ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆಯೋಜಿಸಿದ್ದ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (International Women’s Day 2022) ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಂಎಲ್ಸಿ ಅರುಣ್ ಷಹಾಪೂರರನ್ನು ಪೊಲೀಸರು ತಡೆದಿದ್ದಾರೆ. ವೇದಿಕೆ ಹತ್ತುವಾಗ ಪೊಲೀಸರಿಂದ ತಡೆದಿದ್ದು, ತಾವು ಎಂಎಲ್ಸಿ ಎಂದು ಹೇಳಿದರೂ ಪೊಲೀಸರು ಕೇಳಿಲ್ಲ. ಬಳಿಕ ಕೂತಿದ್ದ ಆಹ್ವಾನಿತರು, ಪಿಎ ಹೇಳಿದ ಮೇಲೆ ಪೊಲೀಸರು ವೇದಿಕೆಗೆ ಬಿಟ್ಟಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ವಿತರಿಸಿದರು.
ಇದನ್ನೂ ಓದಿ:
Published On - 12:07 pm, Tue, 8 March 22