Study hard says Tabassum; ಹಿಜಾಬ್ ವಿವಾದ ನನ್ನ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಲಿಲ್ಲ: ತಬಸ್ಸುಮ್, ಪಿಯು ಕಲಾ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ವಿದ್ಯಾರ್ಥಿನಿ

ಅರುಣ್​ ಕುಮಾರ್​ ಬೆಳ್ಳಿ

Updated on: Apr 21, 2023 | 2:47 PM

ಹಿಜಾಬ್ ನಂಥ ಸೂಕ್ಷ್ಮ ವಿಷಯಯದ ಬಗ್ಗೆ ಈ ಕುಟುಂಬ ಮುಕ್ತ ಅಭಿಪ್ರಾಯ ತಳೆದಿದೆ. ದೇಶದ ಕಾನೂನನ್ನು ನಾವು ಗೌರವಿಸಬೇಕು ಮತ್ತು ಪಾಲಿಸಬೇಕು ಎಂದು ತಬಸ್ಸುಮ್ ಮತ್ತು ಆಕೆಯ ತಂದೆ ಹೇಳುತ್ತಾರೆ.

ಬೆಂಗಳೂರು: ರಂಜಾನ್ ಹಬ್ಬದಂದು ಮನೆಯ ಹಿರಿಯರು ಮಕ್ಕಳಿಗೆ, ಮೊಮ್ಮಕ್ಕಳಿಗೆ ಈದೀ (ಉಡುಗೊರೆ) ಕೋಡೋದು ವಾಡಿಕೆ. ಆದರೆ ನಿಮಗೆ ವಿಡಿಯೋದಲ್ಲಿ ಕಾಣುತ್ತಿರುವ ಯುವತಿ ತಬಸ್ಸುಮ್ (Tabassum) ತಾನೇ ತಂದೆತಾಯಿಗಳಿಗೆ ಬಹು ದೊಡ್ಡ ಮತ್ತು ಅಮೂಲ್ಯವಾದ ಈದೀ ನೀಡಿದ್ದಾಳೆ. ನಾಗರತ್ನಮ್ಮ ಮೇದ ಕಸ್ತೂರಿರಂಗ ರಾಷ್ಟ್ರೀಯ ವಿದ್ಯಾಲಯ (NMKRV) ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ತಬಸ್ಸುಮ್ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ (first rank) ಪಡೆದಿದ್ದಾಳೆ. ಆಕೆಯ ತಂದೆತಾಯಿ ಮತ್ತು ಕಟುಂಬದ ಎಲ್ಲಾ ಸದಸ್ಯರು ಸಂತಸ ಮತ್ತು ಹೆಮ್ಮೆಯಿಂದ ಬೀಗುತ್ತಿದ್ದಾರೆ. ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರ ತಬಸ್ಸುಮ್ ಮತ್ತು ಆಕೆಯ ತಂದೆತಾಯಿಗಳೊಂದಿಗೆ ಮಾತುಕತೆ ನಡೆಸಿದ್ದು ಹಿಜಾಬ್ ನಂಥ (hijab) ಸೂಕ್ಷ್ಮ ವಿಷಯಯದ ಬಗ್ಗೆ ಈ ಕುಟುಂಬ ಮುಕ್ತ ಅಭಿಪ್ರಾಯ ತಳೆದಿದೆ. ದೇಶದ ಕಾನೂನನ್ನು ನಾವು ಗೌರವಿಸಬೇಕು ಮತ್ತು ಪಾಲಿಸಬೇಕು ಎಂದು ತಬಸ್ಸುಮ್ ಮತ್ತು ಆಕೆಯ ತಂದೆ ಹೇಳುತ್ತಾರೆ. ಹಿಜಾಬ್ ವಿವಾದದಿಂದ ತನ್ನ ವಿದ್ಯಾಭ್ಯಾಸಕ್ಕೆ ತೊಂದರೆ ಅಗಲಿಲ್ಲ, ಅದನ್ನು ತನ್ನಿಂದ ಗಾವುದ ದೂರವಿಟ್ಟಿದ್ದೆ ಎಂದು ತಬಸ್ಸುಮ್ ಹೇಳುತ್ತಾಳೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.