ಇಸ್ರೋ ಸಾಧಕಿ ರೂಪಾಗೆ ಟಿವಿ9 ಪ್ರಶಸ್ತಿ ಪ್ರಧಾನ; ವಿಡಿಯೋ ನೋಡಿ

| Updated By: sandhya thejappa

Updated on: Jan 05, 2022 | 7:10 AM

2013ರ ನವೆಂಬರ್ 5ರಂದು ಶ್ರೀಹರಿಕೋಟದಿಂದ PSLV ಮೂಲಕ ಗಗನಕ್ಕೆ ನೆಗೆದ ಉಪಗ್ರಹ, ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿತ್ತು. ಸುದೀರ್ಘ ಪಯಣದ ನಂತರ 2014ರ ಸೆಪ್ಟೆಂಬರ್ 14ರಿಂದ ಮಂಗಳ ಗ್ರಹದ ಪ್ರದಕ್ಷಿಣೆ ಆರಂಭಿಸಿತ್ತು.

ಟಿವಿ9 ಕನ್ನಡ ಪ್ರತಿ ವರ್ಷದಂತೆ ಈ ಬಾರಿಯೂ ನವ ನಕ್ಷತ್ರ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಟಿವಿ9 ಕನ್ನಡ 15ನೇ ವಾರ್ಷಿಕೋತ್ಸವ ಹಿನ್ನೆಲೆ ಈ ಬಾರಿ ಸುಮಾರು 9 ಸಾಧಕರನ್ನ ಗುರುತಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಟ ಶಿವರಾಜ್ ಕುಮಾರ್, ನಟಿ ರಶ್ಮಿಕಾ, ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. 2013ರ ನವೆಂಬರ್ 5ರಂದು ಶ್ರೀಹರಿಕೋಟದಿಂದ PSLV ಮೂಲಕ ಗಗನಕ್ಕೆ ನೆಗೆದ ಉಪಗ್ರಹ, ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿತ್ತು. ಸುದೀರ್ಘ ಪಯಣದ ನಂತರ 2014ರ ಸೆಪ್ಟೆಂಬರ್ 14ರಿಂದ ಮಂಗಳ ಗ್ರಹದ ಪ್ರದಕ್ಷಿಣೆ ಆರಂಭಿಸಿತ್ತು. ಈ ಮೂಲಕ ಭಾರತ, ಪ್ರಥಮ ಪ್ರಯತ್ನದಲ್ಲೇ ಮಂಗಳ ಗ್ರಹಕ್ಕೆ ಉಪಗ್ರಹ ರವಾನಿಸಿದ ಜಗತ್ತಿನ ಏಕೈಕ ರಾಷ್ಟ್ರ ಎನ್ನುವ ಹಿರಿಮೆಗೆ ಪಾತ್ರವಾಗಿತ್ತು. ಭಾರತದ ಈ ಭವ್ಯ ಸಾಧನೆಗೆ ಕಾರಣವಾದ ಇಸ್ರೋ ವಿಜ್ಞಾನಿಗಳಲ್ಲಿ ನಮ್ಮ ಕರುನಾಡಿನ ಹೆಮ್ಮೆಯ ಮಗಳು ರೂಪಾ ಎಂ ವಿ ಸಹ ಒಬ್ಬರು.

ಇದನ್ನೂ ಓದಿ

Navanakshatra Sanman 2021: ರಶ್ಮಿಕಾ ಮಂದಣ್ಣ ತನ್ನ ನಗುವಿಂದಲೇ ದೇಶದ ಜನರ ಮನಸು ಗೆದ್ದಿದ್ದಾರೆ; ರವಿಚಂದ್ರನ್ ಮೆಚ್ಚುಗೆ

Navanakshatra Sanman 2021: ಪ್ರಶಸ್ತಿ ನೀಡುವುದರಿಂದ ಸಾಧಕರಿಗೂ, ಸಾಧಿಸುವವರಿಗೂ ಪ್ರೋತ್ಸಾಹ ಸಿಗುತ್ತದೆ; ರಘು ದೀಕ್ಷಿತ್

Follow us on