
Kichcha Sudeep
ಕಿಚ್ಚ ಸುದೀಪ್ ಅವರು ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಅವರು ಮೂಲತಃ ಶಿವಮೊಗ್ಗದವರು. ಹಲವು ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ಹಿಂದಿ ಸಿನಿಮಾಗಳಲ್ಲೂ ನಟಿಸಿ ಅವರು ಫೇಮಸ್ ಆಗಿದ್ದಾರೆ.
ಕಿಚ್ಚ ಸುದೀಪ್ ಅವರು ನಟನೆ ಮಾತ್ರವಲ್ಲದೇ ನಿರ್ದೇಶನದ ಮೂಲಕವೂ ಜನಮನ ಗೆದ್ದಿದ್ದಾರೆ. ಅವರು ಮೊದಲು ನಿರ್ದೇಶನ ಮಾಡಿದ ಸಿನಿಮಾ ‘ಮೈ ಆಟೋಗ್ರಾಫ್’ ಸೂಪರ್ ಹಿಟ್ ಆಯಿತು. ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕನಾಗಿಯೂ ಸುದೀಪ್ ಅವರು ಜನರಿಗೆ ಹತ್ತಿರ ಆಗಿದ್ದಾರೆ. ಕನ್ನಡದಲ್ಲಿ 2023ರವರೆಗೆ ಎಲ್ಲ 10 ಸೀಸನ್ಗಳ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆಯನ್ನು ಅವರು ಮಾಡಿದ್ದಾರೆ.
ಕಿಚ್ಚ ಸುದೀಪ್ ಅವರ ಪತ್ನಿಯ ಹೆಸರು ಪ್ರಿಯಾ. ಈ ದಂಪತಿಗೆ ಶಾನ್ವಿ ಎಂಬ ಮಗಳು ಇದ್ದಾರೆ. ಬೆಂಗಳೂರಿನ ಜೆಪಿ ನಗರದಲ್ಲಿ ಸುದೀಪ್ ಅವರ ಮನೆ ಇದೆ. ‘ಸ್ಪರ್ಶ’, ‘ಹುಚ್ಚ’, ‘ವೀರ ಮದಕರಿ’, ‘ಕೆಂಪೇಗೌಡ’, ‘ಮಾಣಿಕ್ಯ’, ‘ವಿಕ್ರಾಂತ್ ರೋಣ’, ‘ದಬಂಗ್ 3’ ಮುಂತಾದವು ಸುದೀಪ್ ನಟನೆಯ ಪ್ರಮುಖ ಸಿನಿಮಾಗಳು. ಗಾಯನದಲ್ಲೂ ಆಸಕ್ತಿ ಹೊಂದಿರುವ ಅವರು ಕೆಲವು ಸಿನಿಮಾದ ಗೀತೆಗಳಿಗೆ ಧ್ವನಿ ನೀಡಿದ್ದಾರೆ.
‘ಸುದೀಪಣ್ಣ, ಶಿವಣ್ಣ ನನಗೆ ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ’ ನಾನಿ ಮುಕ್ತ ಮಾತು
ನಾನಿ ಅವರಿಗೆ ಕರ್ನಾಟಕದಲ್ಲಿ ಸಾಕಷ್ಟು ದೊಡ್ಡ ಅಭಿಮಾನಿ ಬಳಗ ಇದೆ. ಅವರ ನಟನೆಯ ‘ಹಿಟ್ 3’ ಸಿನಿಮಾ ಕರ್ನಾಟಕದಲ್ಲೂ ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಮಾತನಾಡಲು ನಾನಿ ಅವರು ಟಿವಿ9 ಕನ್ನಡದ ಜೊತೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಹಲವು ವಿಚಾರಗಳನ್ನು ಅವರು ಮುಕ್ತವಾಗಿ ಹಂಚಿಕೊಂಡಿದ್ದಾರೆ.
- Rajesh Duggumane
- Updated on: Apr 30, 2025
- 10:49 am
ತೆಲುಗು ಸ್ಟಾರ್ ನಟನ ಸಿನಿಮಾಗೆ ಧ್ವನಿಯಾದ ಸುದೀಪ್ ಮಗಳು ಸಾನ್ವಿ
ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಅವರು ತೆಲುಗು ಚಿತ್ರಕ್ಕೆ ಧ್ವನಿ ನೀಡಿದ್ದಾರೆ. ನಾನಿ ನಟನೆಯ ಈ ಚಿತ್ರದ ಟ್ರೈಲರ್ನಲ್ಲಿ ಸಾನ್ವಿ ಅವರ ಧ್ವನಿ ಕೇಳಬಹುದು. ಪಾಪ್ ಹಾಡುಗಳಿಗೆ ಹೆಸರಾಗಿರುವ ಸಾನ್ವಿ ಅವರು ಭವಿಷ್ಯದಲ್ಲಿ ಗಾಯಕಿಯಾಗುವ ಸಾಧ್ಯತೆಯಿದೆ. ನಾನಿ ಹೇಳಿದ ಮಾತನ್ನು ನೀವೇ ಕೇಳಿ.
- Rajesh Duggumane
- Updated on: Apr 25, 2025
- 12:49 pm
‘ಕೆಜಿಎಫ್ 2’ ಬಳಿಕ ಶ್ರೀನಿಧಿ ಶೆಟ್ಟಿ ಸೈಲೆಂಟ್; ಈಗ ಕನ್ನಡದ ಸ್ಟಾರ್ ಹೀರೋ ಚಿತ್ರಕ್ಕೆ ನಾಯಕಿ
‘ಕೆಜಿಎಫ್’ ಶ್ರೀನಿಧಿ ಶೆಟ್ಟಿ ಅವರ ಮೊದಲ ಸಿನಿಮಾ. ‘ಕೆಜಿಎಫ್ 2’ ಅವರ ಎರಡನೇ ಸಿನಿಮಾ. ಮರೂನೇ ಸಿನಿಮಾ ತಮಿಳಿನಲ್ಲಿ. ಆ ಬಳಿಕ ಅವರು ಸಿನಿಮಾ ಮಾಡಿರಲೇ ಇಲ್ಲ. ಈಗ ಅವರ ನಟನೆಯ ಮತ್ತೊಂದು ಸಿನಿಮಾ ರಿಲೀಸ್ಗೆ ರೆಡಿ ಆಗುತ್ತಿದೆ. ಅಲ್ಲದೆ, ಕನ್ನಡದ ಸ್ಟಾರ್ ಹೀರೋ ಚಿತ್ರಕ್ಕೆ ನಾಯಕಿ ಆಗುತ್ತಿದ್ದಾರೆ.
- Rachappaji Naik S
- Updated on: Apr 21, 2025
- 12:45 pm
ಸೆಟ್ಟೇರಿತು ಕಿಚ್ಚ ಸುದೀಪ್ ನಟನೆಯ ‘ಬಿಲ್ಲ ರಂಗ ಬಾಷ’; BRB ಫಸ್ಟ್ ಲುಕ್ ರಿವೀಲ್
BRB First Blood: ಕಿಚ್ಚ ಸುದೀಪ್ ಮತ್ತು ಅನುಪ್ ಭಂಡಾರಿ ಅವರ "ಬಿಲ್ಲ ರಂಗ ಬಾಷ" ಚಿತ್ರದ ಚಿತ್ರೀಕರಣ ಏಪ್ರಿಲ್ 16 ರಿಂದ ಆರಂಭವಾಗಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಇದರಲ್ಲಿ ಸುದೀಪ್ ಅವರ ಅದ್ಭುತ ನೋಟ ಗಮನ ಸೆಳೆಯುತ್ತದೆ. ಈ ಚಿತ್ರವು ದೊಡ್ಡ ಬಜೆಟ್ನೊಂದಿಗೆ ಕನ್ನಡ, ತೆಲುಗು, ಹಿಂದಿ ಮೊದಲಾದ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
- Rajesh Duggumane
- Updated on: Apr 16, 2025
- 9:47 am
‘ನನ್ನ ಸುದೀಪ್ ಮಧ್ಯೆ ಸಣ್ಣಪುಟ್ಟ ಮನಸ್ತಾಪ ಆಗಿರಬಹುದು, ಆದರೆ ವೈರತ್ವ ಬೆಳೆದಿಲ್ಲ’; ಶಿವರಾಜ್ಕುಮಾರ್
ಶಿವರಾಜ್ಕುಮಾರ್ ಅವರು ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದವರು. ಅವರಿಗೆ ಇತ್ತೀಚೆಗೆ ಕ್ಯಾನ್ಸರ್ ಆಯಿತು. ಇದರಿಂದ ಅವರು ಸಾಕಷ್ಟು ಅನುಭವಿಸಬೇಕಾಗಿ ಬಂತು. ಆದರೆ, ಇದಕ್ಕೆ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಈಗ ಅವರು ಸುದೀಪ್ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ. ಸುದೀಪ್ ಜೊತೆಗಿನ ಒಡನಾಟ ಹೇಗಿದೆ ಎಂದು ವಿವರಿಸಿದ್ದಾರೆ.
- Rajesh Duggumane
- Updated on: Apr 8, 2025
- 10:40 am
ಹೊಸ ಚಿತ್ರದ ಅಪ್ಡೇಟ್ ಕೊಟ್ಟ ಸುದೀಪ್; ಕಿಚ್ಚನ ಕಟ್ಟು ಮಸ್ತಾದ ಬಾಡಿ ನೋಡಿ ಫ್ಯಾನ್ಸ್ ಖುಷ್
Kichcha Sudeep: ಕಿಚ್ಚ ಸುದೀಪ್ ಅವರು ತಮ್ಮ ಹೊಸ ಚಿತ್ರದ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಅವರ ಅದ್ಭುತವಾದ ಬಾಡಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಏಪ್ರಿಲ್ 16ರಂದು ಅವರ ಮುಂದಿನ ಚಿತ್ರದ ಬಗ್ಗೆ ಮಾಹಿತಿ ಸಿಗಲಿದೆ. ಇದು 'ಬಿಲ್ಲ ರಂಗ ಬಾಷ' ಚಿತ್ರವಾಗಿರಬಹುದು ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಸುದೀಪ್ ಬಾಡಿ ನೋಡಿ ಫ್ಯಾನ್ಸ್ ಕಣ್ಣರಳಿಸಿದ್ದಾರೆ.
- Rajesh Duggumane
- Updated on: Apr 3, 2025
- 7:37 am
‘ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ’; ಮಗುವಿಗಾಗಿ ಮಿಡಿದ ಕಿಚ್ಚನ ಹೃದಯ
ಕಿಚ್ಚ ಸುದೀಪ್ ಅವರದ್ದು ದೊಡ್ಡ ಹೃದಯ. ಅವರು ನಿಂತಲ್ಲೆ ಅನೇಕರಿಗೆ ಸಹಾಯ ಮಾಡುವ ಗುಣ ಹೊಂದಿದ್ದಾರೆ. ಈಗ ಅವರು ಒಂದು ಮಗುವಿಗಾಗಿ ಮಿಡಿದ್ದಾರೆ. ತಾವು ಸಹಯಾ ಮಾಡಿದ್ದೂ ಅಲ್ಲದೆ, ಅಭಿಮಾನಿಗಳ ಬಳಿಯೂ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
- Rajesh Duggumane
- Updated on: Mar 31, 2025
- 1:21 pm
ಅಂಬಿ ಮೊಮ್ಮಗನ ನಾಮಕರಣ: ವಿಶೇಷ ಗಿಫ್ಟ್ ನೀಡಿದ ಕಿಚ್ಚ ಸುದೀಪ್
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಅಂಬರೀಶ್ ಮೊಮ್ಮೊಗನ ನಾಮಕರಣ ಶಾಸ್ತ್ರ ನಡೆದಿದೆ. ಈ ಸಮಾರಂಭಕ್ಕೆ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದಾರೆ. ಕಿಚ್ಚ ಸುದೀಪ್ ಅವರು ಪತ್ನಿ ಪ್ರಿಯಾ ಜೊತೆ ಬಂದು ವಿಶೇಷವಾದ ಉಡುಗೊರೆ ನೀಡಿದ್ದಾರೆ. ಅಭಿಷೇಕ್, ಅವಿವಾ ದಂಪತಿಯ ಮಗನಿಗೆ ರಾಣಾ ಅಮರ್ ಎಂದು ಹೆಸರು ಇಡಲಾಗಿದೆ.
- Madan Kumar
- Updated on: Mar 16, 2025
- 2:53 pm
ರನ್ಯಾ ಕಾರಣಕ್ಕೆ ಸುದೀಪ್ಗೆ ಆದ ಕಷ್ಟ ಒಂದೆರಡಲ್ಲ: ಶಾಕಿಂಗ್ ವಿಚಾರ ತಿಳಿಸಿದ ರವಿ ಶ್ರೀವತ್ಸ
ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರನ್ಯಾ ಬಗ್ಗೆ ನಿರ್ದೇಶಕ ರವಿ ಶ್ರೀವತ್ಸ ಮಾತನಾಡಿದ್ದಾರೆ. ‘ಮಾಣಿಕ್ಯ’ ಸಿನಿಮಾದ ದಿನಗಳನ್ನು ಅವರು ಮೆಲುಕು ಹಾಕಿದ್ದಾರೆ. ‘ಮಾಣಿಕ್ಯ’ ಸಿನಿಮಾಗೆ ರನ್ಯಾ ಅವರನ್ನು ಆಯ್ಕೆ ಮಾಡಿದ್ದರಿಂದ ಸುದೀಪ್ ಅವರಿಗೆ ತುಂಬಾ ಕಷ್ಟ ಆಗಿತ್ತು ಎಂದು ರವಿ ಶ್ರೀವತ್ಸ ಹೇಳಿದ್ದಾರೆ.
- Mangala RR
- Updated on: Mar 11, 2025
- 7:22 pm
‘ಎಲ್ಲರ ಬಾಳಲ್ಲೂ ಆಗೋದು ಇದೇ’; ಜೀವನದ ಬಗ್ಗೆ ಸುದೀಪ್ ಮಾಡಿದ ಈ ಪಾಠ ನೆನಪಿದೆಯೇ
ಕಿಚ್ಚ ಸುದೀಪ್ ಅವರ ಹಳೆಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಜೀವನದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ವಿಶೇಷವಾಗಿ ಅವರ ಅರೇಂಜ್ಡ್ ಮ್ಯಾರೇಜ್ ಅನುಭವ ಮತ್ತು ಜೀವನದಲ್ಲಿ ಒಪ್ಪಿಗೆಯ ಮಹತ್ವದ ಬಗ್ಗೆ ಮಾತನಾಡಿದ್ದಾರೆ. 'ಮ್ಯಾಕ್ಸ್' ಚಿತ್ರದ ಯಶಸ್ಸಿನ ನಂತರ, ಅವರು 'ಬಿಲ್ಲ ರಂಗ ಭಾಷ' ಚಿತ್ರದಲ್ಲಿ ನಟಿಸಲಿದ್ದಾರೆ ಮತ್ತು ನಿರ್ದೇಶನದಲ್ಲೂ ತೊಡಗಿಸಿಕೊಳ್ಳುವ ಯೋಜನೆಯನ್ನು ಹೊಂದಿದ್ದಾರೆ.
- Shreelaxmi H
- Updated on: Mar 4, 2025
- 7:50 am