Karnataka Assembly Polls; ಜನ ನೀಡಿದ ತೀರ್ಪನ್ನು ಸ್ವೀಕರಿಸದಿದ್ದರೆ ಹುಚ್ಚುತನ ಅನಿಸಿಕೊಳ್ಳುತ್ತದೆ: ವಿ ಸೋಮಣ್ಣ

ಅರುಣ್​ ಕುಮಾರ್​ ಬೆಳ್ಳಿ

Updated on: May 14, 2023 | 12:13 PM

ತಮ್ಮ ಮಗನನ್ನೇ ಉತ್ತರಾಧಿಕಾರಿ ಮಾಡುವ ಮನಸ್ಸಿದೆ, ತನಗೆ ಈ ಬಾರಿ ಟಿಕೆಟ್ ಬೇಡ, ಮಗನಿಗೆ ನೀಡಿ ಅಂತ ಹೈಕಮಾಂಡ್ ಗೆ ಆಗ್ರಹಿಸಿದರೂ ಕೇಳಲಿಲ್ಲ ಎಂದು ಸೋಮಣ್ಣ ಹೇಳಿದರು.

ಬೆಂಗಳೂರು: ಹೈಕಮಾಂಡ್ (high command) ಮಾತಿಗೆ ಕಟ್ಟುಬಿದ್ದು ಎರಡೆರಡು ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡೂ ಕಡೆ ಸೋತ ವಿ ಸೋಮಣ್ಣ (V Somanna) ಜನರ ತೀರ್ಪನ್ನು ಅಂಗೀಕರಿಸಿದ್ದಾರಾದರೂ ಬಹಳ ಬೇಸರ ಮಾಡಿಕೊಂಡಿರುವುದಂತೂ ಸತ್ಯ. ಪರಿಶ್ರಮಜೀವಿ ಮತ್ತು ಕೆಲಸಗಾರನಾಗಿದ್ದ ತನ್ನನ್ನು ಜನ ನಿರುದ್ಯೋಗಿಯನ್ನಾಗಿ (jobless) ಮಾಡಿದ್ದಾರೆ ಎಂದು ವಿಷಾದಭರಿತ ಧ್ವನಿಯಲ್ಲಿ ಅವರು ಹೇಳುತ್ತಾರೆ. ಬೆಳಗ್ಗೆ 4 ಗಂಟೆಗೆ ಏಳುವ ಅಭ್ಯಾಸವಿರುವ ತನಗೆ ಈಗ ಎದ್ದು ಏನು ಮಾಡೋದು ಅನ್ನುವಂತಾಗಿದೆ ಎಂದು ಹೇಳಿದ ಸೋಮಣ್ಣ, ತಮ್ಮ ಮಗನನ್ನೇ ಉತ್ತರಾಧಿಕಾರಿ ಮಾಡುವ ಮನಸ್ಸಿದೆ, ತನಗೆ ಈ ಬಾರಿ ಟಿಕೆಟ್ ಬೇಡ, ಮಗನಿಗೆ ನೀಡಿ ಅಂತ ಹೈಕಮಾಂಡ್ ಗೆ ಆಗ್ರಹಿಸಿದರೂ ಕೇಳಲಿಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.