ಕಾಂಗ್ರೆಸ್​ನವರ ಯೋಗ್ಯತೆಗೆ ಆಗಿನ ಸರ್ಕಾರದ ಒಂದೇ ಒಂದು ದಾಖಲೆ ನೀಡಿರಲಿಲ್ಲ -ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ

Edited By: ಆಯೇಷಾ ಬಾನು

Updated on: Jul 04, 2023 | 2:52 PM

ಕಳೆದ 2 ವರ್ಷದಿಂದ ಒಂದೇ ಒಂದು ದಾಖಲೆ ನೀಡಿರಲಿಲ್ಲ. ಪ್ರತಿದಿನ ತನಿಖೆ ತನಿಖೆ ಎಂದು ಗುಮ್ಮ ತೋರಿಸುತ್ತಿದ್ದಾರೆ. ಇನ್ನೂ ಹನಿಮೂನ್ ಪೀರಿಯಡ್ ಎಂದು ಹೇಳುತ್ತಿದ್ದೀರಿ. ಕೆಲವು ಸಚಿವರ ದಾಖಲೆ ಕೊಡಲಿ ಎಂದು ಕೇಳುತ್ತಿದ್ದಾರೆ -ಹೆಚ್​ಡಿ ಕುಮಾರಸ್ವಾಮಿ

ಕಾಂಗ್ರೆಸ್​ನವರ ಯೋಗ್ಯತೆಗೆ ಒಂದೇ ಒಂದು ದಾಖಲೆ ನೀಡಿರಲಿಲ್ಲ. ಸರ್ಕಾರದ ವಿರುದ್ಧ ಹೋರಾಟಕ್ಕೆ ಯಾವುದೇ ದಾಖಲೆ ನೀಡಲಿಲ್ಲ ಎಂದು ವಿಧಾನಸೌಧದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ 2 ವರ್ಷ ಆರೋಪ ಮಾಡಿದ್ದರು. ಕಳೆದ 2 ವರ್ಷದಿಂದ ಒಂದೇ ಒಂದು ದಾಖಲೆ ನೀಡಿರಲಿಲ್ಲ. ಪ್ರತಿದಿನ ತನಿಖೆ ತನಿಖೆ ಎಂದು ಗುಮ್ಮ ತೋರಿಸುತ್ತಿದ್ದಾರೆ. ಇನ್ನೂ ಹನಿಮೂನ್ ಪೀರಿಯಡ್ ಎಂದು ಹೇಳುತ್ತಿದ್ದೀರಿ. ಕೆಲವು ಸಚಿವರ ದಾಖಲೆ ಕೊಡಲಿ ಎಂದು ಕೇಳುತ್ತಿದ್ದಾರೆ. ದಾಖಲೆ ಕೊಡುತ್ತೇನೆ ತನಿಖೆ ಮಾಡೋ ಧಮ್ ನಿಮಗೆ ಇದೆಯಾ?. ನನ್ನ ಕಾಲದಲ್ಲಿ ನಡೆದ ವರ್ಗಾವಣೆ ಬಗ್ಗೆಯೂ ತನಿಖೆ ಮಾಡಲಿ ಎಂದು ಹೆಚ್​ಡಿಕೆ ಗುಡುಗಿದ್ರು.

Published on: Jul 04, 2023 02:51 PM
Follow Us
Web contact

TV9 Kannada

Read More