ಕಾರ ಹುಣ್ಣಿಮೆ ಕರಕೊಂಡು ಬಂತು, ಹೋಳಿ ಹುಣ್ಣಿಮೆ ಹೊಯ್ಕೊಂಡು ಹೋಯ್ತು ಎಂದು ಉತ್ತರ
ಕರ್ನಾಟಕದಲ್ಲಿ ಜನಪದರಾಡುವ ಮಾತು. ಮಳೆಗಾಲದ ಆರಂಭದ ಸೂಚನೆಯೂ ಈ ವೇಳೆ ಸಿಗುತ್ತದೆ.
1 / 5
ರಾಜ್ಯದಲ್ಲಿ ಇಂದು ಕಾರಹುಣ್ಣಿಮೆ ಹಬ್ಬ. ಈ ಹಿನ್ನೆಲೆ ರೈತಾಪಿ ಜನರು ಎತ್ತುಗಳನ್ನು ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ.
2 / 5
ಕಲಬುರಗಿ ಜಿಲ್ಲೆಯಲ್ಲಿ ಕಾರ ಹುಣ್ಣಿಮೆ ಅಂಗವಾಗಿ ಗ್ರಾಮಸ್ಥರು ಎತ್ತಿನ ಬಂಡಿ ಸ್ಪರ್ಧೆ ಆಯೋಜಿಸಿದ್ದರು.
ಆ ಮೂಲಕ ರೈತರು ಹಬ್ಬ ಆಚರಿಸಿ ಸಂಭ್ರಮಿಸಿದರು.
3 / 5
ಇತ್ತ ವಿಜಯಪುರ ಜಿಲ್ಲೆಯಲ್ಲಿಯೂ ಕಾರ ಹುಣ್ಣಿಮೆ ಹಬ್ಬವನ್ನು ಆಚರಣೆ ಮಾಡಲಾಗಿದೆ. ಎತ್ತಿನ ಬಂಡಿ ಸ್ಪರ್ಧೆಯಲ್ಲಿ
ಬಂಡಿ ಹೋಗಿ ವಾಪಸ್ ಬರುವವರೆಗೂ ಸುರಕ್ಷಿತವಾಗಿ ಬರಬೇಕೆಂಬ ನಿಮಯವಿದ್ದು, ಏನಾದರೂ
ಅವಘಡವಾದರೆ ಅಶುಭ ಘಟನೆಗಳು ನಡೆಯುತ್ತವೆ ಎಂಬ ನಂಬಿಕೆ ಇದೆ,
4 / 5
ಕಾರ ಹುಣ್ಣಿಮೆ ಹಬ್ಬದಂದು ಎತ್ತಿನ ಬಂಡಿ ಸ್ಪರ್ಧೆ ಮಾಡುವುದು ಕಳೆದ ನೂರಾರು
ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ.