Prajadhvani Yatre | ತೇಜಸ್ವೀ ಸೂರ್ಯನನ್ನು ನಾನು ಅಮವಾಸ್ಯೆ ಅಂತಲೇ ಕರೆಯೋದು: ಸಿದ್ದರಾಮಯ್ಯ

Arun Kumar Belly

|

Updated on:Feb 08, 2023 | 5:44 PM

ಇದೇ ಸಂದರ್ಭದಲ್ಲಿ ಬಿಜೆಪಿ ಸಂಸದ ತೇಜಸ್ವೀ ಸೂರ್ಯ ಅವರನ್ನು ತಾನು ಅಮವಾಸ್ಯೆ ಅಂತಲೇ ಕರೆಯೋದು ಅಂತ ಹೇಳುತ್ತಾ ಲೇವಡಿ ಮಾಡಿದಾಗ ನೆರೆದಿದ್ದ ಜನ ಜೋರಾಗಿ ಶಿಳ್ಳೆ ಹಾಕಿ ಚಪ್ಪಾಳೆ ತಟ್ಟಿದರು.

ಕಲಬುರಗಿ: ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತಾಡಿದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಿದ್ದರಾಮಯ್ಯನವರು (Siddaramaiah) ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಕೇಂದ್ರ ಸರ್ಕಾರ ಕೇವಲ ದೊಡ್ಡ ಉದ್ದಿಮೆದಾರರ, ಬಂಡವಾಳಶಾಹಿಗಳ ರೂ. 14 ಲಕ್ಷ ಕೋಟಿ ಮೊತ್ತದಷ್ಟು ಸಾಲ ಮನ್ನಾ ಮಾಡಿದೆ ಎಂದರು. ಆದರೆ ಕೇಂದ್ರ ಮತ್ತು ಬಿಜೆಪಿ ಅಧಿಕಾರದಲ್ಲಿರುವ ಯಾವುದೇ ರಾಜ್ಯ ಸರ್ಕಾರ ರೈತರ ಒಂದೇ ಒಂದು ರೂಪಾಯಿ ಸಾಲಮನ್ನಾ (loan waive) ಮಾಡಿಲ್ಲ ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಸಂಸದ ತೇಜಸ್ವೀ ಸೂರ್ಯ (Tejasvi Surya) ಅವರನ್ನು ತಾನು ಅಮವಾಸ್ಯೆ ಅಂತಲೇ ಕರೆಯೋದು ಅಂತ ಹೇಳುತ್ತಾ ಲೇವಡಿ ಮಾಡಿದಾಗ ನೆರೆದಿದ್ದ ಜನ ಜೋರಾಗಿ ಶಿಳ್ಳೆ ಹಾಕಿ ಚಪ್ಪಾಳೆ ತಟ್ಟಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada