ಶವ ಸಂಸ್ಕಾರದ ವೇಳೆ ಹೆಜ್ಜೇನು ದಾಳಿಯಿಂದ 40ಕ್ಕೂ ಹೆಚ್ಚು ಜನರಿಗೆ ಗಾಯ

ಹೆಜ್ಜೇನು ದಾಳಿಯಿಂದ 40ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಪಾಂಡವಪುರ ತಾಲೂಕಿನ ಹಾರೋಹಳ್ಳಿಯಲ್ಲಿ ನಡೆದಿದೆ.

ಶವ ಸಂಸ್ಕಾರದ ವೇಳೆ ಹೆಜ್ಜೇನು ದಾಳಿಯಿಂದ 40ಕ್ಕೂ ಹೆಚ್ಚು ಜನರಿಗೆ ಗಾಯ
ಹೆಜ್ಜೇನು ದಾಳಿಗೆ ಒಳಗಾದ ಜನರು
Edited By:

Updated on: Nov 02, 2022 | 8:19 PM

ಮಂಡ್ಯ: ಹೆಜ್ಜೇನು (Honey Bee) ದಾಳಿಯಿಂದ 40ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಪಾಂಡವಪುರ (Pandavpur) ತಾಲೂಕಿನ ಹಾರೋಹಳ್ಳಿಯಲ್ಲಿ ನಡೆದಿದೆ. ಹಾರೋಹಳ್ಳಿಯ ಧರ್ಮರಾಜ್ ಅನಾರೋಗ್ಯದ ಹಿನ್ನಲೆ ಮೃತ ಪಟ್ಟಿದ್ದರು. ಇಂದು (ನ.1) ಮದ್ಯಾಹ್ನ ಶವ ಸಂಸ್ಕಾರ ಕಾರ್ಯವಿತ್ತು. ಈ ಹಿನ್ನಲೆ ಶವವನ್ನು ತೆಗೆದುಕೊಂಡು ಹೋಗುವ ವೇಳೆ ಹೆಜ್ಜೇನು ದಾಳಿ ನಡೆಸಿವೆ. ಸದ್ಯ ಗಾಯಾಳುಗಳನ್ನು ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Published On - 8:18 pm, Wed, 2 November 22