ರಾಜ್ಯದ ರೈತರ ಕಿವಿಗಳಿಗೆ ಡಿಕೆ ಶಿವಕುಮಾರ್ ಇನ್ನು ಹೂ ಮುಡಿಸುವುದು ಸಾಧ್ಯವಿಲ್ಲ: ರೈತ ಮುಖಂಡರು

ಅರುಣ್​ ಕುಮಾರ್​ ಬೆಳ್ಳಿ

Updated on: Sep 26, 2023 | 12:22 PM

Bengaluru Bandh: ರೈತ ಮುಖಂಡರು ಸರ್ಕಾರ ಮೊದಲು ಜನರಿಗೆ ಕುಡಿಯಲು ನೀರು ಸಿಗುವಂತಾಗಲು ತಮಿಳುನಾಡುಗೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿ, ತಮ್ಮನ್ನು ಬಂಧಿಸಲು ಪೊಲೀಸರು ಬರಲಿ, ರಾಜ್ಯದ ರೈತರೆಲ್ಲ ಒಂದುಗೂಡುತ್ತೇವೆ, ಯಾರ ಬಲ ಹೆಚ್ಚು ಅಂತ ನೋಡೇ ಬಿಡೋಣ ಅಂತ ಸರ್ಕಾರಕ್ಕೆ ಸವಾಲೆಸೆದರು.

ಬೆಂಗಳೂರು: ನಗರದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳ ಸದಸ್ಯರು ಸರ್ಕಾದ ವಿರುದ್ಧ ಅದರಲ್ಲೂ ವಿಶೇಷವಾಗಿ ನೀರಾವರಿ ಸಚಿವ ಡಿಕೆ ಶಿವಕುಮಾರ್ (DK Shivakumar) ಮೇಲೆ ಹರಿ ಹಾಯುತ್ತಿದ್ದಾರೆ. ವಿಧಾನ ಸೌಧದಲ್ಲಿ (Vidhana Soudha) ಕೂತು ತಮಿಳುನಾಡುಗೆ ನೀರು ಬಿಡುತ್ತಿಲ್ಲ ಅಂತ ರೈತರ ಕಿವಿಗಳಿಗೆ ಶಿವಕುಮಾರ ಹೂ ಮುಡಿಸಿದ್ದಾರೆ (fooled farmers), ಆದರೆ ಇನ್ನು ಅದು ಸಾಧ್ಯವಿಲ್ಲ, ರಾಜ್ಯದ ರೈತರು ಹೂ ಮುಡಿಸಿಕೊಳ್ಳುವುದು ಸಾಧ್ಯವಿಲ್ಲ ಅಂತ ಒಬ್ಬ ರೈತ ಮುಖಂಡ ಹೇಳಿದರು. ಮೊದಲು ಅವರು ಜನರಿಗೆ ಕುಡಿಯಲು ನೀರು ಸಿಗುವಂತಾಗಲು ತಮಿಳುನಾಡುಗೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿ, ತಮ್ಮನ್ನು ಬಂಧಿಸಲು ಪೊಲೀಸರು ಬರಲಿ, ರಾಜ್ಯದ ರೈತರೆಲ್ಲ ಒಂದುಗೂಡುತ್ತೇವೆ, ಯಾರ ಬಲ ಹೆಚ್ಚು ಅಂತ ನೋಡೇ ಬಿಡೋಣ ಅಂತ ಸರ್ಕಾರಕ್ಕೆ ಸವಾಲೆಸೆದರು. ಫ್ರೀಡಂ ಪಾರ್ಕ್ನಲ್ಲಿ ಕೆಲ ರೈತರು, ತಲೆಮೇಲೆ ಖಾಲಿ ಕೊಡ ಇಟ್ಟಿಕೊಂಡು ಪ್ರದರ್ಶನ ನಡೆಸಿದರೆ ಬೇರೆ ಕೆಲವರು ಬರಿ ಮೈಯಲ್ಲಿ ನಿತು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 26, 2023 12:14 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.