ಮುಳುಬಾಗಿಲುನಲ್ಲಿ ಮಹಿಳೆಯೊಬ್ಬರನ್ನು ಅಟ್ಟಾಡಿಸಿ ನಕಲಿ ಚಿನ್ನದ ಸರ ದೋಚಿದ ಸರಗಳ್ಳರ ಜೋಡಿ

Updated on: Jun 26, 2025 | 2:37 PM

ಮುಳುಬಾಗಿಲು ದೊಡ್ಡ ಊರೇನಲ್ಲ. ಹಾಗಾಗಿ ಕಳ್ಳರನ್ನು ಗುರುತು ಹಿಡಿಯುವುದು ಮಹಿಳೆಗೆ ಕಷ್ಟವಾಗಲಿಕ್ಕಿಲ್ಲ. ಕಳ್ಳರು ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಚಿಕ್ಕ ಊರುಗಳಲ್ಲಿ ಕಳ್ಳತನ ನಡೆಯುತ್ತವೆಯೇ ಹೊರತು ಸರಗಳ್ಳತನ ದ ಪ್ರಕರಣಗಳು ಕಡಿಮೆ. ಈ ಕಳ್ಳರ ಡೇರ್ ಡೆವಿಲ್ ಕೃತ್ಯ ನೋಡಿದರೆ ಅವರು ಮುಳುಬಾಗಿಲು ಪೊಲೀಸರನ್ನು ಗ್ರ್ಯಾಂಟೆಡ್ ಆಗಿ ತೆಗೆದುಕೊಂಡಿದ್ದಾರೆ.

ಕೋಲಾರ, ಜೂನ್ 26: ಕರ್ನಾಟಕದಲ್ಲಿ ಕಳ್ಳರಿಗೆ ಭಯವಿಲ್ಲದಂತಾಗಿದೆ ಎಂದರೆ ಅತಿಶಯೋಕ್ತಿ ಅನಿಸದು. ಕೋಲಾರ ಜಿಲ್ಲೆಯ ಮುಳುಬಾಗಿಲುನಲ್ಲಿರುವ ಸಂಜಪ್ಪ ಬಡಾವಣೆಯಲ್ಲಿ ಒಂಟಿಮಹಿಳೆಯೊಬ್ಬರನ್ನು ಸ್ಕೂಟರ್ ನಲ್ಲಿ ಹಿಂಬಾಲಿಸಿಕೊಂಡು ಬರುವ ಸರಗಳ್ಳರಿಬ್ಬರು ಸರ ದೋಚುವ ದೃಶ್ಯ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ. ಮಹಿಳೆ ತನ್ನ ವಾಹನ ನಿಲ್ಲಿಸಿದ ಬಳಿಕ ಒಬ್ಬಕಳ್ಳ ಅವರ ಬಳಿ ಬರುತ್ತಾನೆ. ಅವನ ಇಂಗಿತ ಅರ್ಥಮಾಡಿಕೊಳ್ಳುವ ಮಹಿಳೆ ಓಡುವ ಪ್ರಯತ್ನ ಮಾಡಿದಾಗ ಕಳ್ಳ ಅವರ ಬೆನ್ನಟ್ಟಿ ಸರ ದೋಚುತ್ತಾನೆ. ಮಹಿಳೆ ಧರಿಸಿದ್ದು ನಕಲಿ ಒಡವೆ ಅನ್ನೋದು ನಿಜವಾದರೂ ಕಳ್ಳರ ಧೈರ್ಯ ಕಂಡು ಜನ ಬೆಚ್ಚಿಬೀಳುತ್ತಿದ್ದಾರೆ.

ಇದನ್ನೂ ಓದಿ:  ಆನೇಕಲ್ ನಲ್ಲಿ ಪುನಃ ಶುರವಾದ ಸರಗಳ್ಳತನ, ಇರಾನಿ ಗ್ಯಾಂಗ್ ಸಕ್ರಿಯಗೊಂಡಿರುವ ಬಗ್ಗೆ ಶಂಕೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More