‘ಬಾಸ್ ಬಾಸ್’ ಎಂದು ಹೋಗಿದ್ದೇ ತಪ್ಪಾಯ್ತು; ಕೊಲೆ ಕೇಸ್ನಲ್ಲಿ ಪ್ರದೋಶ್ ಸಿಕ್ಕಿಬಿದ್ದಿದ್ದೇ ವಿಚಿತ್ರ
ರೇಣುಕಾ ಸ್ವಾಮಿ ಕೊಲೆ ನಡೆಯುವ ಮುಂಚೆ ನಟ ದರ್ಶನ್ ಹಾಗೂ ಇನ್ನೂ ಕೆಲವರು, ಪ್ರಕರಣದ ಮತ್ತೊಬ್ಬ ಆರೋಪಿ ವಿನಯ್ ಒಡೆತನದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ನಲ್ಲಿ ಕುಡಿದು ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಸಹ ಇದ್ದರು. ನಟ ದರ್ಶನ್ ಪಟ್ಟಣಗೆರೆ ಶೆಡ್ಗೆ ಹೋಗುವಾಗ ಚಿಕ್ಕಣ್ಣರನ್ನು ಸಹ ಕರೆದರಂತೆ. ಆದರೆ ಚಿಕ್ಕಣ್ಣ ದರ್ಶನ್ ಜೊತೆ ಹೋಗಲು ಒಪ್ಪಿಲ್ಲ.
ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಆಗುವುದಕ್ಕೂ ಮೊದಲು ಬೆಂಗಳೂರಿನ ಆರ್ಆರ್ ನಗರದಲ್ಲಿರುವ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ನಲ್ಲಿ ಪಾರ್ಟಿ ಮಾಡುತ್ತಿದ್ದರು. ಈ ಪಾರ್ಟಿಯಲ್ಲಿ ಚಿಕ್ಕಣ್ಣ, ಪ್ರದೋಶ್ ಸೇರಿ ಅನೇಕರು ಇದ್ದರು. ದರ್ಶನ್ ಅವರು ತಮಗೆ ವೈಯಕ್ತಿಕ ಕೆಲಸ ಇದೆ ಎಂದು ರೆಸ್ಟೋರೆಂಟ್ನಿಂದ ಶೆಡ್ನತ್ತ ಹೊರಡುವವರಿದ್ದರು. ಈ ವೇಳೆ ಚಿಕ್ಕಣ್ಣ ಅವರು ದರ್ಶನ್ ಕಾರು ಹತ್ತಲಿಲ್ಲ. ಆದರೆ, ಪ್ರದೋಶ್ ಮಾತ್ರ ‘ಬಾಸ್ ನಾನೂ ಬರ್ತಿನಿ’ ಎಂದು ಕಾರು ಏರಿದರು. ಈ ಕಾರಣಕ್ಕೆ ಅವರು ಕೂಡ ಲಾಕ್ ಆದರು. ದರ್ಶನ್ ಜೊತೆ ಇದ್ದಿದ್ದಕ್ಕೆ ಪ್ರದೋಶ್ ಕೂಡ ಈಗ ಅರೆಸ್ಟ್ ಆಗಿದ್ದಾರೆ. ಕೊಲೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನವನ್ನೂ ಇವರೇ ತೆಗೆದುಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
