ಬಾಲಿವುಡ್ ದಿಗ್ಗಜರ ಎದುರು ವಿಷ್ಣುವರ್ಧನ್ ಹಾಡು ಹಾಡಿದ ಜಯರಾಮ್

Edited By:

Updated on: Oct 12, 2025 | 10:31 AM

Jayaram Sing Kannada Song: ಜಯರಾಮ್ ಅವರು ಕನ್ನಡದಲ್ಲಿ ಕಾಂತಾರ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ವಿಷ್ಣುವರ್ಧನ್ ಹಾಡನ್ನು ಹಾಡಿದ್ದಾರೆ. ಈ ಹಾಡು ಗಮನ ಸೆಳೆಯುವ ರೀತಿಯಲ್ಲಿ ಇದೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ ಅನ್ನೋದು ವಿಶೇಷ.

ವಿಷ್ಣುವರ್ಧನ್ ನಟಿಸಿದ ‘ಬಂಧನ’ ಸಿನಿಮಾದ ‘ನೂರೊಂದು ನೆನಪು..’ ಹಾಡು ಕಲ್ಟ್ ಕ್ಲಾಸಿಕ್ ಎನ್ನಬಹುದು. ಈ ಸಿನಿಮಾದ ಹಾಡನ್ನು ‘ಕಾಂತಾರ: ಚಾಪ್ಟರ್ 1’ ಚಿತ್ರದ ಕಲಾವಿದ ಜಯರಾಮ್ ಅವರು ಹಾಡಿದ್ದಾರೆ. ಅದೂ ಕನ್ನಡಿಗರ ಎದುರು ಅಲ್ಲ, ಬಾಲಿವುಡ್ ದಿಗ್ಗಜರಾದ ಅಜಯ್ ದೇವಗನ್, ಅಕ್ಷಯ್ ಕುಮಾರ್, ಟಬು ಮೊದಲಾದವರ ಎದುರು ಈ ಹಾಡನ್ನು ಹಾಡಿದ್ದಾರೆ. ಪ್ರೀತಿ ತೋರಿದ ಕರ್ನಾಟಕದ ಮಂದಿಗೆ ಅವರು ಧನ್ಯವಾದ ಹೇಳಿದ್ದನ್ನು ಕಾಣಬಹುದು.  ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More