ನಾನು MLC ಅಂದ್ರೂ ಬಿಡದ ಪೊಲೀಸರು! ಅರುಣ್ ಷಹಾಪುರಗೆ ಪೇಚಾಟ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 08, 2022 | 12:22 PM

ಇದೇ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ವಿತರಿಸಿದರು.

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆಯೋಜಿಸಿದ್ದ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (International Women’s Day 2022) ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಂಎಲ್​ಸಿ ಅರುಣ್ ಷಹಾಪೂರರನ್ನು  ಪೊಲೀಸರು ತಡೆದಿದ್ದಾರೆ. ವೇದಿಕೆ ಹತ್ತುವಾಗ‌ ಪೊಲೀಸರಿಂದ ತಡೆದಿದ್ದು, ತಾವು ಎಂಎಲ್​ಸಿ ಎಂದು ಹೇಳಿದರೂ ಪೊಲೀಸರು ಕೇಳಿಲ್ಲ. ಬಳಿಕ ಕೂತಿದ್ದ ಆಹ್ವಾನಿತರು, ಪಿಎ ಹೇಳಿದ ಮೇಲೆ ಪೊಲೀಸರು ವೇದಿಕೆಗೆ ಬಿಟ್ಟಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ವಿತರಿಸಿದರು.

ಇದನ್ನೂ ಓದಿ:

ಮಹಿಳೆಯರಿಬ್ಬರ ಆತ್ಮಹತ್ಯೆ ಪ್ರಕರಣ: ಜಿಲ್ಲಾಧಿಕಾರಿ ಕಚೇರಿ ಮುಂದೆ ಶವ ಇಟ್ಟು ಗ್ರಾಮಸ್ಥರು ಪ್ರತಿಭಟನೆ; ಅಧಿಕಾರಿಗಳ ಅಮಾನತಿಗೆ ಒತ್ತಾಯ

Published On - 12:07 pm, Tue, 8 March 22

Follow us on