Kichcha Sudeep
ಕಿಚ್ಚ ಸುದೀಪ್ ಅವರು ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಅವರು ಮೂಲತಃ ಶಿವಮೊಗ್ಗದವರು. ಹಲವು ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ಹಿಂದಿ ಸಿನಿಮಾಗಳಲ್ಲೂ ನಟಿಸಿ ಅವರು ಫೇಮಸ್ ಆಗಿದ್ದಾರೆ.
ಕಿಚ್ಚ ಸುದೀಪ್ ಅವರು ನಟನೆ ಮಾತ್ರವಲ್ಲದೇ ನಿರ್ದೇಶನದ ಮೂಲಕವೂ ಜನಮನ ಗೆದ್ದಿದ್ದಾರೆ. ಅವರು ಮೊದಲು ನಿರ್ದೇಶನ ಮಾಡಿದ ಸಿನಿಮಾ ‘ಮೈ ಆಟೋಗ್ರಾಫ್’ ಸೂಪರ್ ಹಿಟ್ ಆಯಿತು. ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕನಾಗಿಯೂ ಸುದೀಪ್ ಅವರು ಜನರಿಗೆ ಹತ್ತಿರ ಆಗಿದ್ದಾರೆ. ಕನ್ನಡದಲ್ಲಿ 2023ರವರೆಗೆ ಎಲ್ಲ 10 ಸೀಸನ್ಗಳ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆಯನ್ನು ಅವರು ಮಾಡಿದ್ದಾರೆ.
ಕಿಚ್ಚ ಸುದೀಪ್ ಅವರ ಪತ್ನಿಯ ಹೆಸರು ಪ್ರಿಯಾ. ಈ ದಂಪತಿಗೆ ಶಾನ್ವಿ ಎಂಬ ಮಗಳು ಇದ್ದಾರೆ. ಬೆಂಗಳೂರಿನ ಜೆಪಿ ನಗರದಲ್ಲಿ ಸುದೀಪ್ ಅವರ ಮನೆ ಇದೆ. ‘ಸ್ಪರ್ಶ’, ‘ಹುಚ್ಚ’, ‘ವೀರ ಮದಕರಿ’, ‘ಕೆಂಪೇಗೌಡ’, ‘ಮಾಣಿಕ್ಯ’, ‘ವಿಕ್ರಾಂತ್ ರೋಣ’, ‘ದಬಂಗ್ 3’ ಮುಂತಾದವು ಸುದೀಪ್ ನಟನೆಯ ಪ್ರಮುಖ ಸಿನಿಮಾಗಳು. ಗಾಯನದಲ್ಲೂ ಆಸಕ್ತಿ ಹೊಂದಿರುವ ಅವರು ಕೆಲವು ಸಿನಿಮಾದ ಗೀತೆಗಳಿಗೆ ಧ್ವನಿ ನೀಡಿದ್ದಾರೆ.
‘ಅದಕ್ಕೆ ದೊಡ್ಡೋರು ಅನ್ನೋದು’; ಸುದೀಪ್ ಬಗ್ಗೆ ಧನ್ವೀರ್ ಮೆಚ್ಚುಗೆ
ನಟ ಸುದೀಪ್ ಅವರು ದರ್ಶನ್ ಆಪ್ತ ಧನ್ವೀರ್ ನೀಯತ್ತನ್ನು ಮೆಚ್ಚಿ ಮಾತನಾಡಿದ್ದರು. ಇದು ಸ್ಯಾಂಡಲ್ವುಡ್ನಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ದರ್ಶನ್ ಬಗ್ಗೆ ಸುದೀಪ್ಗೆ ಗೌರವವಿದ್ದರೂ, ಇಬ್ಬರ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಘರ್ಷಣೆಗಳು ನಡೆಯುತ್ತವೆ. ಇತ್ತೀಚೆಗೆ ಧನ್ವೀರ್ ಮಾತನಾಡಿದ್ದು, ಸುದೀಪ್ ಅವರನ್ನು ದೊಡ್ಡವರ ಮಾತು ಎಂದು ಶ್ಲಾಘಿಸಿದ್ದಾರೆ.
- Rajesh Duggumane
- Updated on: Feb 9, 2026
- 7:59 am
ಕನಕಪುರ ಶ್ರೀನಿವಾಸ್ ಅಶ್ಲೀಲ ಮಾತಿಗೆ ಕಿಚ್ಚ ಸುದೀಪ್ ಖಡಕ್ ರಿಯಾಕ್ಷನ್
ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಹಲವರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದರು. ಡಿಕೆ ಶಿವಕುಮಾರ್, ಧ್ರುವ ಸರ್ಜಾ, ಎ.ಪಿ. ಅರ್ಜುನ್, ಜೋಗಿ ಪ್ರೇಮ್ ಸೇರಿದಂತೆ ಹಲವರ ವಿರುದ್ಧ ಅವರು ಅಶ್ಲೀಲವಾಗಿ ಮಾತನಾಡಿದ್ದರು. ಆ ಬಗ್ಗೆ ಸುದೀಪ್ ನೀಡಿದ ಪ್ರತಿಕ್ರಿಯೆ ಇಲ್ಲಿದೆ..
- Madan Kumar
- Updated on: Feb 8, 2026
- 9:04 am
ಚಂದ್ರಚೂಡ್ ವಿವಾದ: ಸುದೀಪ್ ಬಗ್ಗೆ ನಾನು ಮಾತನಾಡಿದ್ದರಲ್ಲಿ ತಪ್ಪೇ ಇಲ್ಲ ಎಂದ ಕೆ. ಮಂಜು
ಸಿನಿಮಾ ನಿರ್ಮಾಪಕರ ಬಗ್ಗೆ ಚಕ್ರವರ್ತಿ ಚಂದ್ರಚೂಡ್ ನೀಡಿದ ಹೇಳಿಕೆಯಿಂದ ವಿವಾದ ಶುರುವಾಗಿದೆ. ಅದಕ್ಕೆ ನಿರ್ಮಾಪಕ ಕೆ. ಮಂಜು ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಮಾತಾಡಿದ್ದಾರೆ. ಸುದೀಪ್ ಜತೆ ಚಂದ್ರಚೂಡ್ ಆಪ್ತವಾಗಿದ್ದಾರೆ. ಆ ಕುರಿತು ಕೂಡ ಕೆ. ಮಂಜು ಅವರು ಪ್ರತಿಕ್ರಿಯೆ ನೀಡಿದ್ದಾರೆ.
- Madan Kumar
- Updated on: Feb 6, 2026
- 6:44 pm
‘ಚೆನ್ನಾಗಿರಲ್ಲ’; ತಪ್ಪಾಗಿ ನಡೆದುಕೊಂಡವರಿಗೆ ಸುದೀಪ್ ಎಚ್ಚರಿಕೆ
ಸಿಸಿಎಲ್ ಚಾಂಪಿಯನ್ ಆದ ಬಳಿಕ ಸುದೀಪ್ ಅವರು ಅಭಿಮಾನಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ವೇದಿಕೆಯಲ್ಲಿ ಅತಿಯಾದ ಘೋಷಣೆ ಕೂಗಿ ತೊಂದರೆ ನೀಡಿದಾಗ, ಸುದೀಪ್ ಅವರು ‘ಚೆನ್ನಾಗಿರಲ್ಲ’ ಎಂದು ಸ್ಪಷ್ಟವಾಗಿ ಹೇಳಿದರು. ಅಭಿಮಾನಿಗಳ ಮೇಲಿನ ಅವರ ಪ್ರೀತಿಗೆ ಕೊರತೆಯಿಲ್ಲವಾದರೂ, ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಕಾಪಾಡಿಕೊಳ್ಳುವ ಮಹತ್ವವನ್ನು ಅವರು ಒತ್ತಿ ಹೇಳಿದರು.
- Rajesh Duggumane
- Updated on: Feb 3, 2026
- 7:34 am
‘ಔಟಾದೆ, ಹೋಗಪ್ಪ’; ಕಿಚ್ಚ ಸುದೀಪ್ ಸ್ಲೆಡ್ಜಿಂಗ್ಗೆ ಎದುರಾಳಿ ತಂಡದವರು ಕಂಗಾಲು
ಕಿಚ್ಚ ಸುದೀಪ್ ಅವರ ಹಲವು ವರ್ಷಗಳ ಕನಸು ನನಸಾಗಿದೆ. ಮತ್ತೊಮ್ಮೆ ಸಿಸಿಎಲ್ ಕಪ್ ಎತ್ತಬೇಕು ಎಂದು ಕಿಚ್ಚ ಕನಸು ಕಂಡಿದ್ದರು. ಆ ಕನಸು ಈಗ ನನಸಾಗಿದೆ. ಸುದೀಪ್ ಅವರು ಕಪ್ ಎತ್ತಿದ್ದಾರೆ. ಈ ಪಂದ್ಯದ ವೇಳೆ ಸುದೀಪ್ ಅವರು ಮಾಡಿದ ಸ್ಲೆಡ್ಜಿಂಗ್ ವಿಡಿಯೋ ಗಮನ ಸೆಳೆದಿದೆ.
- Rajesh Duggumane
- Updated on: Feb 2, 2026
- 8:11 am
ಸಿಸಿಎಲ್ ಗೆಲುವನ್ನು ತಮ್ಮದೇ ಸ್ಟೈಲ್ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಸಿಸಿಎಲ್ ಫೈನಲ್ ಅಲ್ಲಿ ಗೆಲುವು ಕಂಡಿದೆ. ಇದು ಅವರ ತಂಡ ಸಾಧಿಸಿರೋ ಮೂರನೇ ಗೆಲುವಾಗಿದೆ. ಫೆಬ್ರವರಿ 1ರಂದು ಈ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ಎಲ್ಲರ ಸಂಘಟಿತ ಆಟದಿಂದ ಗೆಲುವು ಸಿಕ್ಕಿದೆ ಅನ್ನೋದು ವಿಶೇಷ.
- Rajesh Duggumane
- Updated on: Feb 2, 2026
- 7:50 am
‘ಕನ್ನಡ ಚಿತ್ರವನ್ನು ಹೃದಯದಲ್ಲಿ ಹೊತ್ತು ನಡೆಯುತ್ತೇನೆ’; ವಿಶೇಷ ಪ್ರತಿಜ್ಞೆ ಮಾಡಿದ ಸುದೀಪ್
ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದಲ್ಲಿ 30 ವರ್ಷಗಳ ಯಶಸ್ವಿ ಪಯಣ ಪೂರೈಸಿದ್ದಾರೆ. ಈ ಸಂದರ್ಭದಲ್ಲಿ, ಅವರು ಅಭಿಮಾನಿಗಳು, ನಿರ್ದೇಶಕರು, ನಿರ್ಮಾಪಕರು, ಸಹ ಕಲಾವಿದರು, ತಂತ್ರಜ್ಞರು, ಮಾಧ್ಯಮ ಮತ್ತು ತಮ್ಮ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ‘ಮಾನವೀಯತೆ’ ಕಲಿಸಿದ ಈ ಪಯಣದಲ್ಲಿ ಎಲ್ಲರ ಪಾತ್ರವನ್ನು ಸ್ಮರಿಸಿ, ಮುಂದೆಯೂ ಕಠಿಣ ಶ್ರಮದಿಂದ ಕಲೆಯನ್ನು ಗೌರವಿಸುವುದಾಗಿ ಸುದೀಪ್ ಭರವಸೆ ನೀಡಿದ್ದಾರೆ.
- Rajesh Duggumane
- Updated on: Jan 31, 2026
- 3:13 pm
ಕ್ರಿಕೆಟ್ ಗ್ರೌಂಡ್ನಲ್ಲಿ ಅವಾಚ್ಯ ಶಬ್ದ ಬಳಕೆ ಮಾಡಿದ್ದಕ್ಕೆ ಸ್ಪಷ್ಟನೆ ಕೊಟ್ಟ ಕಿಚ್ಚ ಸುದೀಪ್
ಕಿಚ್ಚ ಸುದೀಪ್ ಸಿಸಿಎಲ್ ಪಂದ್ಯದಲ್ಲಿ ಅವಾಚ್ಯ ಶಬ್ದ ಬಳಕೆ ವಿವಾದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಜೋಗಿ ಪ್ರೇಮ್ ಇದಕ್ಕೆ ಕಾರಣ ಎಂದಿದ್ದಾರೆ. ಬಿಗ್ ಬಾಸ್ ನಿರೂಪಕ ಸುದೀಪ್ ಕೆಟ್ಟ ಪದ ಬಳಸಿದ್ದಕ್ಕೆ ಪ್ರೇಮ್ ಸಂತಸ ವ್ಯಕ್ತಪಡಿಸಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ.
- Rajesh Duggumane
- Updated on: Jan 29, 2026
- 3:09 pm
ಸುದೀಪ್ ಸರ್ ಈ ಕೂಲಿಂಗ್ ಗ್ಲಾಸ್ ಗಿಫ್ಟ್ ಕೇಳಿದ್ರು, ಕೊಡಲ್ಲ ಅಂದೆ: ಸತೀಶ್
‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋ ಮುಗಿದ ಬಳಿಕ ಸ್ಪರ್ಧಿಗಳೆಲ್ಲರೂ ಕಿಚ್ಚ ಸುದೀಪ್ ಜೊತೆ ಪಾರ್ಟಿ ಮಾಡಿದ್ದರು. ಅಲ್ಲಿ ನಡೆದ ಮಾತುಕಥೆ ಬಗ್ಗೆ ಸತೀಶ್ ಅವರು ಮಾತನಾಡಿದ್ದಾರೆ. ಸತೀಶ್ ಧರಿಸುವ ಬಟ್ಟೆ, ಕೂಲಿಂಗ್ ಕ್ಲಾಸ್ ಇತ್ಯಾದಿ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗುತ್ತದೆ.
- Mangala RR
- Updated on: Jan 26, 2026
- 10:45 pm
ಕನ್ನಡ ಬಾವುಟಕ್ಕೆ ಅವಮಾನ ಮಾಡಿದ ತಮಿಳುನಾಡಿನಲ್ಲೇ ನಮ್ಮ ಧ್ವಜ ಹಾರಿಸಿದ ಸುದೀಪ್
ಕಿಚ್ಚ ಸುದೀಪ್ ಅವರು ಕನ್ನಡ ಬಾವುಟಕ್ಕೆ ಆದ ಅವಮಾನಕ್ಕೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ದಿಟ್ಟ ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿಂದೆ ಈರೋಡ್ ಬಳಿ ಕನ್ನಡ ಬಾವುಟವನ್ನು ತೆರವುಗೊಳಿಸಿದ ಘಟನೆ ನಡೆದಿತ್ತು. ಕರ್ನಾಟಕ ಬುಲ್ಡೋಜರ್ಸ್ ಪಂದ್ಯದ ನಂತರ ಸುದೀಪ್ ಅವರು ಅಭಿಮಾನದಿಂದ ಕನ್ನಡ ಬಾವುಟ ಹಾರಿಸಿ, ನಾಡಿಗೆ ಹೆಮ್ಮೆ ತಂದರು.
- Rajesh Duggumane
- Updated on: Jan 26, 2026
- 9:26 am
ರಾಕೆಟ್ ವೇಗ; ಸಿಸಿಎಲ್ನಲ್ಲಿ ಅದ್ಭುತ ಸಿಕ್ಸ್ ಹೊಡೆದ ಕಿಚ್ಚ ಸುದೀಪ್
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಕಿಚ್ಚ ಸುದೀಪ್ ಅವರು ಅದ್ಭುತವಾಗಿ ಆಟ ಆಡಿದ್ದಾರೆ. ಅವರು ಬಾರಿಸಿದ ಸಿಕ್ಸರ್ ಗಮನ ಸೆಳೆಯೋ ರೀತಿಯಲ್ಲಿ ಇತ್ತು. ಇದರ ವೇಗ ನೋಡಿದ ಅನೇಕರು ಶಾಕ್ ಆಗಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿ ಗಮ ಸೆಳೆದಿದೆ. ಆ ವಿಡಿಯೋ ಇಲ್ಲಿದೆ ನೋಡಿ.
- Rajesh Duggumane
- Updated on: Jan 26, 2026
- 8:39 am
ಜಿಯೋ ಹಾಟ್ಸ್ಟಾರ್ ಒಟಿಟಿಯಲ್ಲಿ ‘ಮಾರ್ಕ್’: ಜ.23ರಿಂದ 4 ಭಾಷೆಗಳಲ್ಲಿ ಪ್ರಸಾರ
ವಿಜಯ್ ಕಾರ್ತಿಕೇಯ ನಿರ್ದೇಶನದ ‘ಮಾರ್ಕ್’ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರು ಪೊಲೀಸ್ ಪಾತ್ರ ಮಾಡಿದ್ದಾರೆ. ಥಿಯೇಟರ್ಗಳಲ್ಲಿ ಬಿಡುಗಡೆಯಾದ 30 ದಿನಕ್ಕೆ ಅಂದರೆ ಸರಿಯಾಗಿ 1 ತಿಂಗಳಿಗೆ ‘ಮಾರ್ಕ್’ ಸಿನಿಮಾ ಒಟಿಟಿ ಅಂಗಳಕ್ಕೆ ಪ್ರವೇಶ ಪಡೆದಿದೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ಮಿಸ್ ಮಾಡಿಕೊಂಡವರು ಈಗ ಒಟಿಟಿಯಲ್ಲಿ ನೋಡಬಹುದು.
- Madan Kumar
- Updated on: Jan 23, 2026
- 4:22 pm