ಕಾರ ಹುಣ್ಣಿಮೆ: ಜನರ ಮೇಲೆರಗಿದ ಹೋರಿ, ಕಾಲಡಿ ಸಿಲುಕಿದ ಮೂವರು ವೃದ್ದರು

Updated on: Jun 05, 2023 | 4:28 PM

ರಸ್ತೆ ಅಕ್ಕಪಕ್ಕ ಜನರ ಜೊತೆ ನಿಂತು ಹೋರಿ ಓಟ ವೀಕ್ಷಿಸುತ್ತಿದ್ದಾಗ ಒಮ್ಮೆಲೆ ಹೋರಿ ಜನರ ಮೇಲೆರಗಿದೆ. ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳಾಗಿಲ್ಲ.

ಬಾಗಲಕೋಟೆ: ಕಾರ ಹುಣ್ಣಿಮೆ (Kara Hunnime) ಯನ್ನು ಅನ್ನದಾತನ ಮೊದಲ ಹಬ್ಬ ಎಂದು ಕರೆಯುತ್ತಾರೆ. ರೈತಾಪಿ ಜನರು ತಮ್ಮ ಹೋರಿಗಳನ್ನು ಬಣ್ಣಗಳಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಜತೆಗೆ ಕರಿ ಹರಿಯಲು ಹೋರಿಗಳನ್ನು ಓಡಿಸುವ ಆಚರಣೆ ಕೂಡ ಇದೆ. ಈ ಕರಿ ಹರಿಯುವ ಸ್ಪರ್ಧೆಯಲ್ಲಿ ಕೆಲ ಅನಾಹುತಗಳು ಆಗುವುದುಂಟು. ಸದ್ಯ ಅಂತಹದ್ದೇ ಘಟನೆಯೊಂದು ಜಿಲ್ಲೆ ಮಹಾಲಿಂಗಪುರ ಪಟ್ಟಣದ ನಡುಚೌಕಿ ಬಳಿ ನಡೆದಿದೆ. ಹೋರಿ ಓಡಿಸುವ ವೇಳೆ ಜನರ ಮೇಲೆ ನುಗ್ಗಿದ್ದು, ಮೂವರು ವೃದ್ದರು ಹೋರಿಯ ಕಾಲ್ತುಳಿತಕ್ಕೆ ಒಳಗಾಗಿದ್ದಾರೆ. ರಸ್ತೆ ಅಕ್ಕಪಕ್ಕ ಜನರ ಜೊತೆ ನಿಂತು ಹೋರಿ ಓಟ ವೀಕ್ಷಿಸುತ್ತಿದ್ದಾಗ ಒಮ್ಮೆಲೆ ಹೋರಿ ಜನರ ಮೇಲೆರಗಿದೆ. ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳಾಗಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More