ಒಡಿಶಾ, ಜುಲೈ 07: ಪ್ರತಿ ವರ್ಷದಂತೆ ಈ ವರ್ಷವೂ ಪುರಿ ಜಗನ್ನಾಥ ರಥಯಾತ್ರೆಗೆ (Jagannath Rath Yatra) ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಇಂದಿನಿಂದ ಒಂಬತ್ತು ದಿನಗಳವರೆಗೆ ಈ ಯಾತ್ರೆ ನಡೆಯುತ್ತಿದೆ. ದೇಶದ ಮೂಲೆ ಮೂಲೆಯಿಂದ ಲಕ್ಷಾಂತರ ಜನರು ಆಗಮಿಸುವ ಮೂಲಕ ಜಗನ್ನಾಥನ ಭಕ್ತಿಗೆ ಪಾತ್ರರಾಗುತ್ತಾರೆ. ಭಗವಾನ್ ಜಗನ್ನಾಥ, ಭಗವಾನ್ ಬಲಭದ್ರ ಮತ್ತು ದೇವಿ ಸುಭದ್ರೆಯ ವಿಧ್ಯುಕ್ತವಾದ ‘ಪಹಂಡಿ’ ಆಚರಣೆಯು ಇಂದು ಬೆಳ್ಳಿಗೆ 11 ಗಂಟೆಗೆ ಪ್ರಾರಂಭವಾಗಿದೆ. ಜಗನ್ನಾಥನ ಈ ವಾರ್ಷಿಕ ರಥಯಾತ್ರೆಗೆ ಅಪಾರ ಜನಸ್ತೋಮವೇ ನೆರೆದಿದೆ. ಭಾನುವಾರ ಮಧ್ಯಾಹ್ನ ಪುರಿಯ 12 ನೇ ಶತಮಾನದ ಜಗನ್ನಾಥ ದೇವಾಲಯದಿಂದ ಸುಮಾರು 2.5 ಕಿಲೋಮೀಟರ್ ದೂರದಲ್ಲಿರುವ ಗುಂಡಿಚಾ ದೇವಾಲಯದ ಕಡೆಗೆ ಸಾವಿರಾರು ಜನರು ಬೃಹತ್ ರಥಗಳನ್ನು ಎಳೆದಿದ್ದಾರೆ. ರಥಯಾತ್ರೆಗೆ ಚಾಲನೆ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೂರು ರಥಗಳಿಗೆ ಪ್ರದಕ್ಷಿಣೆ ಹಾಕಿ ಜಗನ್ನಾಥನಿಗೆ ನಮಸ್ಕರಿಸಿದರು. ಇನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ಶುಭಾಶಯ ಕೋರಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.