AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಲ್ಲಸಲ್ಲದ ಆರೋಪ ಹೊರಿಸುವ ಕಾಂಗ್ರೆಸ್, ನಾವು ಪುನರ್ ಸ್ಥಾಪಿಸಿದ ಲೋಕಾಯುಕ್ತಕ್ಕೆ ಒಂದಾದರೂ ಕೇಸ್ ನೀಡಿದೆಯಾ? ನಳಿನ್ ಕುಮಾರ ಕಟೀಲ್

ಇಲ್ಲಸಲ್ಲದ ಆರೋಪ ಹೊರಿಸುವ ಕಾಂಗ್ರೆಸ್, ನಾವು ಪುನರ್ ಸ್ಥಾಪಿಸಿದ ಲೋಕಾಯುಕ್ತಕ್ಕೆ ಒಂದಾದರೂ ಕೇಸ್ ನೀಡಿದೆಯಾ? ನಳಿನ್ ಕುಮಾರ ಕಟೀಲ್

TV9 Web
| Updated By: Digi Tech Desk|

Updated on:Jan 04, 2023 | 12:39 PM

Share

ಮುಂಬರುವ ಚುನಾವಣೆಗೆ ಮೊದಲು ಸಿದ್ದರಾಮಯ್ಯ ನಿಸ್ಸಂದೇಹವಾಗಿ ಜೈಲು ಪಾಲಾಗುತ್ತಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಮಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳ ನಾಯಕರು ಪರಸ್ಪರ ಟೀಕಿಸುವುದು, ಬೈದಾಡುವುದು ಹೆಚ್ಚುತ್ತಿದೆ. ಮಂಗಳೂರಲ್ಲಿ ಇಂದು ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ (Nalin Kumar Kateel) ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ವಿರುದ್ಧ ಹರಿಹಾಯ್ದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರನ್ನ (Kempanna) ಸರ್ಕಾರದ ವಿರುದ್ಧ ಎತ್ತಿಕಟ್ಟಿದ ಸಿದ್ದರಾಮಯ್ಯ, ಅವರು ಜೈಲಿಗೆ ಹೋಗುವಂತೆ ಮಾಡಿದರು ಎಂದು ಹೇಳಿದ ಕಟೀಲ್ ಇನ್ನು ಮುಂದಿನ ಸರದಿ ಖುದ್ದು ಸಿದ್ದರಾಮಯ್ಯನವರದ್ದು ಎಂದರು. ಮುಂಬರುವ ಚುನಾವಣೆಗೆ ಮೊದಲು ಸಿದ್ದರಾಮಯ್ಯ ನಿಸ್ಸಂದೇಹವಾಗಿ ಜೈಲು ಪಾಲಾಗುತ್ತಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Jan 04, 2023 12:14 PM