DK Shivakumar; ಕೆಲದಿನಗಳಿಂದ ನಿದ್ರೆ ಮಾಡಿಲ್ಲ, ದೇಹಕ್ಕೆ ವಿಶ್ರಾಂತಿಯ ಅಗತ್ಯವಿದೆ: ಡಿಕೆ ಶಿವಕುಮಾರ್, ನಿಯೋಜಿತ ಉಪಮುಖ್ಯಮಂತ್ರಿ

ಅರುಣ್​ ಕುಮಾರ್​ ಬೆಳ್ಳಿ

Updated on: May 20, 2023 | 10:29 AM

ಮುಖ್ಯಮಂತ್ರಿಯಾಗಲಿಲ್ಲವೆನ್ನುವ ಕಹಿ ಕ್ರಮೇಣ ಅವರಿಂದ ಮರೆಯಾಗುತ್ತಿದೆ ಅಂತೆನಿಸುತ್ತಿದೆ. ಕಳೆದ ಕೆಲ ದಿನ ದಿನಗಳಿಂದ ಅವರ ಮುಖದಲ್ಲಿ ನಗು ಕಾಣದಾಗಿತ್ತು

ಬೆಂಗಳೂರು: ದೆಹಲಿಯಿಂದ ಇಂದು ಬೆಳಗ್ಗೆ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ರಾಜ್ಯದ ನಿಯೋಜಿತ ಉಪಮುಖ್ಯಮಂತ್ರಿ (designated deputy CM) ಡಿಕೆ ಶಿವಕುಮಾರ್ (DK Shivakumar) ಭಾರೀ ಪ್ರಮಾಣದಲ್ಲಿ ದಣಿದಿದ್ದರು. ಆಯಾಸ, ಬಳಲಿಕೆ (fatigue) ಅವರ ಮುಖದಲ್ಲಿ ಎದ್ದು ಕಾಣುತಿತ್ತು. ಮಾಧ್ಯಮ ಪ್ರತಿನಿಧಿಗಳಿಗೆ ಅವರು ಹೇಳಿದ್ದು ಅದನ್ನೇ. ಕೆಲ ದಿನಗಳಿಂದ ನಿದ್ರೇನೇ ಇಲ್ಲ, ಈಗ ಮನೆಗೆ ಹೋಗಿ ಫ್ರೆಶ್ ಆಗಬೇಕು, ಬಾಡಿಗೆ ರೆಸ್ಟ್ ಬೇಕಾಗಿದೆ, ಆಮೇಲೆ ಮಾತಾಡ್ತೀನಿ ಅಂತ ಅವರು ಹೇಳುತ್ತಾರೆ. ಮುಖ್ಯಮಂತ್ರಿಯಾಗಲಿಲ್ಲವೆನ್ನುವ ಕಹಿ ಕ್ರಮೇಣ ಅವರಿಂದ ಮರೆಯಾಗುತ್ತಿದೆ ಅಂತೆನಿಸುತ್ತಿದೆ. ಕಳೆದ ಕೆಲ ದಿನ ದಿನಗಳಿಂದ ಅವರ ಮುಖದಲ್ಲಿ ನಗು ಕಾಣದಾಗಿತ್ತು. ಮಾಧ್ಯಮದವರೊಂದಿಗೆ ಮಾತಾಡುವಾಗ ಮುಖದಲ್ಲಿ ಈಗ ನಗು ಕಾಣುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.