ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ನಿವಾಸಿಗಳಿಗೆ ನಟ ಅನಿರುದ್ಧ್ ಪ್ರಶ್ನೆ

Updated on: Apr 23, 2025 | 9:47 PM

ಕನ್ನಡ ಸಿನಿಮಾ ಹಾಗೂ ಕಿರುತೆರೆಯಲ್ಲಿ ಹೆಸರು ಮಾಡಿರುವ ಖ್ಯಾತ ನಟ ಅನಿರುದ್ಧ್ ಜತ್ಕರ್ ಅವರು ಪಹಲ್ಗಾಮ್ ಹತ್ಯಾಕಾಂಡದ ಬಗ್ಗೆ ಮಾತನಾಡಿದ್ದಾರೆ. ಉಗ್ರರ ದಾಳಿಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ. ‘ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು, ಭಿನ್ನಮತದಿಂದಲೂ, ಹಿಂಸೆಯಿಂದಲೂ ಬೇರ್ಪಡಿಸಿಕೊಳ್ಳಬಾರದು’ ಎಂದು ಅನಿರುದ್ಧ್ ಜತ್ಕರ್ ಅವರು ಹೇಳಿದ್ದಾರೆ.

ಪಹಲ್ಗಾಮ್ ಉಗ್ರರ ದಾಳಿ (Pahalgam Terror Attack) ಬಗ್ಗೆ ಕನ್ನಡದ ನಟ ಅನಿರುದ್ಧ್ ಜತ್ಕರ್ ಅವರು ಮಾತನಾಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ‘ಇತ್ತೀಚಿನ ಉಗ್ರರ ದಾಳಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ವಸುಧೈವ ಕುಟುಂಬಕಂ, ಅಂದರೆ ಜಗತ್ತು ಒಂದು ಕುಟುಂಬ. ಈ ಸತ್ಯವನ್ನು ಇನ್ನೂ ಕೆಲವರು ಅರ್ಥ ಮಾಡಿಕೊಳ್ಳದಿರುವುದು ದುಃಖಕರವಾಗಿದೆ. ನಿಜವಾದ ಧೈರ್ಯ ಅವರಲ್ಲಿ ಇದ್ದರೆ, ನಿರಪರಾಧ, ನಿಷ್ಶಸ್ತ್ರ ನಾಗರಿಕರ ಹತ್ಯೆ ಮಾಡುವ ಬದಲು ಅವರು ಸಮರಭೂಮಿಗೆ ಬರಲಿ. ಭಾರತ ಸರ್ಕಾರ ಶೀಘ್ರದಲ್ಲೇ ಈ ದಾಳಿಕೋರರನ್ನು ಬಂಧಿಸಿ, ಅವರಿಗೂ ಅವರ ಆಲೋಚನೆಗೂ ಪಾಠ ಕಲಿಸಲಿ. ಕಾಶ್ಮೀರದ ಬಂಧುಗಳಲ್ಲಿ ನಾನು ಕೆಲವು ಪ್ರಶ್ನೆ ಕೇಳುತ್ತೇನೆ. ಅತ್ಯಂತ ಸುಂದರವಾದ ಕಾಶ್ಮೀರಕ್ಕೆ ಉಗ್ರರು ಹೇಗೆ ಪ್ರವೇಶ ಮಾಡಿದರು? ಅವರಿಗೆ ಯಾರ ಬೆಂಬಲ ಇದೆ? ಈಗ 1 ಲಕ್ಷಕ್ಕೂ ಅಧಿಕ ಜನರು ಕಾಶ್ಮೀರದ ಪ್ರವಾಸ ರದ್ದು ಮಾಡಿದ್ದಾರೆ. ಇದರಿಂದ ಯಾರಿಗೆ ನಷ್ಟ? ದಯವಿಟ್ಟು ಅರ್ಥ ಮಾಡಿಕೊಳ್ಳಿ’ ಎಂದು ಅನಿರುದ್ಧ್ (Anirudh Jatkar) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More