Sign In

By signing in or creating an account, you agree with Associated Broadcasting Company's Terms & Conditions and Privacy Policy.

Davanagere News: ಬಿಸಿಯೂಟ ತಯಾರಕರ ಸ್ವಚ್ಛತೆ ಕೊರತೆಯಿಂದ ಸ್ವತಃ ಅಡುಗೆ ಮಾಡಿದ ವಿದ್ಯಾರ್ಥಿಗಳು

Davanagere News: ಬಿಸಿಯೂಟ ತಯಾರಕರ ಸ್ವಚ್ಛತೆ ಕೊರತೆಯಿಂದ ಸ್ವತಃ ಅಡುಗೆ ಮಾಡಿದ ವಿದ್ಯಾರ್ಥಿಗಳು

ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 19, 2023 | 10:05 AM

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮುಖ್ಯಶಿಕ್ಷಕರ ಬೇಜವಾಬ್ದಾರಿಯಿಂದ ಆರು ತಿಂಗಳಿಂದ ಮಕ್ಕಳಿಗೆ ಬಿಸಿಯೂಟ ಬಂದ್ ಆಗಿದೆ.

ದಾವಣಗೆರೆ: ಹಲವು ವರ್ಷಗಳಿಂದ ಸರ್ಕಾರ, ಬಡ ಮಕ್ಕಳಿಗೆ ಸಹಾಯವಾಗಲೆಂದು ಕಲಿಕೆ ಜೊತೆಗೆ ಉಚಿತ ಊಟ ನೀಡುತ್ತಾ ಬಂದಿದೆ. ಇದೀಗ  ಮುಖ್ಯಶಿಕ್ಷಕರ ಬೇಜವಾಬ್ದಾರಿಯಿಂದ ಆರು ತಿಂಗಳಿಂದ ಮಕ್ಕಳಿಗೆ ಬಿಸಿಯೂಟ(Bisiyuta) ಬಂದ್ ಆಗಿದೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ಸಿಬ್ಬಂದಿಗಳು ಸ್ವಚ್ಛತೆ ಕಾಪಾಡದ ಹಿನ್ನಲೆ ಗ್ರಾಮಸ್ಥರು ಧರಣಿ ನಡೆಸಿದ್ದರು. ಶಾಲೆಯ ಮುಖ್ಯಶಿಕ್ಷಕಿ ಬಿಸಿಯೂಟ ನೀಡುವುದನ್ನೇ ನಿಲ್ಲಿಸಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ