ಸುದೀಪ್ ಬಳಿಕ ಪೈರಸಿ ವಿರುದ್ಧ ಧ್ವನಿ ಎತ್ತಿದ ಜಗ್ಗೇಶ್; ಕಾರಣ ಏನು?
ಇತ್ತೀಚೆಗೆ ಅನೇಕ ಸೆಲೆಬ್ರಿಟಿಗಳು ಪೈರಸಿ ಬಗ್ಗೆ ಧ್ವನಿ ಎತ್ತುತ್ತಾ ಇದ್ದಾರೆ. ಈಗ ಜಗ್ಗೇಶ್ ಅವರು ಪೈರಸಿ ಬಗ್ಗೆ ಮಾತನಾಡಿದ್ದಾರೆ. ಅವರು ಈ ಬಗ್ಗೆ ಮಾತನಾಡಲು ಕಾರಣವೂ ಇದೆ ಎಂದೇ ಹೇಳಬಹುದು. ಆ ಕಾರಣ ಏನು? ಏಕಾಏಕಿ ಜಗ್ಗೇಶ್ ಅವರು ಈ ಬಗ್ಗೆ ಧ್ವನಿ ಎತ್ತಿದ್ದು ಏಕೆ? ಆ ಬಗ್ಗೆ ಇಲ್ಲಿದೆ ವಿವರ.
ಟ ಸುದೀಪ್ ಅವರು ಪೈರಸಿ ಬಗ್ಗೆ ಧ್ವನಿ ಎತ್ತಿದ್ದು ಗೊತ್ತೇ ಇದೆ. ಸುದೀಪ್ ಬಳಿಕ ಜಗ್ಗೇಶ್ ಅವರು ಪೈರಸಿ ಬಗ್ಗೆ ಮಾತನಾಡಿದ್ದಾರೆ. ಅವರ ಸಹೋದರ ಕೋಮಲ್ ಕುಮಾರ್ ನಟನೆಯ ‘ಕೋಣ’ ಸಿನಿಮಾ ಪೈರಸಿ ಆಗಿತ್ತು. ಇದನ್ನು ಮಾಡಿದವರ ವಿರುದ್ಧ ಜಗ್ಗೇಶ್ ದೂರು ನೀಡಿದ್ದರು. ಈಗ ನಂದಿನಿ ಲೇಔಟ್ ಪೊಲೀಸರು ಪೈರಸಿ ಮಾಡುತ್ತಿದ್ದ ಓರ್ವನ ಬಂಧಿಸಿದ್ದಾರೆ. ಫೇಸ್ಬುಕ್ ಲೈವ್ ಬಂದು ಪೈರಸಿ ವಿರುದ್ಧ ನಟ ಜಗ್ಗೇಶ್ ಆಕ್ರೋಶ ಹೊರಹಾಕಿದ್ದಾರೆ. ‘ಸಿನಿಮಾ ಪೈರಸಿ ಕೊಲೆಗೆ ಸಮಾನ, ನಿರ್ಮಾಪಕನನ್ನು ಕೊಂದಂತೆ. ಪೈರಸಿ ಮಾಡೋದು ದರೋಡೆ ಮಾಡಿದಂತೆ’ ಎಂದು ನಟ ಜಗ್ಗೇಶ್ ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us