Karnataka Assembly Polls: ಮತದಾನದ ಬಳಿಕ ನಿರಾಳರಾಗಿರುವ ಜಗದೀಶ್ ಶೆಟ್ಟರ್ ಮನೆಯಲ್ಲಿ ಕೂತು ಆಪ್ತರೊಂದಿಗೆ ಹರಟುತ್ತಿದ್ದಾರೆ

| Updated By: Digi Tech Desk

Updated on: May 11, 2023 | 5:12 PM

ತಮ್ಮ ನಿವಾಸದಲ್ಲಿ ಶೆಟ್ಟರ್, ಸ್ನೇಹಿತರನ್ನು, ಆಪ್ತರನ್ನು ಭೇಟಿಯಾಗಿ ಲೋಕಭಿರಾಮವಾಗಿ ಹರಟಿದರು. ಆಗಾಗ್ಗೆ ದಿನಪತ್ರಿಕೆಗಳ ಮೇಲೂ ಕಣ್ಣಾಡಿಸಿದರು.

ಹುಬ್ಬಳ್ಳಿ: ಕರ್ನಾಟಕ ವಿಧಾನಸಭಾ ಚುನಾವಣೆಯ (assembly polls) ಎಲ್ಲ ಹಂತಗಳು ಮುಗಿದು ಫಲಿತಾಂಶ ಹೊರಬೀಳುವುದೊಂದು ಬಾಕಿಯಿದೆ. ಆಫ್ ಕೋರ್ಸ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳು ಈಗ ನಿರಾಳರಾಗಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಹುಬ್ಬಳ್ಳಿ-ಧಾರವಾಡ ಕೇಂದ್ರ (Hubballi-Dharwad Central) ಕ್ಷೇತ್ರದಿಂದ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಇಂದು ಭಾರಿ ರಿಲ್ಯಾಕ್ಸ್ಡ್ ಮೂಡ್ ನಲ್ಲಿ ಕಂಡರು. ತಮ್ಮ ನಿವಾಸದಲ್ಲಿ ಅವರು ಸ್ನೇಹಿತರನ್ನು, ಆಪ್ತರನ್ನು ಭೇಟಿಯಾಗಿ ಲೋಕಭಿರಾಮವಾಗಿ ಹರಟಿದರು. ಆಗಾಗ್ಗೆ ದಿನಪತ್ರಿಕೆಗಳ ಮೇಲೂ ಕಣ್ಣಾಡಿಸಿದರು. ಕೆಲ ಅಭಿಮಾನಿಗಳು ಅವರ ನಿವಾಸಕ್ಕೆ ಬಂದು ಪಾದ ಮುಟ್ಟಿ ನಮಸ್ಕರಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:31 pm, Thu, 11 May 23

Follow us on