Sign In

By signing in or creating an account, you agree with Associated Broadcasting Company's Terms & Conditions and Privacy Policy.

Pancharatna Yatre: ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ರಾಜಕೀಯವಾಗಿ ಪಳಗಿ ಪ್ರಬುದ್ಧತೆಯಿಂದ ಮಾತಾಡುತ್ತಿದ್ದಾರೆ!

Pancharatna Yatre: ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ರಾಜಕೀಯವಾಗಿ ಪಳಗಿ ಪ್ರಬುದ್ಧತೆಯಿಂದ ಮಾತಾಡುತ್ತಿದ್ದಾರೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 20, 2023 | 6:41 PM

ಮೊನ್ನೆ ರಾಮನಗರ ಬಳಿಯ ಟೋಲ್ ನಾಕಾವೊಂದರ ಬಳಿ ಪ್ರತಿಭಟನೆ ನಡೆಸುವಾಗಲೂ ಅಧಿಕಾರಿಯೊಬ್ಬರೊಂದಿಗೆ ಅಳೆದು ತೂಗಿ ಮಾತಾಡಿದರು.

ಕೋಲಾರ: ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ರಾಜಕೀಯವಾಗಿ ಪ್ರಬುದ್ಧರಾಗುತ್ತಿದ್ದಾರೆ (political maturity) ಅನ್ನೋದರಲ್ಲಿ ಎರಡು ಮಾತಿಲ್ಲ. ಕೋಲಾರದ ಬಂಗಾರಪೇಟೆಯಲ್ಲಿ ಅವರು ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಎಲ್ ಆರ್ ಶಿವರಾಮೇಗೌಡರು (LR Shivaramegowda) ಜೆಡಿಎಸ್ ನಾಯಕರಿಗೆ ಬುದ್ಧಿ ಕಲಿಸುವ ಬಗ್ಗೆ ಆಡಿದ ಮಾತಿಗೆ ಬಹಳ ಪ್ರಬುದ್ಧವಾಗಿ ಉತ್ತರಿಸಿದರು. ಮೊದಲಾಗಿದ್ದರೆ ಇದೇ ಪ್ರಶ್ನೆಗೆ ಅವರು ಶಿವರಾಮೇಗೌಡರ ವಿರುದ್ಧ ಹರಿಹಾಯುತ್ತಿದ್ದರು ಮತ್ತು ಜನ್ಮ ಜಾಲಾಡುತ್ತಿದ್ದರು. ಆದರೆ, ಅವರು ಆಗಿನ ಆವೇಶ, ರೋಷ, ಉಡಾಫೆ ಪ್ರದರ್ಶಿಸದೆ ಒಬ್ಬ ಪಳಗಿದ ರಾಜಕಾರಣಿಯಂತೆ ಮಾತಾಡುತ್ತಿದ್ದಾರೆ. ಮೊನ್ನೆ ರಾಮನಗರ ಬಳಿಯ ಟೋಲ್ ನಾಕಾವೊಂದರ ಬಳಿ ಪ್ರತಿಭಟನೆ ನಡೆಸುವಾಗಲೂ ಅಧಿಕಾರಿಯೊಬ್ಬರೊಂದಿಗೆ ಅಳೆದು ತೂಗಿ ಮಾತಾಡಿದರು. ಬಂಗಾರಪೇಟೆಯಲ್ಲಿ ಅವರು ನೀಡಿದ ಪ್ರತಿಕ್ರಿಯೆಯನ್ನು ನೀವೇ ಆಲಿಸಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ