ಹೆಸರಲ್ಲಿ ರಾಮ ಇರುವ ಮಾತ್ರಕ್ಕೆ ಯಾರೂ ರಾಮನ ಭಕ್ತನಾಗಲ್ಲ, ಸಿದ್ದರಾಮಯ್ಯನೂ ಅಷ್ಟೇ: ಆರ್ ಅಶೋಕ

ಅರುಣ್​ ಕುಮಾರ್​ ಬೆಳ್ಳಿ

Updated on: Jun 02, 2025 | 8:55 PM

ಕಾಂಗ್ರೆಸ್ ಸರ್ಕಾರ ಚುನಾವಣಾ ಸಮಯದಲ್ಲಿ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನು ಒಂದೊಂದಾಗಿ ನಿಲ್ಲಿಸುವ ಹವಣಿಕೆಯಲ್ಲಿದೆಯಂತೆ. ಮುಖ್ಯಮಂತ್ರಿಯವರ ಅರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅದನ್ನು ಹೇಳಿದ್ದಾರೆ, ಡಿಸಿಎಂ ಡಿಕೆ ಶಿವಕುಮಾರ್ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಪ್ರತಿ ತಿಂಗಳು ಹಣ ನೀಡುತ್ತೇವೆ ಅಂತ ಹೇಳಿದ್ದೀವಾ ಅನ್ನುತ್ತಾರೆ, ಇವರ ಮಾತುಗಳನ್ನು ಗಮನಿಸಿ ಎಂದು ಅಶೋಕ ಹೇಳಿದರು.

ಬೆಂಗಳೂರು, ಜೂನ್ 2: ಯಾರಾದರೂ ತನ್ನ ಹೆಸರಲ್ಲಿ ರಾಮ ಅಂತ ಸೇರಿಸಿಕೊಂಡಿದ್ದರೆ ಅವನೇನೂ ರಾಮನ ಭಕ್ತನಾಗಲಾರ, ಯಾರೋ ಒಬ್ಬ ಮಹಿಳೆಯ ಹೆಸರು ಧನಲಕ್ಷ್ಮಿ ಅಂತ ಇತ್ತು, ಆದರೆ ಆಕೆಯ ಮನೆಯಲ್ಲಿ ನಿತ್ಯ ದಾರಿದ್ರ್ಯ, ಆದರೆ ದರಿದ್ರ ಲಕ್ಷ್ಮಿ ಅಂತ ಹೆಸರಿಟ್ಟುಕೊಂಡವಳ ಮನೆಯಲ್ಲಿ ಸುಭಿಕ್ಷೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ಹೇಳಿದರು. ಸಿದ್ದರಾಮಯ್ಯನವರ (Siddaramaiah) ತಂದೆತಾಯಿ ಮಗನ ಹೆಸರಲ್ಲಿ ರಾಮನ ಹೆಸರನ್ನು ಸೇರಿಸಿದ ಮಾತ್ರಕ್ಕೆ ಸಿದ್ದರಾಮಯ್ಯ ದೊಡ್ಡ ಹಿಂದೂವಾಗಲಾರರು, ನಾನೊಬ್ಬ ಹಿಂದೂ ಅಂತ ಅವರು ತಾವೇ ಹೇಳಿಕೊಳ್ಳುತ್ತಾರೆ, ಅದರಿಂದ ಪ್ರಯೋಜನವೇನು ಬಂತು? ಬೇರೆಯವರು ಆ ಮಾತನ್ನು ಹೇಳಬೇಕು, ಕೇವಲ ಸಂಕಟ ಬಂದಾಗ ಹಣೆಗೆ ತಿಲಕವಿಡುವ ಸಿದ್ದರಾಮಯ್ಯ ಹಿಂದೂ ಹೇಗಾಗುತ್ತಾರೆ ಎಂದು ಅಶೋಕ ಪ್ರಶ್ನಿಸಿದರು.

ಇದನ್ನೂ ಓದಿ:   ಕ್ರಿಕೆಟ್ ಪಂದ್ಯ ನೋಡುತ್ತಾ ಸಮೋಸಾ ತಿನ್ನಲು ಸಿದ್ದರಾಮಯ್ಯಗೆ ಸಮಯವಿದೆ, ನೀತಿ ಆಯೋಗದ ಸಭೆಯಲ್ಲಿ ಭಾಗಿಯಾಗಲು ಇಲ್ಲ: ಆರ್ ಅಶೋಕ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.