ವಿಷ್ಣು ಸಮಾಧಿ ಧ್ವಂಸ: ಬಾಲಣ್ಣ ಕುಟುಂಬದ ಜೊತೆ ಕೆ. ಮಂಜು ಮಾಡಿದ ಮಾತುಕತೆ ಏನು?

Updated on: Aug 24, 2025 | 1:44 PM

ಲಕ್ಷಾಂತರ ಜನರ ರೀತಿ ನಿರ್ಮಾಪಕ ಕೆ. ಮಂಜು ಅವರು ಕೂಡ ವಿಷ್ಣುವರ್ಧನ್ ಅಭಿಮಾನಿ. ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ವಿಷ್ಣು ಸಮಾಧಿ ಇತ್ತೀಚೆಗೆ ನೆಲಸಮ ಆಗಿದ್ದಕ್ಕೆ ಕೆ. ಮಂಜು ಅವರಿಗೂ ನೋವಾಗಿದೆ. ಹೇಗಾದರೂ ಮಾಡಿ ಪುಣ್ಯಭೂಮಿ ಸ್ಥಳವನ್ನು ಉಳಿಸಿಕೊಳ್ಳಬೇಕು ಎಂದು ಅಭಿಮಾನಿಗಳು ಪ್ರಯತ್ನಿಸುತ್ತಿದ್ದಾರೆ.

ನಿರ್ಮಾಪಕ ಕೆ. ಮಂಜು ಅವರು ವಿಷ್ಣುವರ್ಧನ್ ಅಭಿಮಾನಿ. ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ವಿಷ್ಣು ಸಮಾಧಿ (Vishnuvardhan Samadhi) ನೆಲಸಮ ಆಗಿದ್ದಕ್ಕೆ ಕೆ. ಮಂಜು ಅವರಿಗೂ ನೋವಾಗಿದೆ. ಹೇಗಾದರೂ ಮಾಡಿ ಪುಣ್ಯಭೂಮಿ ಸ್ಥಳವನ್ನು ಉಳಿಸಿಕೊಳ್ಳಬೇಕು ಎಂದು ಅಭಿಮಾನಿಗಳು ಪ್ರಯತ್ನಿಸುತ್ತಿದ್ದಾರೆ. ಅದರ ಸಲುವಾಗಿ ಕೆ. ಮಂಜು ಅವರು ಬಾಲಣ್ಣ ಕುಟುಂಬದ ಸದಸ್ಯರ ಜೊತೆ ಮಾತನಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಆ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಏನೆಲ್ಲ ಮಾತುಕಥೆ ನಡೆದಿದೆ? ಮುಂದಿನ ನಡೆ ಏನು ಎಂಬುದನ್ನು ಕೆ. ಮಂಜು (K Manju) ವಿವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.