Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru News: ಹಗರಣಗಳಲ್ಲಿ ಶಾಮೀಲಾಗಿದ್ದೇನೆ ಅಂತ ಬಿಜೆಪಿ ನಾಯಕರಿಗೆ ಖಾತರಿಯಾಗಿದ್ದರೆ ತನಿಖೆ ಯಾಕೆ ಮಾಡಿಸಲಿಲ್ಲ? ಪ್ರಿಯಾಂಕ್ ಖರ್ಗೆ

Bengaluru News: ಹಗರಣಗಳಲ್ಲಿ ಶಾಮೀಲಾಗಿದ್ದೇನೆ ಅಂತ ಬಿಜೆಪಿ ನಾಯಕರಿಗೆ ಖಾತರಿಯಾಗಿದ್ದರೆ ತನಿಖೆ ಯಾಕೆ ಮಾಡಿಸಲಿಲ್ಲ? ಪ್ರಿಯಾಂಕ್ ಖರ್ಗೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 29, 2023 | 6:02 PM

ಹೆಚ್ ಡಿ ಕುಮಾರಸ್ವಾಮಿಯವರು ಪೆನ್ ಡ್ರೈವ್ ನೀಡಿದರೆ ಅದನ್ನೂ ತನಿಖೆ ಮಾಡಿಸ್ತೀವಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಬಿಜೆಪಿ ನಾಯಕರ ಧೋರಣೆ ಇಬ್ಬಂದಿತನದಿಂದ ಕೂಡಿದೆ ಎಂದು ಹೇಳಿದರು. ತಮ್ಮ ಸರ್ಕಾರ ಬಿಟ್ ಕಾಯಿನ್ ಹಗರಣ (BitCoin Scam), ಪಿಎಸ್ ಐ ನೇಮಕಾತಿ ಹಗರಣಗಳ (PSI Recruitment Scam) ಬಗ್ಗೆ ಮಾತಾಡಿದಾಗ ಸಾಕ್ಷಿ ಇದೆಯಾ ಅಂತ ಕೇಳಿದರು. ಸಾಕ್ಷಿ ಕಲೆಹಾಕಿದಾಗ ದ್ವೇಷದ ರಾಜಕಾರಣ ಎಂದರು. ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವಾಗ ಖರ್ಗೆಯವರೇ ಅದನ್ನು ಮಾಡಬೇಡಿ, ಯಾಕೆಂದರೆ, ತನಿಖೆಯಲ್ಲಿ ನಿಮ್ಮ ಹೆಸರೇ ಮೊದಲಿಗೆ ಹೊರಬರೋದು ಅಂತ ಹೇಳಿದರು. ಬಿಜೆಪಿ ನಾಯಕರಿಗೆ ನಾಮಿ ಶಾಮೀಲಾಗಿದ್ದೇನೆ ಅಂತ ಅಷ್ಟು ಖಚಿತವಾಗಿ ಗೊತ್ತಿದ್ದರೆ ಯಾಕೆ ತನಿಖೆ ಮಾಡಿಸಲಿಲ್ಲ ಎಂದುಖರ್ಗೆ ಪ್ರಶ್ನಿಸಿದರು. ಹೆಚ್ ಡಿ ಕುಮಾರಸ್ವಾಮಿಯವರು ಪೆನ್ ಡ್ರೈವ್ ನೀಡಿದರೆ ಅದನ್ನೂ ತನಿಖೆ ಮಾಡಿಸ್ತೀವಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ