 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿದ್ದು ಅಧಿಕಾರದ ಮಜಲುಗಳನ್ನು ಅನುಭವಿಸಿರುವುದಾಗಿ ಸೋಮಣ್ಣ ಹೇಳಿದರು. ತಾನು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಮಾಧ್ಯಮದವರಿಗೆ ತಿಳಿಸದಿರಲು ಸಾಧ್ಯವಿಲ್ಲ ಎಂದು ಹೇಳಿದ ಅವರು ಸ್ವಲ್ಪ ದಿನಗಳ ನಂತರ ಮುಂದಿನ ರಾಜಕೀಯ ನಡೆ ಬಗ್ಗೆ ತಿಳಿಸುವುದಾಗಿ ಹೇಳಿದರು.

ಬೆಂಗಳೂರು: ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಸಚಿವ ವಿ ಸೋಮಣ್ಣ (V Somanna) ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಒಂದು ಹಂತದಲ್ಲಿ ತಾಳ್ಮೆ ಕಳೆದಕೊಂಡರು. ಬಿಜೆಪಿ ರಾಜ್ಯ ಘಟಕಕ್ಕೆ ಬಿವೈ ವಿಜಯೇಂದ್ರರನ್ನು (BY Vijayendra) ಅಧ್ಯಕ್ಷ ಮಾಡಿದ್ದು ಅವರಲ್ಲಿ ನಿರಾಸೆ ಮತ್ತು ಬೇಸರ ಮೂಡಿಸಿದೆ. ಕಾಂಗ್ರೆಸ್ ಪಕ್ಷ ಸೇರುವ ಯೋಚನೆಯೇನಾದರೂ ಇದೆಯಾ ಅಂತ ಮಾಧ್ಯಮದವರು ಕೇಳಿದಾಗ ಸಿಡಿಮಿಡಿಗೊಂಡ ಅವರು, ತನಗೆ ಯಾವುದೇ ಪಕ್ಷದಿಂದ ಲೋಕ ಸಭಾ ಚುನಾವಣೆಯಲ್ಲಿ (Lok Sabha polls) ಸ್ಪರ್ಧಿಸುವ ಆಸೆಯಿಲ್ಲ, ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, ಮತ್ತು ಡಬಲ್ ಗೇಮ್ ಆಡೋದು ತನಗೆ ಒಗ್ಗದ ವಿಚಾರ ಎಂದು ಹೇಳಿದರು. ರಸ್ತೆಗಳ ಮೇಲೆ ನಡೆಯುವ ಚರ್ಚೆಗಳಿಗೆ ಉತ್ತರ ನೀಡಕ್ಕಾಗಲ್ಲ, ಕಳೆದ 45 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿದ್ದು ಅಧಿಕಾರದ ಮಜಲುಗಳನ್ನು ಅನುಭವಿಸಿರುವುದಾಗಿ ಸೋಮಣ್ಣ ಹೇಳಿದರು. ತಾನು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಮಾಧ್ಯಮದವರಿಗೆ ತಿಳಿಸದಿರಲು ಸಾಧ್ಯವಿಲ್ಲ ಎಂದು ಹೇಳಿದ ಅವರು ಸ್ವಲ್ಪ ದಿನಗಳ ನಂತರ ಮುಂದಿನ ರಾಜಕೀಯ ನಡೆ ಬಗ್ಗೆ ತಿಳಿಸುವುದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on