AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವೇಗೌಡರ ಹೆಸರು ಹೇಳಿಕೊಂಡು ಬೆಳೆದ ಸಹಕಾರ ಸಚಿವನಿಗೆ ಮೈತುಂಬಾ ದುರಹಂಕಾರ: ಹೆಚ್ ಡಿ ಕುಮಾರಸ್ವಾಮಿ

ದೇವೇಗೌಡರ ಹೆಸರು ಹೇಳಿಕೊಂಡು ಬೆಳೆದ ಸಹಕಾರ ಸಚಿವನಿಗೆ ಮೈತುಂಬಾ ದುರಹಂಕಾರ: ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 25, 2023 | 6:04 PM

ಅವನು ಋಣ ತೀರಿಸುವ ಅಗತ್ಯವಿಲ್ಲ, ಕಳೆದ ಲೋಕ ಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸದ್ದ ದೇವೇಗೌಡರಿಗೆ ಇವರೆಲ್ಲ ಹೇಗೆ ಋಣ ತೀರಿಸಿದರು ಅಂತ ಗೊತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು. ದೇವೇಗೌಡರ ಹೆಸರು ಹೇಳಿಕೊಂಡು ಬೆಳೆದ ಅವನಿಗೆ ದುರಹಂಕಾರ ತಲೆಗೇರಿದೆ, ಆದರೆ ಕಾಲ ಒಂದೇ ತೆರನಾಗಿರಲ್ಲ, ದೇವೇಗೌಡರ ಮಕ್ಕಳು ಇನ್ನು ಬದುಕಿದ್ದಾರೆ ಎಂದು ಕುಮಾರಸ್ವಾಮಿ ಎಚ್ಚರಿಸಿದರು.

ಬೆಂಗಳೂರು: ಬೆಂಗಳೂರಲ್ಲಿ ಇಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು (HD Devegowda) ನಡೆಸಿದ ಪತ್ರಿಕಾ ಗೋಷ್ಟಿಯಲ್ಲಿ ಮಾತಾಡಿದ ಹೆಚ್ ಡಿ ಕುಮಾರಸ್ವಾಮಿ (HD Kumaraswamy), ಸಹಕಾರ ಸಚಿವ ಕೆಎನ್ ರಾಜಣ್ಣರನ್ನು (KN Rajanna) ತರಾಟೆಗೆ ತೆಗೆದುಕೊಂಡರು. ವಿಧಾನಸಭಾ ಚುನಾವಣೆಯ ವೇಳೆ ರಾಜಣ್ಣ, ದೇವೇಗೌಡರ ಬಗ್ಗೆ ಹಗುರವಾಗಿ ಮಾತಾಡಿದ್ದರು. ದೇವೇಗೌಡರು ಚುನಾವಣೆಯಲ್ಲಿ ಸ್ಪರ್ಧಿಸಬೇಕು ಅವರ ಋಣ ತಮ್ಮ ಮೇಲಿದೆ ಅದನ್ನು ತೀರಿಸಬೇಕು ಎಂದು ರಾಜಣ್ಣ ವ್ಯಂಗ್ಯವಾಗಿ ಮಾತಾಡಿದ್ದರು. ಅದನ್ನು ನೆನಪಿಸಿಕೊಂಡ ಕುಮಾರಸ್ವಾಮಿ ರಾಜಣ್ಣ ವಿರುದ್ಧ ಏಕವಚನದಲ್ಲಿ ರೇಗಾಡಿದರು, 2004 ರ ಚುನಾವಣೆಯಲ್ಲಿ ದೇವೇಗೌಡರಿಗೆ ಮೈಯಲ್ಲಿ ಹುಷಾರಿಲ್ಲದಿದ್ದರೂ ಕೊನೆಯ ದಿನ ಅವನ ಪರವಾಗಿ ಪ್ರಚಾರ ಮಾಡಿ 700 ವೋಟುಗಳಿಂದ ಗೆಲ್ಲಿಸಿದ್ದರು. ಅವನು ಋಣ ತೀರಿಸುವ ಅಗತ್ಯವಿಲ್ಲ, ಕಳೆದ ಲೋಕ ಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸದ್ದ ದೇವೇಗೌಡರಿಗೆ ಇವರೆಲ್ಲ ಹೇಗೆ ಋಣ ತೀರಿಸಿದರು ಅಂತ ಗೊತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು. ದೇವೇಗೌಡರ ಹೆಸರು ಹೇಳಿಕೊಂಡು ಬೆಳೆದ ಅವನಿಗೆ ದುರಹಂಕಾರ ತಲೆಗೇರಿದೆ, ಆದರೆ ಕಾಲ ಒಂದೇ ತೆರನಾಗಿರಲ್ಲ, ದೇವೇಗೌಡರ ಮಕ್ಕಳು ಇನ್ನು ಬದುಕಿದ್ದಾರೆ ಎಂದು ಕುಮಾರಸ್ವಾಮಿ ಎಚ್ಚರಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ