ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಆಗುವುದಕ್ಕೂ ಮೊದಲು ಬೆಂಗಳೂರಿನ ಆರ್ಆರ್ ನಗರದಲ್ಲಿರುವ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ನಲ್ಲಿ ಪಾರ್ಟಿ ಮಾಡುತ್ತಿದ್ದರು. ಈ ಪಾರ್ಟಿಯಲ್ಲಿ ಚಿಕ್ಕಣ್ಣ, ಪ್ರದೋಶ್ ಸೇರಿ ಅನೇಕರು ಇದ್ದರು. ದರ್ಶನ್ ಅವರು ತಮಗೆ ವೈಯಕ್ತಿಕ ಕೆಲಸ ಇದೆ ಎಂದು ರೆಸ್ಟೋರೆಂಟ್ನಿಂದ ಶೆಡ್ನತ್ತ ಹೊರಡುವವರಿದ್ದರು. ಈ ವೇಳೆ ಚಿಕ್ಕಣ್ಣ ಅವರು ದರ್ಶನ್ ಕಾರು ಹತ್ತಲಿಲ್ಲ. ಆದರೆ, ಪ್ರದೋಶ್ ಮಾತ್ರ ‘ಬಾಸ್ ನಾನೂ ಬರ್ತಿನಿ’ ಎಂದು ಕಾರು ಏರಿದರು. ಈ ಕಾರಣಕ್ಕೆ ಅವರು ಕೂಡ ಲಾಕ್ ಆದರು. ದರ್ಶನ್ ಜೊತೆ ಇದ್ದಿದ್ದಕ್ಕೆ ಪ್ರದೋಶ್ ಕೂಡ ಈಗ ಅರೆಸ್ಟ್ ಆಗಿದ್ದಾರೆ. ಕೊಲೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನವನ್ನೂ ಇವರೇ ತೆಗೆದುಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.