‘ಪ್ರಾರ್ಥನೆ ಮಾಡಿದ ಬಳಿಕ ಮೂರೇ ತಿಂಗಳಲ್ಲಿ ಕೊರಗಜ್ಜನ ಪವಾಡ ನಡೆಯಿತು’: ನಟಿ ಮಾಲಾಶ್ರೀ
‘ಇದು ಶಕ್ತಿಶಾಲಿ ದೇವಸ್ಥಾನ ಎಂದು ನನ್ನ ಸ್ನೇಹಿತೆ ಹೇಳಿದ್ದರು. ನಾನು ಇಲ್ಲಿ ಪ್ರಾರ್ಥನೆ ಮಾಡಿ ಹೋದ ಬಳಿಕ ಮೂರೇ ತಿಂಗಳಲ್ಲಿ ಸಾಕಷ್ಟು ಪವಾಡಗಳು ಆಗಿವೆ. ಬಹಳ ಖುಷಿ ಎನಿಸುತ್ತದೆ. ಈ ಜಾಗದಲ್ಲಿ ತುಂಬ ಪಾಸಿಟಿವ್ ಎನರ್ಜಿ ಇದೆ’ ಎಂದು ಮಾಲಾಶ್ರೀ ಹೇಳಿದ್ದಾರೆ.
ಕನ್ನಡ ಚಿತ್ರರಂಗದ (Sandalwood) ಖ್ಯಾತ ನಟಿ ಮಾಲಾಶ್ರೀ ಅವರು ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಇಂದು (ಆಗಸ್ಟ್ 10) ಭೇಟಿ ನೀಡಿದ್ದಾರೆ. ಪುತ್ರಿ ಅನನ್ಯಾ ಮತ್ತು ಸ್ನೇಹಿತರ ಜೊತೆಗೆ ಬಂದು ಅವರು ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಅವರು ಕೊರಗಜ್ಜ (Koragajja) ದೈವದ ಬಗ್ಗೆ ಮಾತನಾಡಿದ್ದಾರೆ. ‘ಇದು ಶಕ್ತಿಶಾಲಿ ದೇವಸ್ಥಾನ ಎಂದು ನನ್ನ ಸ್ನೇಹಿತೆ ಹೇಳಿದ್ದರು. ನಾನು ಇಲ್ಲಿ ಪ್ರಾರ್ಥನೆ ಮಾಡಿ ಹೋದ ಬಳಿಕ ಮೂರೇ ತಿಂಗಳಲ್ಲಿ ಸಾಕಷ್ಟು ಪವಾಡಗಳು ಆಗಿವೆ. ತುಂಬ ಖುಷಿ ಎನಿಸುತ್ತದೆ. ಈ ಜಾಗದಲ್ಲಿ ಬಹಳ ಪಾಸಿಟಿವ್ ಎನರ್ಜಿ ಇದೆ. ದೇವಸ್ಥಾನದ ಒಳಗೆ ಹೋದಾಗ ಆ ಫೀಲ್ ಬರುತ್ತದೆ. ಇಲ್ಲಿಗೆ ಮತ್ತೆ ಮತ್ತೆ ಬರುತ್ತೇನೆ’ ಎಂದು ಮಾಲಾಶ್ರೀ (Malashree) ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us