Horoscope Today: ಇಂದು ಹೇರಂಭ ಸಂಕಷ್ಟ ಚತುರ್ಥಿ; ಸಿಂಹವಾಹನಸ್ಥ ವಿನಾಯಕನ ಆರಾಧನೆಯ ದಿನ
31 ಆಗಸ್ಟ್ 2026, ಸೋಮವಾರದ ದಿನ ಭವಿಷ್ಯದಲ್ಲಿ ಡಾ. ಬಸವರಾಜ ಗುರೂಜಿ ಅವರು ದ್ವಾದಶ ರಾಶಿಗಳ ಫಲಾಫಲವನ್ನು ವಿವರಿಸಿದ್ದಾರೆ. ಆರ್ಥಿಕ ಸ್ಥಿತಿ, ಆರೋಗ್ಯ, ವೃತ್ತಿಜೀವನ, ಕೌಟುಂಬಿಕ ಸಂಬಂಧಗಳು, ಪ್ರಯಾಣ ಮತ್ತು ಇತರ ಪ್ರಮುಖ ಅಂಶಗಳ ಕುರಿತು ಜ್ಯೋತಿಷ್ಯ ಸಲಹೆಗಳನ್ನು ನೀಡಲಾಗಿದೆ. ಪ್ರತಿಯೊಂದು ರಾಶಿಗೂ ಅದೃಷ್ಟ ಸಂಖ್ಯೆ, ಬಣ್ಣ ಮತ್ತು ಮಂತ್ರಗಳ ಕುರಿತು ಮಾಹಿತಿ ಲಭ್ಯವಿದೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಆಗಸ್ಟ್ 31, ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ.ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಶ್ರಾವಣ ಮಾಸದ ಕೃಷ್ಣ ಪಕ್ಷದ ತದಿಗೆಯಂದು ಈ ವಿಶೇಷ ದಿನ ಬಂದಿದೆ. ಅಂದು ಬೆಳಗ್ಗೆ 7:40 ರಿಂದ 9:13 ರವರೆಗೆ ರಾಹುಕಾಲವಿದ್ದು, ನಂತರ 9:14 ರಿಂದ 10:47 ರವರೆಗೆ ಶುಭಕಾಲವಿರುತ್ತದೆ.
ವರ್ಷಪೂರ್ತಿ ಬರುವ ಸಂಕಷ್ಟ ಚತುರ್ಥಿಗಳಲ್ಲಿ ಹೇರಂಬ ಸಂಕಷ್ಟ ಚತುರ್ಥಿ ಅತ್ಯಂತ ವಿಶೇಷವಾಗಿದೆ. ವಿದ್ಯಾರ್ಥಿಗಳು, ಹಣಕಾಸಿನ ತೊಂದರೆ ಇರುವವರು ಮತ್ತು ಇತರ ಸಂಕಷ್ಟಗಳಲ್ಲಿ ಸಿಲುಕಿರುವವರಿಗೆ ಈ ಚತುರ್ಥಿ ಬಹಳ ಮಹತ್ವಪೂರ್ಣವಾಗಿದೆ. ಈ ದಿನ ಐದು ಮುಖಗಳು ಮತ್ತು ಹತ್ತು ಭುಜಗಳನ್ನು ಹೊಂದಿರುವ ಸಿಂಹವಾಹನಸ್ಥ ವಿನಾಯಕನನ್ನು ಆರಾಧಿಸಲಾಗುತ್ತದೆ. ಉಪವಾಸ, ಪೂಜೆ, ಮತ್ತು ಗಣಪತಿಗೆ ಅತ್ಯಂತ ಪ್ರಿಯವಾದ ಮೋದಕವನ್ನು (ಅಥವಾ ಬೆಲ್ಲದ ಪಾಯಸವನ್ನು) ನೈವೇದ್ಯವಾಗಿ ಅರ್ಪಿಸುವುದು ಶ್ರೇಷ್ಠ. ಓಂ ಗಣೇಶಾಯ ನಮಃ ಮಂತ್ರವನ್ನು ಜಪಿಸುವುದರಿಂದ ಸಕಲ ಸಂಕಷ್ಟಗಳು ನಿವಾರಣೆಯಾಗುತ್ತವೆ ಎಂದು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.
