AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರ ಸಮೀಕ್ಷೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸುವ ವಿಶ್ವಾಸ ನನಗಿದೆ: ಡಿಕೆ ಸುರೇಶ್

ಸರ್ಕಾರ ಸಮೀಕ್ಷೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸುವ ವಿಶ್ವಾಸ ನನಗಿದೆ: ಡಿಕೆ ಸುರೇಶ್

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 17, 2025 | 5:55 PM

ಸಮೀಕ್ಷೆಯನ್ನು ಯಾರು ಮತ್ತೊಮ್ಮೆ ಮಾಡುತ್ತಾರೆ ಅನ್ನೋದು ಮುಖ್ಯವಲ್ಲ, ಸರ್ಕಾರದ ಮೇಲಿರುವ ಜಬಾಬ್ದಾರಿ ಎಲ್ಲರನ್ನು ವಿಶ್ವಾಸಕ್ಕೆ ತೆಗದುಕೊಂಡು ಮುಂದೆ ಹೋಗುವುದಾಗಿದೆ, ಬಡವರು ಯಾವುದೇ ನಿರ್ದಿಷ್ಟ ಜಾತಿಯಲ್ಲಿ ಇಲ್ಲ, ಎಲ್ಲ ಜಾತ ಧರ್ಮಗಳಲ್ಲೂ ಇದ್ದಾರೆ, ಸಮೀಕ್ಷೆ ಮಾಡಿ ಬಹಳ ದಿನಗಳಾಗಿರುವುದರಿಂದ ಮತ್ತೊಮ್ಮೆ ಮಾಡಿಸಲಿ ಅನ್ನೋದು ಎಲ್ಲರ ಅಭಿಪ್ರಾಯವಾಗಿದೆ ಎಂದು ಸುರೇಶ್ ಹೇಳಿದರು.

ಬೆಂಗಳೂರು, ಏಪ್ರಿಲ್ 17: ರಾಜ್ಯದಲ್ಲಿ ಚರ್ಚೆಯಾಗುತ್ತಿರುವುದು ಜಾತಿ ಗಣತಿ ವರದಿ (Caste Census Report) ಅಲ್ಲ, ಕರ್ನಾಟಕದಲ್ಲಿ ಶೋಷಿತ ವರ್ಗಗಳಿಗಾಗಿ ಮಾಡಿರುವ ಸಮೀಕ್ಷೆ ಅದು, ಯಾವುದೇ ನಿರ್ದಿಷ್ಟವಾದ ಜಾತಿ ಧರ್ಮ ಅಥವಾ ಸಮುದಾಯಗಳಿಗಾಗಿ ಮಾಡಿದ ಸಮೀಕ್ಷೆ ಅದಲ್ಲ, ಇದನ್ನು ಮಾಡಿ 10 ವರ್ಷ ಕಳೆದಿರುವುದರಿಂದ ಜನರಲ್ಲಿ ಗೊಂದಲಗಳಿರುವ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದರು. ಆದರೆ ತಮ್ಮ ಸರ್ಕಾರದ ಉದ್ದೇಶವೆಂದರೆ ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸುವುದು ಮತ್ತು ರಾಜ್ಯದ 7.5 ಕೋಟಿ ಜನರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದಾಗಿದೆ ಎಂದು ಹೇಳಿದರು. ಸಮೀಕ್ಷೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಎಲ್ಲ ವರ್ಗಗಳಿಗೆ ನ್ಯಾಯ ಒದಗಿಸುವ ಕೆಲಸನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಾರೆನ್ನುವ ವಿಶ್ವಾಸವಿದೆ ಎಂದು ಮಾಜಿ ಸಂಸದ ಹೇಳಿದರು.

ಇದನ್ನೂ ಓದಿ: ಮುಸ್ಲಿಮರಲ್ಲಿಯೂ 93 ಉಪಜಾತಿಗಳಿವೆ: ಜಾತಿ ಗಣತಿ ವರದಿ ಬಗ್ಗೆ ಜಯಪ್ರಕಾಶ್ ಹೆಗ್ಡೆ ಹೇಳಿದ್ದಿಷ್ಟು

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ