‘ದರ್ಶನ್ ಸಾಕು ನಾಯಿ ಕಚ್ಚಿದರೂ ಅವರ ಮನೆಯವರು ಯಾರೂ ಸಹಾಯಕ್ಕೆ ಬಂದಿಲ್ಲ’; ಮಹಿಳೆಯ ಅಸಮಾಧಾನ  

|

Updated on: Dec 12, 2023 | 8:18 AM

‘ಉದ್ದೇಶಪೂರ್ವಕವಾಗಿ ನಾಯಿಗಳನ್ನು ಬಿಡಲಾಗಿದೆ. ನಾಯಿ ಕಚ್ಚಿದರೂ ಯಾರೂ ಸಹಾಯಕ್ಕೆ ಬಂದಿಲ್ಲ. ನನ್ನ ಹೊಟ್ಟೆ ಭಾಗದಲ್ಲಿ ರಕ್ತ ಬರುತ್ತಿತ್ತು. ಇಂಜೆಕ್ಷನ್ ತೆಗೆದುಕೊಂಡುಬಿಡಿ ಸರಿ ಆಗುತ್ತದೆ ಎಂದು ಮನೆಯ ಸ್ಟಾಫ್ ಹೇಳಿದರು’ ಎಂದಿದ್ದಾರೆ ಮಹಿಳೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅವರು ಸಾಕಿದ್ದ ಶ್ವಾನಗಳು ಅಮಿತಾ ಜಿಂದಾಲ್ ಎಂಬ ಮಹಿಳೆಗೆ ಕಚ್ಚಿವೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದಾರೆ. ಇದರಲ್ಲಿ ದರ್ಶನ್ (Darshan) ಹೆಸರನ್ನು ಕೂಡ ಅವರು ಉಲ್ಲೇಖ ಮಾಡಿದ್ದಾರೆ. ಈ ಪ್ರಕರಣದಲ್ಲಿ ಎಫ್​​ಐಆರ್​ ದಾಖಲು ಮಾಡಿದ್ದಾರೆ ಪೊಲೀಸರು. ‘ಉದ್ದೇಶಪೂರ್ವಕವಾಗಿ ನಾಯಿಗಳನ್ನು ಬಿಡಲಾಗಿದೆ. ನಾಯಿ ಕಚ್ಚಿದರೂ ಯಾರೂ ಸಹಾಯಕ್ಕೆ ಬಂದಿಲ್ಲ. ನನ್ನ ಹೊಟ್ಟೆ ಭಾಗದಲ್ಲಿ ರಕ್ತ ಬರುತ್ತಿತ್ತು. ಇಂಜೆಕ್ಷನ್ ತೆಗೆದುಕೊಂಡುಬಿಡಿ ಸರಿ ಆಗುತ್ತದೆ ಎಂದು ಮನೆಯ ಸ್ಟಾಫ್ ಹೇಳಿದರು’ ಎಂದಿದ್ದಾರೆ ಅಮಿತಾ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:38 am, Wed, 1 November 23

Follow us on