AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಕಾರ್ಯಕರ್ತರ ಪ್ರವೃತ್ತಿ ಬದಲಾಗದಿದ್ದರೆ ಅವರ ಸಭೆಗಳನ್ನು ಮಾಡಲು ಬಿಡೋದಿಲ್ಲ: ಡಿಕೆ ಶಿವಕುಮಾರ್

ಬಿಜೆಪಿ ಕಾರ್ಯಕರ್ತರ ಪ್ರವೃತ್ತಿ ಬದಲಾಗದಿದ್ದರೆ ಅವರ ಸಭೆಗಳನ್ನು ಮಾಡಲು ಬಿಡೋದಿಲ್ಲ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 28, 2025 | 5:57 PM

ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಮುಟ್ಟಿದೆ, ಜನಸಾಮಾನ್ಯರು ಬೆಲೆಯೇರಿಕೆಯನ್ನು ನಿಭಾಯಿಸಲು ಅನುಕೂಲವಾಗಲೆಂದು ತಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡಿದೆ, ಮುಂದಿನ ದಿನಗಳಲ್ಲಿ ಬಿಜೆಪಿ ನಾಯಕರು ತಮ್ಮ ಕಾರ್ಯಕರ್ತರನ್ನು ಹದ್ಚುಬಸ್ತಿನಲ್ಲಿಡುವ ಅವಶ್ಯಕತೆಯಿದೆ, ಇದು ಈಗಷ್ಟೇ ಶುರುವಾಗಿದೆ, ನಿಲ್ಲಿಸಿದರೆ ಅವರಿಗೆ ಒಳ್ಳೆಯದು ಎಂದ ಶಿವಕುಮಾರ್ ತನಗೆ ಎಲ್ಲ ರೀತಿಯ ಹೋರಾಟ ಮಾಡೋದು ಗೊತ್ತು ಎಂದರು.

ಬೆಳಗಾವಿ, ಏಪ್ರಿಲ್ 28: ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿಭಟನಾ ಸಮಾವೇಶದಲ್ಲಿ ನಡೆದ ಘಟನೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಡಿಕೆ ಶಿವಕುಮಾರ್ ಸಮಾವೇಶದಲ್ಲಿ ಕಪ್ಪು ಬಾವುಟ (black flags) ಪ್ರದರ್ಶಿಸಿದ ಬಿಜೆಪಿ ಮತ್ತು ಉಳಿದ ವಿರೋಧ ಪಕ್ಷದ ನಾಯಕರ ವಿಷಯದಲ್ಲಿ ಉಗ್ರರಾಗಿ ಮಾತಾಡಿದರು. ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರ ಪ್ರವೃತ್ತಿ ಹೀಗೆಯೇ ಮುಂದುವರಿದರೆ, ರಾಜ್ಯದ ಯಾವುದೇ ಭಾಗದಲ್ಲಿ ಅವರಿಗೆ ಒಂದೇ ಸಭೆ ಕೂಡ ನಡೆಸಲು ಬಿಡೋದಿಲ್ಲ ಎಂದರು. ಇದು ಮನವಿ ಅಲ್ಲ, ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಎಚ್ಚರಿಕೆ ಮತ್ತು ಪಕ್ಷದ ಪ್ರತಿಜ್ಞೆ ಕೂಡ ಹೌದು ಎಂದು ಶಿವಕುಮಾರ್ ಹೇಳಿದರು.

ಇದನ್ನೂ ಓದಿ:    ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ